Just In
Don't Miss!
- Finance
Gold, Silver Rate: ಪ್ರಮುಖ ನಗರಗಳಲ್ಲಿ ಜ. 20ರ ಚಿನ್ನ, ಬೆಳ್ಳಿ ದರ
- Sports
ಐಪಿಎಲ್ 2021: ಡೆಲ್ಲಿ ಕ್ಯಾಪಿಟಲ್ಸ್ ಉಳಿಸಿಕೊಂಡ, ಬಿಟ್ಟುಕೊಟ್ಟ ಆಟಗಾರರ ಪಟ್ಟಿ
- News
ಅಧಿಕಾರಕ್ಕೆ ಬರುತ್ತಿದ್ದಂತೆಯೇ ಬೈಡನ್ ನೀಡಲಿರುವ ಆದೇಶಗಳಿವು
- Lifestyle
ಕೋವಿಡ್ 19 ಲಸಿಕೆಯ ಅಡ್ಡಪರಿಣಾಮದಿಂದ ಸಾವು ಸಂಭವಿಸಲ್ಲ: ಏಮ್ಸ್ ನಿರ್ದೇಶಕ
- Automobiles
ಭಾರೀ ಗಾತ್ರದ ಎಸ್ಯುವಿಯನ್ನು ಬಾಯಿಂದ ಹಿಂದಕ್ಕೆಳೆದ ಹುಲಿ
- Education
UAS Dharwad Recruitment 2021: ರಿಸರ್ಚ್ ಅಸೋಸಿಯೇಟ್ ಹುದ್ದೆಗೆ ಜ.28ಕ್ಕೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
'ಪುಷ್ಪ' ಚಿತ್ರದಲ್ಲಿ ಸ್ಟಾರ್ ನಟನ ಜೀವನ ಕಥೆ, ಅನುಮತಿ ಸಹ ಸಿಕ್ಕಿದೆಯಂತೆ!
ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟಿಸುತ್ತಿರುವ ಪುಷ್ಪ ಸಿನಿಮಾ ಸೌತ್ ಇಂಡಿಯಾದಲ್ಲಿ ಭಾರಿ ಸದ್ದು ಮಾಡ್ತಿದೆ. ಅಲ್ಲು ಅರ್ಜುನ್ ಅವರ ಲುಕ್, ಪೋಸ್ಟರ್ ಹಾಗೂ ಮೇಕಿಂಗ್ ಚಿತ್ರಗಳು ಚಿತ್ರಪ್ರೇಮಿಗಳಲ್ಲಿ ಹೆಚ್ಚು ನಿರೀಕ್ಷೆ ಮೂಡಿಸಿದೆ.
ಪುಷ್ಪ ಸಿನಿಮಾದ ಕಥೆ ಬಗ್ಗೆ ಹಲವು ಚರ್ಚೆಗಳು ನಡೆದಿದೆ. ಚಿತ್ರದ ಟೈಟಲ್ ನೋಡಿದ್ಮೇಲೆ ಇದು ಬೆಂಗಳೂರಿನ 'ಕಾಟನ್ ಪೇಟೆ ಪುಷ್ಪ' ಎಂಬ ರೌಡಿ ಶೀಟರ್ ಕಥೆ ಎಂದು ಹೇಳಲಾಯಿತು. ನಂತರ ಆಂಧ್ರದ ವ್ಯಕ್ತಿಯೊಬ್ಬನ ಕಥೆ ಎಂದು ಚರ್ಚೆಯಾಯಿತು. ಇದೀಗ, ಪುಷ್ಪ ಸಿನಿಮಾದಲ್ಲಿ ತೆಲುಗು ಸೂಪರ್ ಸ್ಟಾರ್ ನಟನೊಬ್ಬನ ಜೀವನ ಕಥೆಯೂ ಸೇರಿದೆ ಎಂಬ ವಿಚಾರ ಬಹಿರಂಗವಾಗಿದೆ. ಮುಂದೆ ಓದಿ...

ಪುಷ್ಪ ಕಥೆ ರಿಯಲ್ ಸ್ಟೋರಿ
ಪುಷ್ಪ ಚಿತ್ರಕ್ಕೆ ನಿರ್ದೇಶಕ ಸುಕುಮಾರ್ ಕಥೆ ಮಾಡಿದ್ದಾರೆ. ಸುಕುಮಾರ್ ಸಿನಿಮಾಗಳಲ್ಲಿ ಸಹಜವಾಗಿ ನೈಜತೆಗೆ ಹತ್ತಿರವಿರುತ್ತದೆ. ಸುಕುಮಾರ್ ನಿರ್ದೇಶಿಸಿದ್ದ ಕೊನೆಯ ಚಿತ್ರ ರಂಗಸ್ಥಲಂ ಮೇಕಿಂಗ್ ಹಾಗು ಕಥೆ ವಿಚಾರಕ್ಕೆ ದೊಡ್ಡ ಹಿಟ್ ಆಗಿತ್ತು.
ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಚಿತ್ರದಲ್ಲಿ ಆ ಸ್ಟಾರ್ ನಟ ಇರಲ್ಲ

ಜೂ ಎನ್ಟಿಆರ್ ಕಥೆ ಸೇರಿದೆ!
ಟಾಲಿವುಡ್ನಲ್ಲಿ ಚರ್ಚೆಯಾಗುತ್ತಿರುವ ಲೇಟೆಸ್ಟ್ ವಿಷಯ ಏನಪ್ಪಾ ಅಂದ್ರೆ, ಪುಷ್ಪ ಸಿನಿಮಾದಲ್ಲಿ ಜೂನಿಯರ್ ಎನ್ ಟಿ ಆರ್ ಅವರ ಜೀವನ ಕಥೆ ಸೇರಿದೆಯಂತೆ. ಎನ್ ಟಿ ಆರ್ ಜೀವನದಲ್ಲಿ ನಡೆದಿರುವ ಕೆಲವು ಘಟನೆಗಳನ್ನು ಆಧರಿಸಿ ಪುಷ್ಪ ಸಿನಿಮಾದ ಕಥೆ ಮಾಡಿದ್ದಾರಂತೆ ಸುಕುಮಾರ್. ಈ ವಿಚಾರ ಚರ್ಚೆಯಾಗುತ್ತಿದ್ದಂತೆ ಸಿನಿಮಾದ ಮೇಲಿನ ಕುತೂಹಲ ದೊಡ್ಡಮಟ್ಟದಲ್ಲಿ ಹೆಚ್ಚಾಗಿದೆ.

ಅನುಮತಿ ಪಡೆದು ಕಥೆ ಬರೆದಿದ್ದಾರಂತೆ
ಈ ಹಿಂದೆ ಎನ್ ಟಿ ಆರ್ ಜೊತೆಯಲ್ಲಿ 'ನಾನ್ನತೋ ಪ್ರೇಮತೋ' ಎಂಬ ಸಿನಿಮಾ ಮಾಡಿದ್ದರು. ಈ ಸಿನಿಮಾ ಬಳಿಕ ಸುಕುಮಾರ್ ಮತ್ತು ಯಂಗ್ ಟೈಗರ್ ನಡುವಿನ ಸ್ನೇಹ ಮತ್ತಷ್ಟು ಆತ್ಮೀಯವಾಯಿತು. ಈ ವೇಳೆ ಎನ್ಟಿಆರ್ ಕೆಲವು ಘಟನೆಗಳನ್ನು ಸುಕುಮಾರ್ ಬಳಿ ಹೇಳಿಕೊಂಡಿದ್ದರಂತೆ. ಅದೇ ವಿಚಾರವನ್ನಿಟ್ಟು ಪುಷ್ಪ ಕಥೆ ಮಾಡಿಕೊಂಡಿದ್ದಾರಂತೆ. ಈ ಬಗ್ಗೆ ನಟನ ಬಳಿಯೂ ಅನುಮತಿ ಪಡೆದಿದ್ದಾರೆ ಎನ್ನಲಾಗಿದೆ.
ಅಲ್ಲು ಅರ್ಜುನ್ ನಟನೆಯ 'ಪುಷ್ಪಾ' ಸಿನಿಮಾ ಚಿತ್ರೀಕರಣ ಸ್ಥಗಿತ

ದೊಡ್ಡ ಬಜೆಟ್ನಲ್ಲಿ ಸಿನಿಮಾ
ಅಲ್ಲು ಅರ್ಜುನ್ ನಾಯಕನಾಗಿ ನಟಿಸುತ್ತಿರುವ ಪುಷ್ಪ ಸಿನಿಮಾ ಸುಮಾರು 250 ಕೋಟಿ ಬಜೆಟ್ನಲ್ಲಿ ತಯಾರಾಗುತ್ತಿದೆ. ಈ ಹಿಂದೆಂದೂ ಕಾಣಿಸದ ರೀತಿಯಲ್ಲಿ ಅಲ್ಲು ಅರ್ಜುನ್ ಈ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಪುಷ್ಪ ಸಿನಿಮಾದ ಅರ್ಧದಷ್ಟು ಭಾಗ ಚಿತ್ರೀಕರಣ ಆಗಿದೆ. ನಿಹಾರಿಕಾ ಮದುವೆ ವಿಶೇಷವಾಗಿ ಉದಯ್ಫುರ್ ಹೋಗಿರುವ ಅಲ್ಲು ಅರ್ಜುನ್ ಅಲ್ಲಿಂದ ಬಂದ ನಂತರ ಮತ್ತೆ ಶೂಟಿಂಗ್ ಆರಂಭಿಸಲಿದ್ದಾರೆ.
ಅತಿ ಹೆಚ್ಚು ಹುಡುಕಲ್ಪಟ್ಟ ಸೆಲೆಬ್ರಿಟಿಗಳ ಪಟ್ಟಿಯಲ್ಲಿ ಏಕೈಕ ತೆಲುಗು ನಟ