Don't Miss!
- News Hubballi: ರಾಜ್ಯ ಸರ್ಕಾರದ ವಿರುದ್ಧ ಭಾರೀ ಪ್ರತಿಭಟನೆ: ನೇಹಾ ನಿವಾಸಕ್ಕೆ ಶ್ರೀಗಳು, ಲಕ್ಷ್ಮಿ ಹೆಬ್ಬಾಳ್ಕರ್ ಭೇಟಿ: ಪೊಲೀಸ್ ಅಭಯ
- Technology ನಿಮ್ಮ ಬಳಿ ರೆಡ್ಮಿಯ ಈ ಫೋನ್ ಇದ್ರೆ, ಇಲ್ಲಿದೆ ನಿಮಗೆ ಗುಡ್ನ್ಯೂಸ್!
- Automobiles Mahindra: ದೊಡ್ಡ ಅಪಘಾತ ತಪ್ಪಿಸಿತು XUV700 ಕಾರಿನ ಈ ಸೇಫ್ಟಿ ಫೀಚರ್: ಎಲ್ಲರೂ ಸೇಫ್!
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Sports LSG vs CSK IPL 2024: ಐಪಿಎಲ್ನಲ್ಲಿ ಇತಿಹಾಸ ಸೃಷ್ಟಿಸಿದ ಎಂಎಸ್ ಧೋನಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪಾಕಿಸ್ತಾನದ ನಿಜ ಬಣ್ಣ ಬಯಲು ಮಾಡ್ತೀನಿ: ಮಾಜಿ ಪಾಕ್ ಗಾಯಕ
ಪಾಕಿಸ್ತಾನದಲ್ಲಿ ಕಲೆಗೆ ಕೆಲವು ನಿಬಂಧನೆಗಳಿವೆ. ಸಿನಿಮಾಗಳನ್ನು ಬ್ಯಾನ್ ಮಾಡಿದ್ದ ಪಾಕಿಸ್ತಾನ ಇತ್ತೀಚೆಗೆ ಮತ್ತೆ ಸಿನಿಮಾಗಳಿಗೆ ಅವಕಾಶ ನೀಡಿದೆಯಾದರೂ ಕಠಿಣವಾದ ಸೆನ್ಸಾರ್ಶಿಪ್ ಅಲ್ಲಿದೆ.
ಸ್ವತಂತ್ರ್ಯ ಆಲೋಚನೆಗಳಿಗೆ, ಅಭಿವ್ಯಕ್ತಿಗೆ ಅವಕಾಶ ಕಡಿಮೆಯೆಂಬ ಕಾರಣಕ್ಕೆ ಹಲವು ಕಲಾವಿದರು, ಚಿಂತಕರು ಪಾಕ್ ಬಿಟ್ಟು ಬೇರೆ ದೇಶಗಳಲ್ಲಿ ಸೆಟಲ್ ಆದ ಉದಾಹರಣೆಗಳಿವೆ. ಅವುಗಳನ್ನು ಒಬ್ಬರು ಖ್ಯಾತ ಗಾಯಕ ಅದ್ನಾನ್ ಸಮಿ.
ಆಸ್ಕರ್ಗೆ ಆಯ್ಕೆಯಾಗಿದ್ದ ಸಿನಿಮಾವನ್ನೇ ಬ್ಯಾನ್ ಮಾಡಿದ ಪಾಕಿಸ್ತಾನ! ಕಾರಣ?
ಕನ್ನಡ ಸೇರಿದಂತೆ ಭಾರತದ ಹಲವು ಭಾಷೆಗಳಲ್ಲಿ ಹಾಡು ಹಾಡಿರುವ ಅದ್ನಾನ್ ಸಮಿ ಮೂಲತಃ ಪಾಕಿಸ್ತಾನಿ ಆದರೆ 2016 ರಲ್ಲಿ ಅರ್ಜಿ ಹಾಕಿ ಭಾರತದ ನಾಗರೀಕತೆ ಪಡೆದುಕೊಂಡು ಇಲ್ಲಿಯೇ ವಾಸವಿದ್ದಾರೆ. ಇದೀಗ ಅದ್ನಾನ್ ಸಮಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಒಂದು ಪೋಸ್ಟ್ನಲ್ಲಿ ತಮ್ಮ ಮಾಜಿ ದೇಶ ಪಾಕಿಸ್ತಾನದ ವಿರುದ್ಧ ಕಿಡಿ ಕಾರಿದ್ದಾರೆ.
ನೀನ್ಯಾಕೆ ಪಾಕಿಸ್ತಾನದ ವಿರುದ್ಧ ಮಾತನಾಡುತ್ತೀಯ ಎಂದು ಕೇಳುತ್ತಾರೆ. ಸತ್ಯವೇನೆಂದರೆ, ನಾನು ಪಾಕಿಸ್ತಾನದ ಜನರ ವಿರುದ್ಧ ಅಸಹನೆ ಹೊಂದಿಲ್ಲ. ಅವರು ಸದಾ ನನ್ನನ್ನು ಪ್ರೀತಿಸಿದ್ದಾರೆ. ನನ್ನ ಅಸಮಾಧಾನ ಇರುವುದು ಅಲ್ಲಿನ ವ್ಯವಸ್ಥೆ ಬಗ್ಗೆ. ಯಾರು ನನ್ನನ್ನು ಹತ್ತಿರದಿಂದ ಬಲ್ಲರೊ ಅವರಿಗೆ ಗೊತ್ತು, ನನ್ನೊಂದಿಗೆ ಅಲ್ಲಿನ ವ್ಯವಸ್ಥೆ ಹೇಗೆ ನಡೆದುಕೊಂಡಿತು ಎಂದು. ಸತತವಾಗಿ ನನಗೆ ಸಮಸ್ಯೆ ನೀಡುತ್ತಲೇ ಬಂದಿತು. ಹಾಗಾಗಿ ನಾನು ಪಾಕಿಸ್ತಾನವನ್ನು ತೊರೆಯಬೇಕಾಯಿತು'' ಎಂದಿದ್ದಾರೆ.
''ಖಂಡಿತ ಒಂದಲ್ಲ ಒಂದು ದಿನ ಪಾಕಿಸ್ತಾನದ ನಿಜ ಬಣ್ಣವನ್ನು ನಾನು ಬಯಲು ಮಾಡುತ್ತೀನಿ. ಅಲ್ಲಿನ ವ್ಯವಸ್ಥೆ ನನ್ನೊಂದಿಗೆ ಹೇಗೆ ನಡೆದುಕೊಂಡಿತು ಎಂದು ಹೇಳುತ್ತೇನೆ. ನಾನು ಹೇಳುವ ಆ ವಿಷಯ ಅಲ್ಲಿನ ಸಾಕಷ್ಟು ಜನರನ್ನು ಆಶ್ಚರ್ಯಕ್ಕೆ ದೂಡಬಹುದು. ಇಷ್ಟು ವರ್ಷ ನಾನು ಮೌನವಾಗಿಯೇ ಇದ್ದೆ. ಆದರೆ ಒಂದಲ್ಲ ಒಂದು ದಿನ ಖಂಡಿತ ಈ ಬಗ್ಗೆ ನಾನು ಮೌನ ಮುರಿಯುತ್ತೇನೆ'' ಎಂದಿದ್ದಾರೆ ಅದ್ನಾನ್ ಸಮಿ.
ಅದ್ನಾನ್ ಸಮಿ ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕರಾಗಿದ್ದಾರೆ. ಅವರು ಪಾಕಿಸ್ತಾನದಲ್ಲಿದ್ದಾಗಲೂ ಅವರ ಹಾಡುಗಳು ಭಾರತದಲ್ಲಿ ಸೂಪರ್ ಹಿಟ್ ಆಗುತ್ತಿದ್ದವು. ಅವರಿಗೆ ಭಾರತದ ನಾಗರೀಕತೆ ದೊರಕುವ ಮೊದಲೂ ಸಹ ಇಲ್ಲಿನ ಹಲವು ಸಿನಿಮಾಗಳಿಗೆ ಅವರು ಹಾಡು ಹಾಡಿದ್ದರು.
ಪಾಕಿಸ್ತಾನದ ಚಿಂತಕ ತಾರೆಖ್ ಫತಾಹ್ ಸೇರಿದಂತೆ ಹಲವರು ಭಾರತದ ನಾಗರೀಕತೆ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಕೇಂದ್ರ ಸರ್ಕಾರವೇ ಈ ಹಿಂದೆ ಕೊಟ್ಟಿರುವ ಮಾಹಿತಿಯಂತೆ 2015 ರಲ್ಲಿ 263 ಪಾಕಿಸ್ತಾನಿಯರಿಗೆ ಭಾರತದ ನಾಗರೀಕತೆ ನೀಡಲಾಗಿದೆ. 2016 ರಲ್ಲಿ 63 ಪಾಕಿಸ್ತಾನಿಯರಿಗೆ ಭಾರತದ ನಾಗರೀಕತೆ ನೀಡಲಾಗಿದೆ. 2014 ರಲ್ಲಿ 267 ಪಾಕಿಸ್ತಾನಿಯರಿಗೆ ಭಾರತದ ನಾಗರೀಕತೆ ನೀಡಲಾಗಿದೆ. ಇದರಲ್ಲಿ ಕಲಾವಿದರು, ಚಿಂತಕರು ಇದ್ದಾರೆ.