Don't Miss!
- News ವೃದ್ಧರ ಗೌಪ್ಯ ಮತದಾನ ವೇಳೆ ಅಕ್ರಮ: ಸಿಪಿಎಂ ಏಜೆಂಟ್ ಹಸ್ತಕ್ಷೇಪ: Video Viral
- Technology Vivo: ಶೀಘ್ರದಲ್ಲೇ ವಿವೋ Y38 5G ಸ್ಮಾರ್ಟ್ಫೋನ್; ವಿನ್ಯಾಸ ಮತ್ತು ಫೀಚರ್ಸ್ ಲೀಕ್
- Sports DC vs SRH: ಹೈದರಾಬಾದ್ ಬ್ಯಾಟರ್ಗಳನ್ನು ಕಟ್ಟಿಹಾಕಲಿದ್ದಾರಾ ಡೆಲ್ಲಿ ಬೌಲರ್ಸ್?; ಸಂಭಾವ್ಯ ಆಡುವ 11ರ ಬಳಗ
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹಿಂದಿ ಹಾಡು ಯಾಕೆ? ಕನ್ನಡ ಹಾಡು ಹಾಡ್ತೀನಿ: ಅನಿಲ್ ಕುಂಬ್ಳೆ ಹೊಸ ಅವತಾರ
ಕ್ರಿಕೆಟಿಗ ಅನಿಲ್ ಕುಂಬ್ಳೆ ಒಳ್ಳೆಯ ಹಾಡುಗಾರರು. ಅನಿಲ್ ಕುಂಬ್ಳೆ ಕನ್ನಡ ಹಾಡುಗಳನ್ನು ಹಾಡುತ್ತಿದ್ದ ಕೆಲವು ವಿಡಿಯೋಗಳು ಹಿಂದೆ ವೈರಲ್ ಆಗಿದ್ದವು.
ಈಗಲೂ ಒಂದು 'ವಿಡಿಯೋ' ವೈರಲ್ ಆಗಿದೆ. ಅದರಲ್ಲಿ ಅನಿಲ್ ಕುಂಬ್ಳೆ, 'ಹಿಂದಿ ಹಾಡು ಯಾಕೆ ಹಾಡಬೇಕು, ಕನ್ನಡ ಹಾಡು ಹಾಡ್ತೀನಿ' ಎಂದು 'ಸಂತೋಶಕೆ ಹಾಡು ಸಂತೋಶಕೆ' ಎಂದು ಹಾಡಿದ್ದಾರೆ!
ಆಗಿರುವುದೇನೆಂದರೆ, ಅನಿಲ್ ಕುಂಬ್ಳೆ, ಕ್ರೆಡ್ ಅಪ್ಲಿಕೇಶನ್ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದು, ಆ ಜಾಹೀರಾತಿನಲ್ಲಿ ಅವರು ಹಿಂದಿ ಹಾಡಿನ ಬದಲಿಗೆ ಕನ್ನಡ ಹಾಡು ಹಾಡಿದ್ದಾರೆ.
ಕ್ರೆಡ್ನವರು ಬಹಳ ಭಿನ್ನವಾದ ಜಾಹೀರಾತು ಮಾಡುವುದರಲ್ಲಿ ನಿಸ್ಸೀಮರು, ಈ ಹಿಂದೆ ರಾಹುಲ್ ದ್ರಾವಿಡ್ ಸಿಟ್ಟು ಬಂದಾಗ ಹೇಗೆ ವರ್ತಿಸುತ್ತಾರೆ ಎಂಬ ಜಾಹೀರಾತು ಭಾರಿ ವೈರಲ್ ಆಗಿತ್ತು. ಬಳಿಕ ಕಪಿಲ್ ದೇವ್ ಒಂದೊಮ್ಮೆ ರಣ್ವೀರ್ ಸಿಂಗ್ ರಂತಾದರೆ ಹೇಗೆ ಎಂದು ಜಾಹೀರಾತು ಮಾಡಿದ್ದರು. ವೆಂಕಟೇಶ್ ಪ್ರಸಾದ್ ಹಾಗೂ ಜಾವಗಲ್ ಶ್ರೀನಾಥ್ ಬಗ್ಗೆಯೂ ಜಾಹೀರಾತು ಮಾಡಿದ್ದರು.
ಅನಿಲ್ ಕುಂಬ್ಳೆ ನಟಿಸಿರುವ ಜಾಹೀರಾತು ಹೀಗಿದೆ. ಕ್ರೆಡ್ ನವರು ಭಿನ್ನವಾಗಿ ಜಾಹೀರಾತು ಮಾಡುತ್ತಾರೆಂದು ಅನಿಲ್ ಕುಂಬ್ಳೆ ತಯಾರಾಗಿ ಬಂದಿರುತ್ತಾರೆ. ತಮಗೆ ಹಳೆಯ ಹಿಂದಿ ಸಿನಿಮಾಗಳ ಹೀರೋ ಮಾದರಿ ಉಡುಪು ತೊಡಿಸಿ ಹಿಂದಿ ಹಾಡು ಹಾಡಿಸುತ್ತಾರೆ ಎಂದುಕೊಂಡಿರುತ್ತಾರೆ. ಅದರ ಬದಲಿಗೆ ತಾವು ಕನ್ನಡ ಹಾಡು ಹಾಡುವುದಾಗಿ ಹೇಳಿ 'ಸಂತೋಶಕ್ಕೆ ಹಾಡು ಸಂತೋಶಕ್ಕೆ' ಹಾಡು ಹಾಡುತ್ತಾರೆ. ಆದರೆ ಕ್ರೆಡ್ನವರು ಅವರಿಗೆ ಕೇವಲ ಕ್ರೆಡ್ ಆಪ್ ಬಳಸಿ ಬಿಲ್ ಕಟ್ಟಿ ಎಂದಷ್ಟೆ ಹೇಳಲು ಹೇಳುತ್ತಾರೆ. ಹಾಗಾಗಿ ಅನಿಲ್ ಕುಂಬ್ಳೆ ನಿರಾಶರಾಗಿ ಕ್ರೆಡ್ನಿಂದ ಬಿಲ್ ಕಟ್ಟಿ ಎಂದು ಹೇಳಿ ಹೊರಟುಬಿಡುತ್ತಾರೆ. ಹೋಗುವಾಗ 'ಎಲ್ಲ ಫನ್ ರಾಹುಲ್ ದ್ರಾವಿಡ್ ಮಾತ್ರವೇನಾ?' ಎಂದು ಕೋಪ ಮಾಡಿಕೊಂಡು ಹೋಗುತ್ತಾರೆ.
ಅನಿಲ್ ಕುಂಬ್ಳೆಯ ಈ ಜಾಹೀರಾತಿನಲ್ಲಿ ಇನ್ನೂ ಹಲವು ಕ್ರೀಡಾಪಟುಗಳಿದ್ದಾರೆ. ಎಲ್ಲರೂ ಕ್ರೆಡ್ ಜಾಹೀರಾತಿಗಾಗಿ ಭಿನ್ನವಾಗಿ ರೆಡಿಯಾಗಿ ಬಂದಿರುತ್ತಾರೆ. ಚೆಸ್ ವಿಶ್ವಚಾಂಪಿಯನ್ ವಿಶ್ವನಾಥನ್ ಆನಂದ್ ಅವರಂತೂ ಬಣ್ಣ-ಬಣ್ಣದ ಜಾಕೆಟ್ ಹಾಕಿಕೊಂಡು ತಯಾರಾಗಿ ಬಂದಿರುತ್ತಾರೆ. ನಾನು ಡ್ಯಾನ್ಸ್ ಮಾಡಲಾ ಎಂದು ಹೇಳಿ ಒಂದು ಸ್ಟೆಪ್ ಸಹ ಹಾಕಿ ತೋರಿಸುತ್ತಾರೆ ಆದರೆ ಕ್ರೆಡ್ನವರು ಬೇಡ ಕ್ರೆಡ್ನಿಂದ ಬಿಲ್ ಕಟ್ಟಬಹುದು ಎಂದು ಹೇಳಿ ಸಾಕು ಎನ್ನುತ್ತಾರೆ. ಅವರೂ ಸಹ ಅಷ್ಟು ಮಾತ್ರವೇ ಹೇಳಿ ಬೇಸರದಿಂದ ಹೋಗುತ್ತಾರೆ.
ಇನ್ನು ಬಾಕ್ಸರ್ ಮೇರಿ ಕೋಮ್, ಸಹ ತಯಾರಾಗಿ ಬಂದಿರುತ್ತಾರೆ, ನನ್ನಿಂದ ನಟನೆ ಮಾಡಿಸಿ ನನಗೆ ನಟನೆ ಬರುತ್ತದೆ. ನಾನು ಬೇಕಾದರೆ ಪ್ರಿಯಾಂಕಾ ಚೋಪ್ರಾರ ಜೀವನದ ಬಗ್ಗೆ ಸಿನಿಮಾ ಮಾಡ್ತೀನಿ, ನಾನು ಪ್ರಿಯಾಂಕಾ ಚೋಪ್ರಾ ಪಾತ್ರ ಮಾಡ್ತೀನಿ ಎನ್ನುತ್ತಾರೆ. ಅಳುವಂತೆ ನಟಿಸಿಯೂ ತೋರಿಸುತ್ತಾರೆ. ಬೈಚುಂಗ್ ಬುಟಿಯಾ ಸಹ ಜಾಹೀರಾತಿನಲ್ಲಿದ್ದಾರೆ.
ಕ್ರೆಡ್ ಸದಾ ಇಂಥಹಾ ತಮಾಷೆಯ ಜಾಹೀರಾತುಗಳಿಂದ ಗಮನ ಸೆಳೆಯುತ್ತದೆ. ಅದರಲ್ಲಿಯೂ ಕ್ರೀಡಾಪಟುಗಳನ್ನಷ್ಟೆ ಹೆಚ್ಚಾಗಿ ಬಳಸಿಕೊಳ್ಳುತ್ತದೆ. ಈ ಜಾಹೀರಾತು ಸಹ ಈಗ ಸಾಮಾಜಿಕ ಜಾಲತಾಣದಲ್ಲಿ ಸಂಕತ್ ವೈರಲ್ ಆಗುತ್ತಿದೆ.