Don't Miss!
- News Toilet Photo Viral: ಕಡಿಮೆ ಖರ್ಚಿನಲ್ಲಿ 'ಲೀಕೆಜ್ ಟ್ಯಾಂಕರ್'ನಿಂದ ಟಾಯ್ಲೆಟ್ ನಿರ್ಮಾಣ: ನೀವೂ ಟ್ರೈ ಮಾಡಿ
- Sports IPL 2024: ಹೈದರಾಬಾದ್-ಡೆಲ್ಲಿ ನಡುವೆ ಮೆಗಾ ಫೈಟ್; ಟಾಸ್, ಆಡುವ 11ರ ಬಳಗದ ವರದಿ
- Automobiles ಭಾರತದಲ್ಲಿ 80 ಲಕ್ಷ ಸ್ಕೂಟರ್ ಮಾರಿದ ಜಪಾನ್ ಕಂಪನಿ: ವಿಶ್ವಗುರು ಭಾರತದಲ್ಲಿ ಎಲ್ಲವೂ ಸಾಧ್ಯ!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪವಿತ್ರಾ ಲೋಕೇಶ್ ಜೊತೆ ಮೈಸೂರಿನ ಹೋಟೆಲ್ನಲ್ಲಿರುವ ವಿಷಯ ಪತ್ನಿಗೆ ತಿಳಿಸಿದ್ದೇ ನರೇಶ್: ಕಥೆಯಲ್ಲಿ ಟ್ವಿಸ್ಟ್?
ತೆಲುಗು ನಟ ನರೇಶ್ ಹಾಗೂ ಪವಿತ್ರ ಲೋಕೇಶ್ ಇಬ್ಬರ ಸಂಬಂಧದ ಈಗ ಗುಟ್ಟಾಗಿ ಉಳಿದಿಲ್ಲ. ನರೇಶ್ ಮೂರನೇ ಪತ್ನಿ ರಮ್ಯಾ ರಘುಪತಿ ಬೀದಿಗಿಳಿದು ಹೋರಾಟ ಶುರು ಮಾಡಿದ ಮೇಲೆ ಮೂವರ ಕಿತ್ತಾಟ ಜಗತ್ಜಾಹೀರಾಗಿದೆ. ನರೇಶ್ ಹಾಗೂ ಪವಿತ್ರಾ ಲೋಕೇಶ್ ಇಬ್ಬರೂ ಲಿವ್ ಇನ್ ರಿಲೇಷನ್ಶಿಪ್ನಲ್ಲಿದ್ದಾರೆಂದು ರಮ್ಯಾ ಆರೋಪ ಮಾಡಿದ್ದರು. ಈ ಬೆನ್ನಲ್ಲೇ ಇಬ್ಬರೂ ಮೈಸೂರಿನ ಹೋಟೆಲ್ನಲ್ಲಿ ರಮ್ಯಾ ರಘುಪತಿ ಕೈಯಲ್ಲೇ ಸಿಕ್ಕಿಬಿದ್ದಿದ್ದರು.
ಮೈಸೂರಿನ ಹೋಟೆಲ್ವೊಂದರಲ್ಲಿ ನರೇಶ್ ಹಾಗೂ ಪವಿತ್ರಾ ಲೋಕೇಶ್ ಹೋಗಿದ್ದರು. ಆ ವಿಷಯ ತಿಳಿದ ರಮ್ಯಾ ರಘುಪತಿ ಅಲ್ಲಿಗೆ ಹೋಗಿ ರಂಪಾಟ ಮಾಡಿದ್ದರು. ಹೊಟೇಲ್ ರೂಮಿನ ಮುಂದೆ ಹೈಡ್ರಾಮಾವನ್ನೇ ಸೃಷ್ಟಿಸಿದ್ದರು. ಈ ಘಟನೆ ಬಗ್ಗೆ ಟಾಲಿವುಡ್ನಲ್ಲಿ ಹೊಸ ಚರ್ಚೆ ಆರಂಭ ಆಗಿದೆ.
ರಮ್ಯಾ ಕೈಗೆ ಸಿಕ್ಕಿಬಿದ್ದ ಮೇಲೆ ನರೇಶ್ -ಪವಿತ್ರಾ ಲೋಕೇಶ್ ತೆಗೆದುಕೊಂಡ ಖಡಕ್ ನಿರ್ಧಾರವೇನು?
ಮಾಧ್ಯಮಗಳಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದ್ದ ಈ ಸುದ್ದಿಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ಇದೆಲ್ಲಾ ತೆಲುಗು ನಟ ನರೇಶ್ ಪ್ಲಾನ್ ಆಗಿತ್ತು ಎಂದು ಟಾಲಿವುಡ್ನಲ್ಲಿ ಗುಲ್ಲೆದ್ದಿದೆ. ಅಷ್ಟಕ್ಕೂ ಟಾಲಿವುಡ್ ಮಂದಿ ಕೊಟ್ಟಿರುವ ಆ ಟ್ವಿಸ್ಟ್ ಏನು? ಎಂದು ತಿಳಿಯಲು ಮುಂದೆ ಓದಿ.
ನರೇಶ್ರಿಂದಲೇ ರಮ್ಯಾಗೆ ಮಾಹಿತಿ?
ಮೈಸೂರಿನ ಹೋಟೆಲ್ ಮುಂದೆ ಹೈಡ್ರಾಮ ಸೃಷ್ಟಿಯಾಗಿದ್ದಕ್ಕೆ ಕಾರಣ ತೆಲುಗು ನಟ ನರೇಶ್ ಎಂದು ಮಾಧ್ಯಮಗಳು ವರದಿ ಮಾಡಿವೆ. ತೆಲುಗು ಮಾಧ್ಯಮಗಳಲ್ಲಿ ವರದಿಯಾಗಿರುವ ಪ್ರಕಾರ, ನರೇಶ್ ಉದ್ದೇಶಪೂರ್ವಕವಾಗಿಯೇ ಇಬ್ಬರೂ ಮೈಸೂರಿನ ಹೋಟೆಲ್ನಲ್ಲಿ ಇರುವುದಾಗಿ ಹೇಳಿದ್ದರು. ಮೂರನೇ ಪತ್ನಿ ರಮ್ಯಾ ಅಲ್ಲಿಗೆ ಬಂದು ಪವಿತ್ರಾ ಲೋಕೇಶ್ ಜೊತೆ ಜಗಳ ಆಡುವುದು ಅವರ ಪ್ಲ್ಯಾನ್ ಆಗಿತ್ತು ಎಂದು ವರದಿ ಮಾಡಿವೆ.
ತೆಲುಗು ನಟ ನರೇಶ್ ಒಟ್ಟು ಆಸ್ತಿಯ ಮೌಲ್ಯವೆಷ್ಟು? ಸಿನಿಮಾಗೆ ಪಡೆಯುವ ಸಂಭಾವನೆ ಎಷ್ಟು?
ನರೇಶ್ ಈ ಪ್ಲ್ಯಾನ್ ಮಾಡಿದ್ದೇಕೆ?
ಮೈಸೂರಿನ ಹೋಟೆಲ್ಗೆ ಬಂದು ಪತ್ನಿ ರಮ್ಯಾ ರಘುಪತಿ ರಂಪಾಟ ಮಾಡಿದರೆ. ಆ ವಿಷಯ ಎಲ್ಲರಿಗೂ ತಿಳಿಯುತ್ತೆ. ನರೇಶ್ರಿಂದ ರಮ್ಯಾ ರಘುಪತಿ ಬಹಳ ದಿನಗಳಿಂದ ದೂರವಿದ್ದರೂ, ಕಾನೂನಾತ್ಮಕವಾಗಿ ವಿಚ್ಛೇದನ ಪಡೆದಿಲ್ಲ. ಹೀಗಾಗಿ ಈ ರಂಪಾಟ ಬಯಲಾದರೆ, ರಮ್ಯಾರಿಂದ ಬಹುಬೇಗನೇ ವಿಚ್ಛೇದನ ಸಿಗುತ್ತೆ ಎಂದು ನರೇಶ್ ಈ ರೀತಿ ಮಾಡಿದ್ದಾರೆ ಎಂದು ತೆಲುಗಿನಲ್ಲಿ ಮಾಧ್ಯಮಗಳು ವರದಿ ಮಾಡಿವೆ.
ಅಪರಾಧವಲ್ಲ ಎಂಬ ಅರಿವಿತ್ತು?
ಇತ್ತೀಚೆಗೆ ಕಾನೂನಿನಲ್ಲಿ ಬದಲಾವಣೆಯಾಗಿದ್ದರಿಂದ ಇಬ್ಬರೂ ಸ್ವ ಇಚ್ಚೆಯಿಂದ ಒಟ್ಟಿಗೆ ಇರುವುದು ಅಪರಾಧವಲ್ಲ ಎಂಬುದು ನರೇಶ್ ಗೊತ್ತಿತ್ತು. ಹೀಗಾಗಿಯೇ ನರೇಶ್, ನಟಿ ಪವಿತ್ರಾ ಲೋಕೇಶ್ ಅವರ ಜೊತೆಯಲ್ಲಿ ಇದ್ದರು. ಅಲ್ಲದೆ ಈ ವಿಷಯವನ್ನು ಪರೋಕ್ಷವಾಗಿ ಮೂರನೇ ಪತ್ನಿ ರಮ್ಯಾ ರಘುಪತಿಯವರಿಗೂ ತಿಳಿಸಿದ್ದರು ಎಂದು ಹೇಳಲಾಗುತ್ತಿದೆ.
ಮಾಧ್ಯಮಗಳಿಂದ ಇಬ್ಬರೂ ದೂರ
ಮೈಸೂರಿ ಹೋಟೆಲ್ ಘಟನೆಯ ಬಳಿಕ ನರೇಶ್ ಹಾಗೂ ಪವಿತ್ರಾ ಲೋಕೇಶ್ ಇಬ್ಬರೂ ಮಾಧ್ಯಮಗಳಿಂದ ದೂರ ಉಳಿಯಲು ನಿರ್ಧರಿಸಿದ್ದಾರೆ. ಇಂತಹದ್ದೊಂದು ಸುದ್ದಿ ಕೆಲವು ದಿನಗಳ ಹಿಂದೆ ಹರಿದಾಡಿತ್ತು. ರಮ್ಯಾ ರಘುಪತಿಯನ್ನು ಕಾನೂನಾತ್ಮಕವಾಗಿ ಎದುರಿಸೋಣ ಎಂದು ನಿರ್ಧರಿಸಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಈ ಕಾರಣಕ್ಕೆ ಇಬ್ಬರೂ ಎಲ್ಲೂ ಕಾಣಿಸಿಕೊಳ್ಳುತ್ತಿಲ್ಲ.