Just In
- 9 hrs ago
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- 9 hrs ago
Bigg Boss Tamil 4: ಅತಿ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿಯೇ ವಿಜೇತ!
- 10 hrs ago
ಫೋಟೋಗಳು: ರಮೇಶ್ ಅರವಿಂದ್ ಮಗಳ ಮದುವೆ ಆರತಕ್ಷತೆಯಲ್ಲಿ ಸಿನಿ ತಾರೆಯರು; ಯಶ್, ಸುದೀಪ್ ಸಖತ್ ಡ್ಯಾನ್ಸ್
- 12 hrs ago
ಶಿವಮೊಗ್ಗದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್: 'ಬೆಸ್ಟ್ ವೀಕೆಂಡ್ ಎವರ್' ಎಂದ ನಟಿ
Don't Miss!
- Lifestyle
"ಸೋಮವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Finance
Flipkart Big Saving Days: ಆಪಲ್, ಸ್ಯಾಮ್ಸಂಗ್ ಸೇರಿ ಹಲವು ಬ್ರ್ಯಾಂಡ್ ಗಳ ಆಫರ್
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Automobiles
ಅನಾವರಣವಾಯ್ತು 2021ರ ಎಪ್ರಿಲಿಯಾ ಆರ್ಎಸ್ವಿ4 ಬೈಕುಗಳು
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
20 ರೂಪಾಯಿ ಸಂಭಾವನೆ ಪಡೆಯುತ್ತಿದ್ದ ಹೊನ್ನವಳ್ಳಿ ಕೃಷ್ಣ ಈಗ ಸಾವಿರ ಚಿತ್ರಗಳ ಸರದಾರ
ಜೀವನದಲ್ಲಿ ಒಂದೇ ಒಂದು ಸಿನಿಮಾ ಮಾಡಿದರೆ ಸಾಕು ಎಂಬುದು ಕೆಲವರ ಆಸೆ. ದೊಡ್ಡ ಪರದೆ ಮೇಲೆ ಒಮ್ಮೆ ಕಾಣಿಸಿಕೊಳ್ಳಬೇಕು ಎಂಬುದು ಎಷ್ಟೋ ಜನರ ಬಯಕೆ. ಆದರೆ ಆ ರೀತಿ ಯಾವುದೇ ಆಸೆ ಇಟ್ಟುಕೊಳ್ಳದೆ, ಚಿತ್ರರಂಗಕ್ಕೆ ಕಾಲಿಟ್ಟ ನಟ ಹೊನ್ನವಳ್ಳಿ ಕೃಷ್ಣ ಈಗ ಬರೋಬ್ಬರಿ ಸಾವಿರ ಸಿನಿಮಾ ಮಾಡಿದ್ದಾರೆ.!
ಡಾ.ರಾಜ್ ಕುಮಾರ್ ಸಿನಿಮಾದಿಂದ ಶುರುವಾದ ಅವರ ಸಿನಿಮಾ ಯಾನ ವಿನಯ್ ರಾಜ್ ಕುಮಾರ್ ಸಿನಿಮಾಗಳವರೆಗೆ ಮುಂದುವರೆದಿದೆ. 'ಭೂತಯ್ಯನ ಮೊಮ್ಮಗ ಅಯ್ಯು' ಚಿತ್ರ ಹೊನ್ನವಳ್ಳಿ ಕೃಷ್ಣ ಅವರ 1000ನೇ ಚಿತ್ರವಾಗಿದೆ. ಸಾವಿರ ಸಿನಿಮಾಗಳ ಸರದಾರರಾಗಿರುವ ಹಿರಿಯ ಪೋಷಕ ನಟ ಹೊನ್ನವಳ್ಳಿ ಕೃಷ್ಣ ಅವರ ವಿಶೇಷ ಸಂದರ್ಶನದ ಆಯ್ದ ಭಾಗ ಇಲ್ಲಿದೆ ಓದಿ...
ಸಂದರ್ಶನ : ನವೀನ.ಎಂ.ಎಸ್

ಒಂದು ಸಾವಿರ ಸಿನಿಮಾಗಳನ್ನು ಮಾಡಿದ್ದೀರಿ. ಹೇಗಿದೆ ನಿಮ್ಮ ಸಿನಿ ಪಯಣ?
- ಖುಷಿಯಾಗುತ್ತದೆ... ಸಾವಿರ ಸಿನಿಮಾ ಆದರೂ ಈಗಲೂ ಅವಕಾಶಗಳನ್ನು ಕೇಳುತ್ತಿರುತ್ತೇನೆ. ಸಿನಿಮಾ ಮಾಡುತ್ತಿರುತ್ತೇನೆ. ಇಂದಿಗೂ ನಮ್ಮನ್ನು ಗುರುತಿಸಿ ನಿರ್ಮಾಪಕರು ಅವಕಾಶ ನೀಡುತ್ತಿದ್ದಾರೆ. ಜನ ನಮಗೆ ಇಷ್ಟೊಂದು ಪ್ರೀತಿ ತೋರಿಸಿದ್ದಾರೆ ಅವರಿಗೆ ನಾನು ಶರಣು ಎನ್ನುತ್ತೇನೆ.

ಮೊದಲ ಅವಕಾಶ.. ನಿಮ್ಮ ಮೊದಲ ಸಿನಿಮಾದ ಬಗ್ಗೆ ಹೇಳಿ...
- 'ನ್ಯಾಯವೇ ದೇವರು' ನನ್ನ ಮೊದಲ ಸಿನಿಮಾ. ಡಾ.ರಾಜ್ ಕುಮಾರ್ ಅಣ್ಣ, ಮತ್ತು ಆರತಿ ಅವರು ಚಿತ್ರದಲ್ಲಿದ್ದರು. ಸಿದ್ಧಲಿಂಗಯ್ಯ ಚಿತ್ರದ ನಿರ್ದೇಶಕರಾಗಿದ್ದರು. ಅಣ್ಣಾವ್ರನ್ನು ನೋಡಬೇಕು ಎಂದು ಹಳ್ಳಿಯಿಂದ ಬೆಂಗಳೂರಿಗೆ ಬಂದೆ. ಅವರು ಬೆಂಗಳೂರಿನಲ್ಲಿ ಇಲ್ಲ, ಮದ್ರಾಸ್ ನಲ್ಲಿ ಇದ್ದಾರೆ ಅಂತ ಗೊತ್ತಾಗಿ ಅಲ್ಲಿಗೆ ಹೋದೆ. ನಂತರ ಅಲ್ಲಿ ಅಣ್ಣಾವ್ರುನ್ನು ಭೇಟಿ ಮಾಡಿ ಅವರ ಪರಿಚಯ ಆದ ಮೇಲೆ ಚಿತ್ರದಲ್ಲಿ ನಟಿಸಿದೆ.

ಹಳ್ಳಿಯಲ್ಲಿ ಹುಟ್ಟಿದ ನಿಮ್ಮಲ್ಲಿ ಸಿನಿಮಾ ಕನಸು ಹುಟ್ಟಿದ್ದು ಹೇಗೆ..?
- ನಮ್ಮ ಊರು ಹೊನ್ನವಳ್ಳಿ, ಅಲ್ಲಿ ಒಂದು ಪತ್ರಿಕೆ ಬರುತ್ತಿತ್ತು. ಅದರಲ್ಲಿ ರಾಜ್ ಕುಮಾರ್ ಸೇರಿದಂತೆ ಸಿನಿಮಾ ನಟರ ಫೋಟೋಗಳು ಇರುತ್ತಿತ್ತು. ಆಗ ರಾಜ್ ಕುಮಾರ್ ನೋಡಬೇಕೆಂದು ದೊಡ್ಡ ಆಸೆ ಇತ್ತು. ಹೋಟೆಲ್ ನಲ್ಲಿ ಕೆಲಸ ಮಾಡಿದ ದುಡ್ಡಿನಿಂದ ಮದ್ರಾಸ್ ಗೆ ಹೋದೆ. ಅಲ್ಲಿಯವರೆಗೂ ನನಗೆ ಮದ್ರಾಸ್ ನಲ್ಲಿ ತಮಿಳು ಮಾತನಾಡುತ್ತಾರೆ ಎನ್ನುವುದು ತಿಳಿದಿರಲಿಲ್ಲ. ಆಗ ಕಷ್ಟ ಪಟ್ಟು ರಾಜ್ ಕುಮಾರ್ ಅವರ ಶೂಟಿಂಗ್ ನಡೆಯುತ್ತಿದ್ದ ಜಾಗ ಹುಡುಕಿದೆ. ಅವರನ್ನು ಮೊದಲು ನಾನು ಅಲ್ಲಿಯೇ ಭೇಟಿ ಆಗಿದ್ದು. ನಂತರ ಆಕಸ್ಮಿಕವಾಗಿ ಚಿತ್ರದಲ್ಲಿ ಸಣ್ಣ ಪಾತ್ರ ಮಾಡಿದೆ.

ನಿಮ್ಮ ಮೊದಲ ಸಂಭಾವನೆ ಎಷ್ಟಿತ್ತು?
- ಆ ದಿನದಲ್ಲಿ ನನ್ನ ಮೊದಲ ಸಂಭಾವನೆ 20 ರೂಪಾಯಿ ಆಗಿತ್ತು.

ಅಣ್ಣಾವ್ರ ಇಡೀ ಕುಟುಂಬದ ಜೊತೆ ನಟಿಸಿರುವ ಖ್ಯಾತಿ ನಿಮ್ಮದು ಆ ಬಗ್ಗೆ ಹೇಳಿ..
- ರಾಜ್ ಕುಮಾರ್ ರಿಂದ ಶುರು ಮಾಡಿ ಶಿವರಾಜ್ ಕುಮಾರ್, ರಾಘವೇಂದ್ರ ರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಮತ್ತು ಅಣ್ಣಾವ್ರ ಮೊಮ್ಮಗ ವಿನಯ್ ಜೊತೆ ಕೂಡ ಸಿನಿಮಾ ಮಾಡಿದ್ದೇನೆ ಅದೇ ನನಗೆ ಖುಷಿ..

ಇಂದಿನ ದಿನದಲ್ಲಿ ಹಳೆಯ ಪೋಷಕ ನಟರಿಗೆ ಸರಿಯಾದ ಅವಕಾಶ ಸಿಗುತ್ತಿಲ್ಲ ಎನಿಸುತ್ತದೆಯಾ?
- ಆ ರೀತಿ ಏನೂ ಇಲ್ಲ... ನಮ್ಮ ಪ್ರಯತ್ನ ನಾವು ಮಾಡಬೇಕು. ಉಳಿದದ್ದು ಭಗವಂತನ ಇಚ್ಛೆ. ಅವಕಾಶ ಇದ್ದಾಗ ಹಿಗ್ಗಬಾರದು. ಅವಕಾಶ ಇಲ್ಲದಾಗ ಕುಗ್ಗಬಾರದು... ಪ್ರಯತ್ನ ಮಾಡುತ್ತಿರಬೇಕು.

ನಿಮ್ಮ ಮರೆಯಲಾಗದ ಸಿನಿಮಾ ಯಾವುದು?
- ಶೃತಿ ಸಿನಿಮಾ... ಈ ಚಿತ್ರವನ್ನು ನಾನು ಮರೆಯುವುದಕ್ಕೆ ಸಾಧ್ಯ ಇಲ್ಲ. ಸಿನಿಮಾದಲ್ಲಿ ನಾಲ್ಕು ಜನ ನಾಯಕರಾಗಿದೆವು. ಆದರೆ ಈಗ, ನಾನು ಹಾಗೂ ಶೃತಿ ಇಬ್ಬರೇ ಇದ್ದೇವೆ.

ಸಿನಿಮಾ ಮತ್ತು ರಂಗಭೂಮಿ ಎರಡರಲ್ಲಿಯೂ ಇರುವ ವ್ಯತ್ಯಾಸ ಏನು?
- ನಾಟಕದಲ್ಲಿ ಒನ್ಸ್ ಮೋರ್... ಸಿನಿಮಾದಲ್ಲಿ ಒನ್ ಮೋರ್.. ಸಿನಿಮಾ ಮತ್ತು ರಂಗಭೂಮಿ ಎರಡೂ ಒಂದೇ ನಾಣ್ಯದ ಎರಡು ಮುಖಗಳು.

ನಿಮ್ಮ ಮಗ ಈಗ ಏನ್ ಮಾಡುತ್ತಿದ್ದಾರೆ?
- ಮಗನಿಗೆ ನಟನೆಗಿಂತ ನಿರ್ದೇಶನ ಇಷ್ಟ. ಈಗ 'ಪಾಂಡುಪುರದ ಪ್ರಚಂಡರು' ಎಂಬ ಸಿನಿಮಾವನ್ನು ನಿರ್ದೇಶನ ಮಾಡುತ್ತಿದ್ದಾನೆ.

ಇಂದಿನ ಯುವ ಸಿನಿಮಾ ಮಂದಿಗೆ ಏನು ಹೇಳುತ್ತೀರಾ?
- ಆಗ ರಾಜ್ ಕುಮಾರ್, ವಿಷ್ಣುವರ್ಧನ್, ಶಂಕರ್ ನಾಗ್... ನಾವು ಎಲ್ಲರೂ ಸ್ನೇಹಿತರಾಗಿದ್ದೆವು. ಈಗ ಕೂಡ ಅದೇ ರೀತಿಯಲ್ಲಿ ಎಲ್ಲರೂ ಸ್ನೇಹ ಭಾವನೆಯಿಂದ ಒಟ್ಟಿಗೆ ಇರಬೇಕು.

ನಿಮ್ಮ ಸಿನಿಮಾ ಜರ್ನಿಯಲ್ಲಿ ಸಿಹಿ ಹೆಚ್ಚಿದೆಯೋ ಕಹಿ ಹೆಚ್ಚಿದೆಯೋ?
- ನಾನು ಜೀವನದಲ್ಲಿ ಎಲ್ಲವನ್ನೂ ಸಮನಾಗಿ ನೋಡುತ್ತೇನೆ. ಕಷ್ಟ, ನೋವು, ಸುಖ, ನಗು ಎಲ್ಲವನ್ನು ಹಾಗೆ ಸ್ವೀಕರಿಸುತ್ತೇನೆ.

ಚಿತ್ರರಂಗ ಪೋಷಕ ನಟರನ್ನು ಅವರ ಕೊನೆಯ ದಿನಗಳಲ್ಲಿ ಕೈ ಹಿಡಿಯುವುದಿಲ್ಲ ಎನಿಸುತ್ತದೆಯಾ?
- ಇಲ್ಲ.. ಒಳ್ಳೆಯತನವನ್ನು ಬೆಳೆಸಿಕೊಳ್ಳುವುದು.. ಉಳಿಸಿಕೊಳ್ಳುವುದು.. ಎಲ್ಲ ನಮ್ಮ ಕೈನಲ್ಲಿಯೇ ಇದೆ. ಒಳ್ಳೆಯದಕ್ಕೆ ಕೆಟ್ಟದಕ್ಕೆ ಎರಡಕ್ಕೂ ನಾವೇ ಕಾರಣ ಆಗಿರುತ್ತೇವೆ. ಅದಕ್ಕೆ ನಾವು ಯಾರ ಮೇಲೆಯೂ ಗೂಬೆ ಕೂರಿಸಬಾರದು.