Don't Miss!
- News Lok Sabha Election 2024 Phase 1 Polling LIVE: ಲೋಕಸಭಾ ಚುನಾವಣೆ 2024ರ ಮೊದಲ ಹಂತದ ಮತದಾನ!
- Sports RCB vs KKR IPL 2024: ಕೆಕೆಆರ್ ವಿರುದ್ಧ ಆರ್ಸಿಬಿ ಹಸಿರು ಜೆರ್ಸಿಯಲ್ಲಿ ಕಣಕ್ಕೆ; ಅಂದೇ ಏಕೆ?
- Lifestyle ಮನೆಯಲ್ಲಿ ಸುಲಭವಾಗಿ ಬೀನ್ಸ್ ಬೆಳೆಯಬಹುದು..! ಹೇಗೆ ನೋಡಿ..!
- Automobiles ಎಲೆಕ್ಟ್ರಿಕ್ ಕಾರು ಖರೀದಿಸಿ ಪರಿಸರ ಪ್ರೇಮ ಮೆರೆದ ನಟಿ: ಬೆಲೆ ಕೇಳಿದ್ರೆ ತಲೆ ತಿರುಗುತ್ತೆ!
- Finance ಬಿಸಿಲ ಬೇಗೆಯಿಂದ ರಕ್ಷಿಸಿಕೊಳ್ಳಲು ಟ್ರಾಫಿಕ್ ಪೊಲೀಸರಿಗೆ ರಿಲಿಫ್: ಬಂತು ಹವಾನಿಯಂತ್ರಿತ ಎಸಿ ಹೆಲ್ಮೆಟ್!
- Technology Samsung: ಸ್ಯಾಮ್ಸಂಗ್ನ ಈ ಸರಣಿ ಫೋನ್ಗಳಲ್ಲಿ ಗ್ರೀನ್ ಲೈನ್ ಸಮಸ್ಯೆ! ವರದಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸಾವಿರ ಚಿತ್ರಗಳ ಸರದಾರನಾದ ಇಳಯರಾಜ
70ರ ದಶಕದಿಂದ ಇಲ್ಲಿಯವರೆಗೂ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ಸಂಗೀತ ಧಾರೆ ಹರಿಸಿರುವ ಸಂಗೀತ ಜ್ಞಾನಿ ಇಳಯರಾಜ ಅವರು ಈಗ ತಮ್ಮ ವೃತ್ತಿ ಬದುಕಿನ 1000ನೇ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಬಾಲ ಅವರ ಚಿತ್ರಕ್ಕೆ ಇಳಯರಾಜ ಸ್ವರ ಸಂಯೋಜನೆಯಾಗುತ್ತಿದೆ.
1000ನೇ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದೀರಲ್ಲ ಏನು ಅನ್ನಿಸುತ್ತದೆ ಎಂದರೆ ಮಗುವಿನ ಮುಗ್ಧ ನಗೆ ಚೆಲ್ಲುತ್ತಾ ತುಂಬಾ ಸಂತೋಷದ ಸಂಗತಿ ನನ್ನ ಕರ್ತವ್ಯ ಅಚ್ಚುಕಟ್ಟಾಗಿ ನಿಭಾಯಿಸಿ ಜನರಿಗೆ ಸಂತೋಷ ನೀಡುವುದೇ ನನ್ನ ಸಂಯೋಜನೆಯ ಮುಖ್ಯ ಉದ್ದೇಶ ಎಂದಿದ್ದಾರೆ. ತಾರೈ ತಾಪ್ಪಟ್ಟೈ ಎಂಬ ಚಿತ್ರಕ್ಕೆ ಇಳಯರಾಜ ಅವರು ಈಗ ರಾಗ ಹೊಸೆಯುತ್ತಿದ್ದಾರೆ.
ಪ್ರಶಸ್ತಿ
ವಿಜೇತ
ನಿರ್ದೇಶಕ
ಬಾಲ
ಅವರ
ಚಿತ್ರದಲ್ಲಿ
ನಾಡೋಡಿಗಳ್
ಖ್ಯಾತಿಯ
ಶಶಿಕುಮಾರ್
ಹಾಗೂ
ಪೋಡಾ
ಪೋಡಿ
ಖ್ಯಾತಿಯ
ವರಲಕ್ಷ್ಮಿ
ಮುಖ್ಯಭೂಮಿಕೆಯಲ್ಲಿದ್ದಾರೆ.
ಥೇಣಿ
ಹಾಗೂ
ಮದುರೈನಲ್ಲಿ
ಚಿತ್ರದ
ಶೂಟಿಂಗ್
ಸದ್ಯಕ್ಕೆ
ಜಾರಿಯಲ್ಲಿದೆ.
ತಮಿಳುನಾಡಿನ
ಜಾನಪದ
ಶೈಲಿಯ
ಕರಗಾಟ್ಟಂ
ನೃತ್ಯಗಾರ್ತಿಯಾಗಿ
ವರಲಕ್ಷ್ಮಿ
ಕಾಣಿಸಿಕೊಳ್ಳಲಿದ್ದಾರೆ.
ಶಶಿಕುಮಾರ್
ಅವರು
ಚಿಗುರು
ಮೀಸೆ
ಹೈದನಾಗಿ
ನಾದಸ್ವರ
ಬಾರಿಸಲಿದ್ದಾರೆ.
ಬಾಲ ಹಾಗೂ ಇಳಯರಾಜ ಜೋಡಿ ಈಗಗಾಲೇ ಉತ್ತಮ ಸಂಗೀಮಯ ಚಿತ್ರಗಳ ಆಲ್ಬಂಗಳನ್ನು ನೀಡಿದೆ. ಸೇತು, ಪಿತಾಮಗನ್, ನಾನ್ ಕಡವುಳ್ ಚಿತ್ರಗಳ ಗೀತ ಸಾಹಿತ್ಯ, ಸ್ವರ ಸಂಯೋಜನೆ ಅಲ್ಲದೆ ಚಿತ್ರದ ಹಿನ್ನೆಲೆ ಸಂಗೀತ ಕೂಡಾ ಜನ ಮೆಚ್ಚುಗೆ ಗಳಿಸಿತ್ತು. ಸುಮಾರು ಐದು ವರ್ಷಗಳ ನಂತರ ಈ ಜೋಡಿ ಮತ್ತೆ ಒಂದಾಗಿದ್ದು, ಅದರಲ್ಲೂ ಈ ಚಿತ್ರ ಇಳಯರಾಜ ಅವರ 1000ನೇ ಚಿತ್ರವಾಗಿರುವುದು ಅಭಿಮಾನಿಗಳ ಕಾತುರ ಹೆಚ್ಚಿಸಿದೆ.
ಭಾರತೀಯ ಸಂಗೀತಕ್ಕೆ ಹೊಸ ಆಯಾಮ ನೀಡಿರುವ ಇಳಯರಾಜ ಅವರ ಚಿತ್ರ ಸಂಗೀತ ಹಲವು ಬಾರಿ ಜಗತ್ತಿನ ಗಮನ ಸೆಳೆದಿತ್ತು. ದಳಪತಿ ಚಿತ್ರದ ಹಾಡು 1991ರಲ್ಲಿ ವಿಶ್ವದ ಜನಪ್ರಿಯ ಹಾಡುಗಳ ಟಾಪ್ 10 ಪಟ್ಟಿಯಲ್ಲಿ ಕಾಣಿಸಿಕೊಂಡಿತ್ತು.
ಬುಡಾಪೆಸ್ಟ್, ಲಂಡನ್ ನಲ್ಲಿ ಸಿಂಫೋನಿ ಆರ್ಕೆಸ್ಟ್ರಾ ಸಂಯೋಜನೆ ಮಾಡಿದ ಪ್ರಪ್ರಥಮ ದಕ್ಷಿಣ ಭಾರತೀಯ ಸಂಗೀತಗಾರ ಎಂಬ ಕೀರ್ತಿ ಇಳಯರಾಜ ಅವರಿಗೆ ಸಲ್ಲುತ್ತದೆ. ಮಕ್ಕಳಾದ ಯುವನ್ ಶಂಕರ್ ರಾಜ, ಕಾರ್ತಿಕ್ ರಾಜ, ಮಗಳು ಭವತಾರಿಣಿ ಎಲ್ಲರೂ ಸಂಗೀತ ಕ್ಷೇತ್ರದಲ್ಲಿ ತೊಡಗಿಕೊಂಡಿದ್ದಾರೆ. ಕನ್ನಡ ಸೇರಿದಂತೆ ಬಹುಭಾಷೆಯಲ್ಲಿ ತೆರೆ ಕಂಡ ಪ್ರಕಾಶ್ ರೈ ನಿರ್ದೇಶನದ ಒಗ್ಗರಣೆ ಚಿತ್ರದಲ್ಲೂ ಮೆಲುಕು ಹಾಕುವಂಥ ಟ್ಯೂನ್ ಗಳನ್ನು ಇಳಯರಾಜ ನೀಡಿದ್ದಾರೆ.