Don't Miss!
- News Lok Sabha Election: ಚಾಮರಾಜನಗರ ಕ್ಷೇತ್ರ ಸಿಎಂಗೆ ಪ್ರತಿಷ್ಠೆಯ ಕಣ
- Finance ಬೆಂಗಳೂರು, ನೋಯ್ಡಾ, ಪುಣೆಯಲ್ಲಿ ಶೀಘ್ರದಲ್ಲೇ ಹೊಸ ಆಪಲ್ ಸ್ಟೋರ್ ಪ್ರಾರಂಭ
- Technology ಈ ಹೊಸ 5G ಫೋನ್ ಖರೀದಿಸಿದರೆ, ವಿವೋ ಕಂಪನಿಯ ಇಯರ್ಫೋನ್ ಉಚಿತ!
- Automobiles ನಟಿ ಶಿಲ್ಪಾ ಶೆಟ್ಟಿಗೆ ಮತ್ತೊಂದು ಸಮಸ್ಯೆ ತಂದಿಟ್ಟ ಪತಿ: ಐಷಾರಾಮಿ ಕಾರುಗಳು ಸೀಜ್!
- Lifestyle ವೋಟರ್ ಐಡಿ ಇಲ್ಲದೆಯೂ ಮತ ಚಲಾಯಿಸಬಹುದು.! ಹೇಗೆ ಗೊತ್ತಾ?
- Sports 2025ರ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲಿದೆಯೇ?; ಬಿಸಿಸಿಐ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಆಸ್ಕರ್ ಗೆದ್ದರೂ ಕುಡಕರ ಚರ್ಯೆ ಬದಲಾಗೋಲ್ಲ
ಆಸ್ಕರ್ ಪ್ರಶಸ್ತಿ ವಿಜೇತ ಹಾಲಿವುಡ್ ನಟ ನಿಕೋಲಾಸ್ ಕೇಜ್ನನ್ನು ಪೊಲೀಸರು ಬಂಧಿಸಿ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ ಘಟನೆ ಅಮೆರಿಕದ ಅರ್ಲೆನ್ಸ್ನಲ್ಲಿ ನಡೆದಿದೆ. ಹಾಲಿವುಡ್ ಆದರೇನು ಬಾಲಿವುಡ್ ಆದರೇನು ಕುಡುಕರ ಚರ್ಯೆ ಎಲ್ಲೆಡೆ ಒಂದೇ ಬಗೆ ಎಂಬುದಕ್ಕೆ ಇದು ನಿದರ್ಶನವಾಗಿದೆ. ನಿಕೋಲಾಸ್ ಕೇಜ್ ಪ್ರತಿಭಾವಂತ ನಟ ನಿಜ. ಆದರೆ, ಆತನ ಇತ್ತೀಚಿನ ಕುಡಿತ ರಂಪಾಟಗಳನ್ನು ಕಂಡ ಆಪ್ತರು ಪುನರ್ವಸತಿ ಕೇಂದ್ರದಲ್ಲಿ ಒಂದಷ್ಟು ದಿನ ರೆಸ್ಟ್ ತಗೋ ಮಾರಾಯ ಎಂದಿದ್ದಾರೆ.
ರೈಸಿಂಗ್ ಅರಿಜೋನಾ, ದ ರಾಕ್, ಫೇಸ್ ಆಫ್, ಗಾನ್ ಇನ್ 60 ಸೆಕೆಂಡ್ಸ್, ಗೋಸ್ಟ್ ರೈಡರ್, ಕಿಕ್ ಆಸ್ ಚಿತ್ರಗಳಲ್ಲಿ ನಟಿಸಿರುವ ಕೇಜ್, ಅಕಾಡೆಮಿ ಪ್ರಶಸ್ತಿ ಗಳಿಸಿದ ಯುವ ನಟ ಎಂಬ ಸಾಧನೆ ಮಾಡಿದ್ದಾರೆ. ಆದರೆ, ಆರ್ಥಿಕ ಹೊಡೆತಕ್ಕೆ ಸಿಕ್ಕ ಕೇಜ್ ಮನೆ ಮಠ ಕಳೆದುಕೊಂಡು ತತ್ತರಿಸಿದ್ದ ಕೇಜ್ ಸುಧಾರಿಸಲೇ ಇಲ್ಲ. ಹಾದಿ ಬೀದಿ ರಂಪಾಟದಲ್ಲಿ ಸಿಲುಕಿ ಅನೇಕ ಬಾರಿ ಪೊಲೀಸರಿಗೆ ದಂಡ ತೆತ್ತಿದ್ದಾನೆ ಕೂಡಾ.
ಕುಡಿದ ಮತ್ತಿನಲ್ಲಿದ್ದ ನಿಕೋಲಾಸ್ ಬೇರೊಂದು ಅಪಾರ್ಟ್ಮೆಂಟ್ನಲ್ಲಿ ನಿಂತು ಇದು ನಮ್ಮದೇ ಮನೆ ಎಂದಾಗ, ಪತ್ನಿ ಇದಲ್ಲ ಎಂದು ಹೇಳಿದ್ದಾಳೆ. ಆದರೆ, ಇದರಿಂದ ಕೆರಳಿದ ಆತ ಆಕೆಯನ್ನು ನಿಂದಿಸಿ ಹಲ್ಲೆ ನಡೆಸಿದ್ದಾನೆ. ಇದು ಸಾಲದೆ ತಡೆಯಲು ಬಂದ ಕ್ಯಾಬ್ ಚಾಲಕನ ಮೇಲೆಯೂ ಹಲ್ಲೆ ಎಸೆಗಿದ್ದಾನೆ. ಅಲ್ಲಿ ಪಾರ್ಕ್ ಮಾಡಿದ್ದ ವಾಹನಗಳ ಮೇಲೆಯೂ ಪ್ರತಾಪ ತೋರಿಸಿದ್ದಾನೆ. ಚಾಲಕ ನೀಡಿದ ದೂರಿನಂತೆ ಪೊಲೀಸರು ಕೇಜ್ನನ್ನು ಪೊಲೀಸರು ಬಂಧಿಸಿದ್ದರು.
ಬೆಚ್ಚಿ ಬೀಳಿಸುವ ಅಂಕಿ ಅಂಶ: 12 ರಿಂದ 14 ಮಿಲಿಯನ್ ನಷ್ಟು ಜನ ಕುಡಿತ ಚಟಕ್ಕೆ ಬಿದ್ದು ಹಾಳಾಗಿದ್ದಾರೆ. ಸುಮಾರು 1.3 ಮಿಲಿಯನ್ ಮಹಿಳೆಯರು ಹಾಗೂ 835,000 ಪುರುಷರು ಕೌಟುಂಬಿಕ ಕಲಹದಲ್ಲಿ ಭಾಗಿಗಳಾಗಿ ವಿಚ್ಛೇದನದ ಹಂತ ತಲುಪಿದ್ದಾರೆ. ಹಾಲಿವುಡ್ ನಟ ನಟಿಯರು ಕೂಡಾ ಅನೇಕ ಬಾರಿ ಉಗ್ರ ಪ್ರತಾಪಿಗಳಾಗಿ ಕುಡಿದು ತೂರಾಡಿ ಸುದ್ದಿಗ್ರಾಸವಾಗಿದ್ದಾರೆ. Drive Angry ನಟ ಕೇಜ್ ಪುನರ್ವಸತಿ ಕೇಂದ್ರಕ್ಕೆ ಸೇರಿ ಮಾನಸಿಕ ನೆಮ್ಮದಿ ಪಡೆದು ಮತ್ತೆ ನಟನೆಗೆ ಮರಳಲಿ ಎಂದು ಅವರ ಅಭಿಮಾನಿಗಳು ಆಶಿಸಿದ್ದಾರೆ.