Don't Miss!
- News ರಾತ್ರೋ ರಾತ್ರಿ ಪತ್ರಿಕಾಗೋಷ್ಠಿ ನಡೆಸಿ ವಿ.ಶ್ರೀನಿವಾಸ ಪ್ರಸಾದ್ ಅಳಿಯ ಏನು ಹೇಳಿದ್ರು ಗೊತ್ತಾ?
- Sports IPL 2024: ಮುಂಬೈ ಇಂಡಿಯನ್ಸ್ ತಂಡ ಸೇರಿದ ಮಾಜಿ ನಾಯಕ: ಹಾಲಿ ನಾಯಕನ ಆತಂಕ ದೂರ
- Lifestyle ಫ್ಲ್ಯಾಟ್ನಲ್ಲಿ ವಾಸಿಸಲು ಹೋಗುವಾಗ ಸಮೃದ್ಧಿ, ಆರೋಗ್ಯಕ್ಕಾಗಿ ವಾಸ್ತು ಹೀಗಿದೆಯೇ ಎಂದು ನೋಡಬೇಕು
- Technology ಮಾರುಕಟ್ಟೆಗೆ ಎಂಟ್ರಿ ಕೊಟ್ಟ ಇನ್ಫಿನಿಕ್ಸ್ ನೋಟ್ 40 ಪ್ರೊ ಪ್ಲಸ್ 5G ಫೋನ್: ಫೀಚರ್ಸ್ ಹೇಗಿದೆ?
- Automobiles ಡಿ ಬಾಸ್ ಪತ್ನಿ ಖರೀದಿಸಿದ್ದು ಸಾಮಾನ್ಯ ಕಾರಲ್ಲ: ಬಂಗಲೆಯಂತಹ ಇಂಟೀರಿಯರ್!
- Finance ಭಾರತದಲ್ಲಿ ಚಿನ್ನದ ಬೆಲೆ ಇಳಿಕೆ, ನಿಮ್ಮ ನಗರದಲ್ಲಿ 24 ಕ್ಯಾರೆಟ್ ಚಿನ್ನದ ದರ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪುರಿ ಜಗನ್ನಾಥ್ ಆಕ್ಷನ್ ಕಟ್ ನಲ್ಲಿ ಎಚ್ಡಿಕೆ ಪುತ್ರ ನಿಖಿಲ್
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಗೌಡ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಡುತ್ತಿದ್ದಾರೆ. ಟಾಲಿವುಡ್ ನ ಖ್ಯಾತ ನಿರ್ದೇಶಕ ರಾಜಮೌಳಿ ನಿಖಿಲ್ ಗೌಡಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ!
ಇದು ಬರೀ ಅಂತೆ ಕಂತೆಯ ಪುರಾಣವೋ, ಇಲ್ಲ ನಿಜವಾಗಿಯೂ ಪ್ರಯತ್ನ ನಡೆಯುತ್ತಿದೆಯೋ ಗೊತ್ತಿಲ್ಲ. ಆದ್ರೆ, ಗಾಂಧಿನಗರದಲ್ಲಿ ಓಡಾಡುತ್ತಿದ್ದ ಸುದ್ದಿಯನ್ನ ಇದ್ದ ಹಾಗೆ ನಿಮ್ಮ 'ಫಿಲ್ಮಿಬೀಟ್ ಕನ್ನಡ' ಕೆಲ ದಿನಗಳ ಹಿಂದೆ ಪ್ರಕಟಿಸಿತ್ತು.
ಇದೀಗ ಇದೇ ಸುದ್ದಿಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ನಿಖಿಲ್ ಗೌಡ ಹೀರೋ ಆಗುವುದಕ್ಕೆ ಸಜ್ಜಾಗುತ್ತಿರುವುದು ನಿಜ. ಆದ್ರೆ, ರಾಜಮೌಳಿ ಬದಲು ನಿಖಿಲ್ ಆರಂಗೇಟ್ರಂಗೆ ಸಾರಥ್ಯ ವಹಿಸುವವರು ಟಾಲಿವುಡ್ ನಿರ್ದೇಶಕ ಪುರಿ ಜಗನ್ನಾಥ್ .! [ರಾಜಮೌಳಿ ಆಕ್ಷನ್ ಕಟ್ ನಲ್ಲಿ ಎಚ್ಡಿಕೆ ಪುತ್ರ ನಿಖಿಲ್?]
ಹಾಗಂತ, ಗಾಂಧಿನಗರದಲ್ಲಿ ಹೊಸ ಗುಲ್ಲೆದ್ದಿದೆ. ಸದ್ಯಕ್ಕೆ ರಾಜಮೌಳಿ 'ಬಾಹುಬಲಿ' ಚಿತ್ರದಲ್ಲಿ ಬಿಜಿಯಿರುವ ಕಾರಣ, ಪುರಿ ಜಗನ್ನಾಥ್ ರನ್ನ ಕನ್ನಡಕ್ಕೆ ಮತ್ತೆ ಕರೆತರುವ ಬಗ್ಗೆ ನಿಖಿಲ್ ಗೌಡ ಪ್ಲಾನ್ ಮಾಡಿದ್ದಾರಂತೆ.
ಹಾಗ್ನೋಡಿದ್ರೆ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಚೊಚ್ಚಲ ಚಿತ್ರ 'ಅಪ್ಪು' ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 'ಯುವರಾಜ' ಸಿನಿಮಾಗೆ ಆಕ್ಷನ್ ಕಟ್ ಹೇಳಿರುವುದರಿಂದ, ಪುರಿ ಜಗನ್ನಾಥ್ ಗೆ ಸ್ಯಾಂಡಲ್ ವುಡ್ ಹೊಸದೇನಲ್ಲ.
ಇಲ್ಲಿನ ಮಣ್ಣಿನ ಸೊಗಡು ಪುರಿ ಜಗನ್ನಾಥ್ ಗೆ ಚೆನ್ನಾಗಿ ಗೊತ್ತಿರುವುದರಿಂದ ತಮ್ಮ ಮೊದಲ ಚಿತ್ರಕ್ಕೆ ಅವರೇ ಸೂಕ್ತ ಅಂತ ಡಿಸೈಡ್ ಮಾಡಿದ್ದಾರಂತೆ ನಿಖಿಲ್. ಆದ್ರಿನ್ನೂ ಮಾತುಕತೆ ಹಂತದವರೆಗೆ ಹೋಗಿಲ್ಲ. ಮೊದಲ ಚಿತ್ರ ರೀಮೇಕೋ, ಇಲ್ಲ ಸ್ವಮೇಕೋ ಅನ್ನೋದು ನಿರ್ದೇಶಕರು ನಿಗಧಿಯಾದಮೇಲೆ ನಿರ್ಧಾರವಾಗಲಿದೆ.
ಅತ್ತ 'ಟೆಂಪರ್' ಆದ್ಮೇಲೆ ಒಳ್ಳೆ ಪ್ರಾಜೆಕ್ಟ್ ಗೆ ಕೈಹಾಕಬೇಕಂತಿರುವ ಪುರಿ, ನಿಖಿಲ್ ಆಸೆಯನ್ನ ನೆರವೇರಿಸೋಕೆ ಮನಸ್ಸು ಮಾಡಿದರೆ ಮತ್ತೆ ಬೆಂಗಳೂರಿನ ಕಡೆ ಮುಖ ಮಾಡುತ್ತಾರೆ.