Don't Miss!
- Lifestyle ಏಪ್ರಿಲ್ 1ರಿಂದ 800 ಔಷಧಗಳು ದುಬಾರಿ..! ಎಷ್ಟು ಬೆಲೆ ಹೆಚ್ಚಳ.?
- Automobiles ಭಾರತದಲ್ಲಿ ಬಿಡುಗಡೆಗೆ ಸಜ್ಜಾದ ಬಹುನಿರೀಕ್ಷಿತ ಹೊಸ ಸ್ಕೋಡಾ ಸೂಪರ್ಬ್ ಕಾರು
- News ಪೂಜೆ ಮಾಡಿದ ಈ ಲಿಂಬೆಹಣ್ಣು ಲಕ್ಷಕ್ಕೆ ಹರಾಜ್! ಶಾಕ್ ಆಡ್ಬೇಡಿ ಇದು ನಿಜ...
- Sports IPL 2024: ಆರ್ಸಿಬಿ vs ಕೆಕೆಆರ್ ಪಂದ್ಯಕ್ಕೂ ಮುನ್ನ ಗಂಭೀರ್ನತ್ತ ಐಸ್-ಕೋಲ್ಡ್ ಲುಕ್ ನೀಡಿದ ಕೊಹ್ಲಿ
- Technology WhatsApp: ವಾಟ್ಸಾಪ್ನಲ್ಲಿ ಈ ಕರೆಗಳನ್ನು ಸ್ವೀಕರಿಸದಂತೆ ಕೇಂದ್ರದಿಂದ ಎಚ್ಚರಿಕೆ! ಯಾಕೆ ಗೊತ್ತಾ?
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಧ್ವನಿಸುರುಳಿ ವಿಮರ್ಶೆ: ಕಠಾರಿವೀರ ಸುರಸುಂದರಾಂಗಿ
1.
ದಿಲ್
ಮೇರಾ
ಧಕ್,
ಧಕ್
ಸಾಹಿತ್ಯ:
ಕವಿರಾಜ್
ಹಾಡಿರುವವರು:
ಸೋನು,
ಸುನಿತಾ
ಬೋಪರಾಜ್
ಹಿಂದಿ ಮಿಶ್ರಿತ ಕನ್ನಡ ಹಾಡು. ಮೆಲೋಡಿಯಸ್ ಟ್ಯೂನ್ ನಲ್ಲಿ ಸಾಗುವ ಡುಯೆಟ್ ಸಾಂಗ್. ದಿಲ್ ಮೇರಾ ಧಕ್ ಧಕ್, ಪ್ರೀತಿ ದೊಂಬರಾಟ ಎದೆಯಲಿ, ತೂಫಾನ್ ಎದ್ದ ಹಾಗೆ ಉಸಿರಲ್ಲಿ ಹೀಗೆ ಸಾಹಿತ್ಯವಿರುವ ಹಾಡು. ಕೋರಸ್ ಬಳಸಿರುವುದರಿಂದ ಹಾಡು ಮತ್ತಷ್ಟು ಇಂಪಾಗಿದೆ.
2
.
ಅಂಬಿಕ,
ಚಳಿ
ತಾಳೆನು
ಅಂಬಿಕ
ಸಾಹಿತ್ಯ:
ನಾಗೇಂದ್ರ
ಪ್ರಸಾದ್
ಹಾಡಿರುವವರು:
ಹೇಮಂತ್,
ಅನುರಾಧ
ಭಟ್
ರಕ್ತ ಕಣ್ಣೀರು ಚಿತ್ರದ ಡೇಂಜರ್.. ಹಾಡಿನ ಮೊದಲ ಟ್ಯೂನ್ ಅನ್ನು ಇಲ್ಲಿ ಬಳಸಿಕೊಳ್ಳಲಾಗಿದೆ. ಹಾಡಿನಲ್ಲಿ ಬಿಸಿಬಿಸಿ ಸಾಹಿತ್ಯವಿದ್ದು, for e.g. ನೀನು ಭಲೇ ಭಲೇ ಡೇಂಜರ್ ಕಣೋ, ನೀನು ಹುಡುಗಿರೋ ಹಂಟರ್ ಕಣೋ, ಗಂಡಸ್ಥನ ಎನ್ನುವ ಏಳು ಅಂತಸ್ತು ಶಾಖ ನೀಡಿ ಪುಳಕವಾಗಲಿ. ಆಲ್ಬಮ್ ನಲ್ಲಿರುವ ಮತ್ತೊಂದು ಡುಯೆಟ್ ಹಾಡು. ದಶಕಗಳ ಹಿಂದೆ ಬಂದ ಅಂಬರೀಶ್, ಅಂಬಿಕಾ ಅಭಿನಯದ ಚಕ್ರವ್ಯೂಹ ಚಿತ್ರದ ಚಳಿ ಚಳಿ ತಾಳೆನು ಈ ಚಳಿಯ ಹಾಡಿನ ಸಾಹಿತ್ಯವನ್ನು ಒಂದು ಆಂಗಲ್ ನಲ್ಲಿ ಹೋಲಿಸಬಹುದಾಗಿದೆ.
3.
ಊರಿಗೆ
ನಿನೋಬ್ಬಳೆ
ಪದ್ಮಾವತಿಯೇನೆ
ಸಾಹಿತ್ಯ:
ಉಪೇಂದ್ರ
ಹಾಡಿರುವವರು:
ಉಪೇಂದ್ರ,
ಸುನಿತಾ
ಬೋಪರಾಜ್
ಅಣ್ಣಾವ್ರ ಬಹಾದ್ದೂರ್ ಗಂಡು ಚಿತ್ರದ ಎವರ್ ಗ್ರೀನ್ ಹಾಡು ಮುತ್ತಿನಂತ ಮಾತೊಂದು ಗೊತ್ತೇನಮ್ಮ ಟ್ಯೂನ್ ಅನ್ನು ಯಥಾವತ್ತಾಗಿ ಬಳಸಿಕೊಳ್ಳಲಾಗಿದೆ. ಟಿಪಿಕಲ್ ಉಪೇಂದ್ರ ಸಾಹಿತ್ಯವಿರುವ ಹಾಡು. ನಾವು ಪೂಜೆ ಮಾಡಿದ್ರೆನೇ ದೇವರು ಕಣೆ, ಇಲ್ಲಾಂದ್ರೆ ಬರೀ ಕಲ್ಲು ಕಣೆ. ಕೆಟ್ಟವರು ಇದ್ರೆ ತಾನೇ ಯಮನಿಗೆ ಕೆಲಸತಾನೆ. ವ್ಯಂಗ್ಯಭರಿತ ದಾಟಿಯಲ್ಲಿ ಸಾಗುವ ಹಾಡು ಪಡ್ಡೆ ಹುಡುಗರನ್ನು ಆಕರ್ಷಿಸುವಂತಿದೆ.
4.
ಊಲಾ
ಊಲಲಾ..
ಇದು
ಹಾಲು
ಕೊಡುವ
ಎಮ್ಮೆ..
ಸಾಹಿತ್ಯ:
ಉಪೇಂದ್ರ
ಹಾಡಿರುವವರು:
ಟಿಪ್ಪು,
ಪ್ರಿಯದರ್ಶಿನಿ
ನಶೆ ಏರುವ ಸಂಗೀತ ದಾಟಿಯಲ್ಲಿರುವ ಹಾಡು. ಫಾಸ್ಟ್ ಬೀಟ್ ನಲ್ಲಿ ಸಾಗುವ ಇಂಗ್ಲಿಷ್ ಮಿಶ್ರಿತ ಸಾಂಗ್.
5.
ಪಾರಿಜಾತ
ಪದ್ಯ
ಹಾಡಿದೆ
ಸಾಹಿತ್ಯ:
ನಾಗೇಂದ್ರ
ಪ್ರಸಾದ್
ಹಾಡಿರುವವರು:
ಸುನಿತಾ
ಬೋಪರಾಜ್
ಚಕ್ರವಾಕ ಕೂತು ಕೇಳಿದೆ, ಬಾ ಎನ್ನುವಾಗ ಬರುವ ಮೇಘದೂತ, ಒಂದೊಂದು ನಿಮಿಷ ಸುಖದ ಸುಪ್ರಬಾತ. ಆಲ್ಬಮ್ ನಲ್ಲಿರುವ ಮತ್ತೊಂದು ಮೆಲೋಡಿಯಸ್ ಟ್ರ್ಯಾಕ್. ಸುನಿತಾ voice modulation ಗಮನಾರ್ಹ.
ಆಲ್ಬಮ್ ನಲ್ಲಿರುವ ಐದು ಹಾಡಿನಲ್ಲಿ ಮೂರು ಹಾಡು ಕೇಳುವಂತಿದ್ದು, ಹಾಡಿನ ಸಾಹಿತ್ಯವೇ ವಿಶಿಷ್ಟವಾಗಿ ವೈಶಿಷ್ಟ್ಯಪೂರ್ಣವಾಗಿದೆ. ಆದರೂ ಕನ್ನಡದ ಮೊದಲ 3ಡಿ ಸಿನಿಮಾದ ಹಾಡು ಅದ್ಭುತವಾಗಿರುತ್ತೆ ಅಂದುಕೊಂಡರೆ ಸ್ವಲ್ಪ ನಿರಾಶೆ ಆಗಬಹುದು. ಆದರೂ ಸಿಡಿ ಖರೀದಿಸಲು ಖಂಡಿತ ಅಡ್ಡಿಯಿಲ್ಲ ಬಿಡಿ.