ವಿರಸವೆಂಬ ವಿಷಕೆ ಬಲಿಯಾದೆ ಏತಕೇ

By Staff

Kannada Veteran Actor Lokesh
ಸದಭಿರುಚಿಯ ಚಿತ್ರಗಳ ನಿರ್ಮಾಪಕ ಚಂದೂಲಾಲ್ ಜೈನ್ ಇಂದು (ಡಿ.17) ನಿಧನರಾಗಿದ್ದಾರೆ. ಅವರ ನಿರ್ಮಾಣದಲ್ಲಿ ಬಂದಂತಹ ಚಿತ್ರಗಳು ಕನ್ನಡ ಚಲನಚಿತ್ರ ಕ್ಷೇತ್ರವನ್ನು ಶ್ರೀಮಂತಗೊಳಿಸಿವೆ. ಈ ಸಂದರ್ಭದಲ್ಲಿ ಅವರ ನಿರ್ಮಾಣದ 'ಭೂತಯ್ಯನ ಮಗ ಅಯ್ಯು' ಚಿತ್ರದ ವಿರಸವೆಂಬ ವಿಷಕೆ ಬಲಿಯಾದೆ ಏತಕೇ...'' ಎಂಬ ಹಾಡಿನ ಚರಣಗಳನ್ನು ಅವರಿಗೆ ಅರ್ಪಿಸುತ್ತಿದ್ದೇವೆ.

ಗೊರೂರು ರಾಮಸ್ವಾಮಿ ಅಯ್ಯಂಗಾರ್ ಅವರ ಕಾದಂಬರಿ ಆಧಾರಿತ ಚಿತ್ರ ಭೂತಯ್ಯನ ಮಗ ಅಯ್ಯ್ಯು . 1974ರಲ್ಲಿ ತೆರೆಕಂಡ ಈ ಚಿತ್ರ ಸಿದ್ಧಲಿಂಗಯ್ಯ ಅವರ ನಿರ್ದೇಶನದಲ್ಲಿ ಬಂದಂತಹ ಮತ್ತೊಂದು ಅವಿಸ್ಮರಣೀಯ ಚಿತ್ರ. ಗುಳ್ಳನ ಪಾತ್ರದಲ್ಲಿ ವಿಷ್ಣುವರ್ಧನ್, ಅಯ್ಯು ಪಾತ್ರದಲ್ಲಿ ಲೋಕೇಶ್, ಭೂತಯ್ಯನ ಪಾತ್ರದಲ್ಲಿ ಎಂ.ಪಿ.ಶಂಕರ್ ನಟನೆ ಅದ್ಭುತವಾಗಿ ಮೂಡಿಬಂದಿತ್ತು. ಚಿ.ಉದಯಶಂಕರ್ ಅವರ ಸೊಗಸಾದ ಸಾಹಿತ್ಯಕ್ಕೆ ಜಿ.ಕೆ.ವೆಂಕಟೇಶ್ ಸಂಗೀತ ನೀಡುವುದರ ಜೊತೆಗೆ ಹಾಡಿದ್ದರು.

ವಿರಸವೆಂಬ ವಿಷಕೆ ಬಲಿಯಾದೆ ಏತಕೇ
ಸುಖಶಾಂತಿ ನಾಶಕೆ...ಮರುಳ..{ಪಲ್ಲವಿ}

ಗೆಲುವಾ ಛಲವ ಹೊಂದಿ ಮನದಲೀ
ಸೇಡಿನಿಂದಲೀ ಕಿಡಿಯಾಗಿ ಹಠದಲಿ
ಸಾಲವೆನ್ನುವಾ ಆ ಶೂಲವೇರುವಾ
ಗತಿಯಾಯ್ತೇ ಮಾನವಾ........{ಪಲ್ಲವಿ}

ಬಂಧು ಬಳಗ ನೆಂಟರೆಲ್ಲರೂ
ಗಂಟು ಹೋಗಲೂ ಇನ್ನೆಲ್ಲಿ ನಿಲುವರು
ಲಾಭಯಾರಿಗೋ ಸಂತಾಪಯಾರಿಗೋ
ವಿಧಿಲೀಲೆ ಏನಿದು..........{ಪಲ್ಲವಿ}

(ದಟ್ಸ್ ಕನ್ನಡ ಚಿತ್ರವಾರ್ತೆ)

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X