Don't Miss!
- Lifestyle ಶಾಲೆಯನ್ನೇ ಬ್ಯೂಟಿ ಪಾರ್ಲರ್ ಮಾಡಿಕೊಂಡ ಪ್ರಿನ್ಸಿಪಾಲ್..! ಕೇಳಿದ ಶಿಕ್ಷಕಿ ಕೈ ಕಚ್ಚಿ ಹಲ್ಲೆ..!
- Automobiles ಜಾವಾ ಮೋಟಾರ್ಸೈಕಲ್ ಮಾಲೀಕರಿಗೆ ಸಿಹಿಸುದ್ದಿ: ಈ ಅವಕಾಶ ಕಳೆದುಕೊಳ್ಳಬೇಡಿ!
- Finance ಎಮರ್ಜೆನ್ಸಿ ಲೋನ್ ಅಂದ್ರೆ ಏನು, ಇದನ್ನು ಪಡೆದುಕೊಳ್ಳುವುದು ಹೇಗೆ ? ಇಲ್ಲಿದೆ ನೋಡಿ ಸುಲಭ ಉಪಾಯ
- News Yaduveer Wadiyar: ಬಿಜೆಪಿ ಅಭ್ಯರ್ಥಿ ಯದುವೀರ್ ಒಡೆಯರ್ಗೆ ಶಾಕ್ ಕೊಟ್ಟ ಒಕ್ಕಲಿಗರು!
- Sports ಜೈಪುರ ವ್ಯಾಕ್ಸ್ ಮ್ಯೂಸಿಯಂನಲ್ಲಿ ವಿರಾಟ್ ಕೊಹ್ಲಿ ಮೇಣದ ಪ್ರತಿಮೆ; ದಿಗ್ಗಜರ ಸಾಲಿಗೆ ಸೇರಿದ ಶ್ರೇಷ್ಠ ಬ್ಯಾಟರ್
- Technology ಇಂದು ಸ್ಯಾಮ್ಸಂಗ್ ಗ್ಯಾಲಕ್ಸಿ F15 5G ಫೋನ್ ಸೇಲ್!..ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ರು.100 ಕೋಟಿ ಒಡೆಯನಾದ ಅಂಬಾರಿ ಅರ್ಜುನ್!
ನಿರ್ದೇಶಕ ಎ.ಪಿ.ಅರ್ಜುನ್ ಗೊತ್ತಲ್ಲಾ? ಸ್ಟಾರ್ ಗಳಿಲ್ಲದೇ 'ಅಂಬಾರಿ'ಯಂತಹ ಅಮರ ಪ್ರೇಮಕಾವ್ಯಯನ್ನು ತೆರೆಮೇಲೆ ಕಲಾತ್ಮಕವಾಗಿ ತೋರಿಸಿ ಸೈ ಎನಿಸಿಕೊಂಡಿದ್ದ ನಿರ್ದೇಶಕ.
ಸರ್ಜಾ ಕುಟುಂಬದ ಕುಡಿ ಧ್ರುವ ಸರ್ಜಾರನ್ನ 'ಅದ್ದೂರಿ'ಯಾಗಿ ಸ್ಯಾಂಡಲ್ ವುಡ್ ಗೆ ಪರಿಚಯಿಸಿದ್ದೂ ಇದೇ ಅರ್ಜುನ್. ಇದೀಗ ಹೊಸ ಮುಖಗಳೊಂದಿಗೆ 'ರಾಟೆ' ಸಿನಿಮಾ ಮಾಡುತ್ತಿರುವ ಅರ್ಜುನ್, ಬಹುಬೇಗ ಚಾಲೆಂಜಿಂಗ್ ಸ್ಟಾರ್ ಕಾಲ್ ಶೀಟ್ ಹಿಡಿದು 'ಐರಾವತ' ಏರಿದ್ದಾರೆ. [ಹುಟ್ಟುಹಬ್ಬದ ದಿನ ಐರಾವತ ಏರಲಿರುವ ದರ್ಶನ್]
ದಿನಗಳೆದಂತೆ ಅದೃಷ್ಟ ಖುಲಾಯಿಸುತ್ತಿರುವ ಎ.ಪಿ.ಅರ್ಜುನ್ ಈಗ ನೂರು ಕೋಟಿ ಒಡೆಯ! ಹಾಗಂತ ನಾವು ಹೇಳ್ತಿಲ್ಲ. ಅರ್ಜುನ್ ಕ್ಲಿಕ್ ಮಾಡಿಸಿಕೊಂಡಿರುವ ಈ ಫೋಟೋನೇ ಸಾರಿ ಸಾರಿ ಹೇಳ್ತಿದೆ, ಬೇಕಾದ್ರೆ ನೀವೇ ನೋಡಿ.
ರು. 1000 ನೋಟುಗಳಿರುವ ಕಂತೆಗಳ ಮುಂದೆ ಕೂತು ಅರ್ಜುನ್ ಸ್ಟೈಲಿಶ್ ಆಗಿ ಪೋಸ್ ನೀಡಿದ್ದಾರೆ. ಒಮ್ಮೆಲೆ ಈ ಫೋಟೋವನ್ನ ನೋಡಿದವರು, ಅಬ್ಬಾ! ಇಷ್ಟೊಂದು ದುಡ್ಡಾ!? ಅಂತ ಕಣ್ಣರಳಿಸುವುದು ಸಹಜ.
ಹಾಗೆ
ನೋಡಿದರೆ,
ಅರ್ಜುನ್
ಗಿಂತ
ದುಡ್ಡೇ
ಹೈಲೈಟ್
ಆಗಿರುವ
ಈ
ಫೋಟೋದಲ್ಲಿ
ಅಂದಾಜು
ಎಷ್ಟು
ದುಡ್ಡಿರಬಹುದು?
ಅಂದ್ರೆ
ಅರ್ಜುನ್
ಕೊಟ್ಟ
ಉತ್ತರ
ಬರೋಬ್ಬರಿ
ರು.
100
ಕೋಟಿ!
ಕಡೆಗೂ
ಅರ್ಜುನ್
ಹೊಡೆದ್ರಲ್ಲಾ
ಚಾನ್ಸು!
ಅಂತ
ಹೇಳುವ
ಮುನ್ನ
ಅದರ
ಹಿಂದಿದ್ದ
ರೀಲ್
ಕಹಾನಿಯನ್ನ
'ಫಿಲ್ಮಿಬೀಟ್
ಕನ್ನಡ'
ಗೆ
ಅರ್ಜುನ್
ಬಿಚ್ಚಿಟ್ಟರು.
ಪೋಟೋದಲ್ಲಿ ಕಾಣುವು 1000 ರೂಪಾಯಿ ನೋಟುಗಳು ಅಸಲಿಯಲ್ಲ, ನಕಲಿ! ಐರಾವತ ಸಿನಿಮಾಗಾಗಿ ಇಷ್ಟು ದೊಡ್ಡ ಮೊತ್ತದ ನಕಲಿ ನೋಟುಗಳನ್ನು ಪ್ರಿಂಟ್ ಮಾಡಿಸಲಾಗಿದ್ಯಂತೆ. ''ಐರಾವತ ಚಿತ್ರದ ಬಹುಮುಖ್ಯ ಸೀನ್ ಇದು. ಚಿತ್ರಕ್ಕೆ ದೊಡ್ಡ ತಿರುವು ಸಿಗುವುದೇ ಈ ಹಣದಿಂದ. ಇದಕ್ಕಾಗಿ, ಕೋಟಿಗಟ್ಟಲೆ ನಕಲಿ ನೋಟುಗಳನ್ನ ಪ್ರಿಂಟ್ ಮಾಡಿಸಿ ಮೈಸೂರಿನಲ್ಲೂ ಶೂಟ್ ಮಾಡಿದ್ದೀವಿ ಅಂತ 'ಫಿಲ್ಮಿಬೀಟ್ ಕನ್ನಡ'ಗೆ ಅರ್ಜುನ್ ತಿಳಿಸಿದರು. [ದರ್ಶನ್ ಚಿತ್ರದಲ್ಲಿ ಪ್ರಕಾಶ್ ರೈಗೆ ಚಾಲೆಂಜಿಂಗ್ ಪಾತ್ರ]
ಈ ಬಗ್ಗೆ ಫೇಸ್ ಬುಕ್ ನಲ್ಲಿ ''ದುಡ್ಡಿನಿಂದ ಯಶಸ್ಸು ಸಿಗುವುದಿಲ್ಲ'' ಅಂತ ಸ್ಟೇಟಸ್ ಕೂಡ ಹಾಕಿಕೊಂಡಿದ್ದಾರೆ ಅರ್ಜುನ್. ಚಾಲೆಂಜಿಂಗ್ ಸ್ಟಾರ್ ಖಾಕಿ ಧರಿಸಿ 'ಐರಾವತ' ಚಿತ್ರದಲ್ಲಿ ಮಿಂಚಲಿದ್ದಾರೆ. ಸಮಾಜದಲ್ಲಿನ ಅವ್ಯವಸ್ಥೆಯ ವಿರುದ್ಧ ಹೋರಾಡೋ ದಕ್ಷ ಪೊಲೀಸ್ ಅಧಿಕಾರಿಯ ಪಾತ್ರ ದರ್ಶನ್ ರದ್ದು. ಇಂತದ್ರಲ್ಲಿ ಕೋಟಿ ಕೋಟಿ ಕಂತೆಗಳ ಮ್ಯಾಟರ್ ಇದೆ ಅಂದ್ರೆ, ಅದು ಬ್ಲಾಕ್ ಮನಿಯೋ, ಇಲ್ಲಾ ಸ್ವಿಜ್ ಬ್ಯಾಂಕ್ ನದ್ದೋ ಅನ್ನೋದನ್ನ ಅರ್ಜುನ್ ಬಿಟ್ಟುಕೊಡಲಿಲ್ಲ. [ನಿನ್ನಿಂದಲೇ ಚಿತ್ರದ ನಾಯಕಿ ದರ್ಶನ್ ಚಿತ್ರದಿಂದ ಔಟ್]