Don't Miss!
- News ಲೋಕಸಭಾ ಚುನಾವಣೆ: ಮೈಸೂರು ಜಿಲ್ಲೆಯಲ್ಲಿ ಭದ್ರತೆಗೆ 5 ಸಾವಿರ ಪೊಲೀಸರ ನಿಯೋಜನೆ
- Sports IPL 2024: ಆರ್ಸಿಬಿಗೆ ವಿರಾಟ್, ಪಾಟಿದಾರ್ ಆಸರೆ: ಹೈದರಾಬಾದ್ಗೆ ಸವಾಲಿನ ಟಾರ್ಗೆಟ್
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಸೈಕಲ್ ಗ್ಯಾಪ್ ಅಲ್ಲಿ' ಭಟ್ಟರ ಮೇಲೆ ಗೀತ ಪ್ರಹಾರ
ಯೋಗರಾಜ ಭಟ್ಟರಿಂದ ಸಿನೆಮಾ ಗೀತೆಗಳನ್ನು ಕೇಳುತ್ತಾ ಬಂದಿದ್ದೀರಾ. ಆದರೆ ಈ 'ಸೈಕಲ್ ಗ್ಯಾಪ್ ಅಲ್ಲಿ' ಸಿನಿಮಾಕ್ಕೆ ಯೋಗರಾಜ ಭಟ್ಟರ ಮೇಲೆ ಒಂದು ಗೀತೆ ಹೊಸೆಯಲಾಗಿದೆ. "ಕೇಳೋದು ಸ್ವಲ್ಪ ಕಷ್ಟ, ಆದ್ರೂ ಭಟ್ರ ಸಾಂಗೆ ಬೇಟರ್ರು, ಅದ್ರಲ್ಲಿ ಸ್ವಲ್ಪ ಹಾಸ್ಯ ಇದ್ರು, ಹಾಡು ಮಾತ್ರ ಸುಮಾರು, ಇವರು ಮುಂಗಾರು ಮಳೆ ಡೈರಕ್ಟರ್ ಸಾಧು ಪ್ರಾಣಿ ತರಹ ಕ್ಯಾರಕ್ಟರ್..." ಹೀಗೆ ಸಾಗುತ್ತದೆ ಈ ಹಾಡು.
ಈ ಹಾಡನ್ನು ತಾವರೆಕೆರೆ ಅಡ್ಡ ಸೆಟ್ ನಲ್ಲಿ ಚಿತ್ರೀಕರಣ ಮಾಡಲಾಗುವುದು. ನವೀನ್ ರಚಿಸಿರುವ ಈ ಹಾಡನ್ನು ಸಂಗೀತ ನಿರ್ದೇಶಕ ಶ್ರೀಹರ್ಷ ಅವರು ಈಗಾಗಲೇ ರೆಕಾರ್ಡ್ ಮಾಡಿಕೊಂಡಿದ್ದಾರೆ. ಮನೋಜ್ ಎಂಟರ್ ಪ್ರೈಸಸ್ ಲಾಂಛನದಲ್ಲಿ ಸೂರ್ಯ ಪ್ರಭು ನಾಯಕರಾದ (ಈ ಹಿಂದೆ ಇವರು 'ಉಯ್ಯಾಲೆ' ಚಿತ್ರದಲ್ಲಿ ಅಭಿನಯಿಸಿದ್ದರು). ಇದೀಗ ಅವರು ಸಹೋದರ ರಘು ಅವರ ನಿರ್ಮಾಣದಲ್ಲಿ ಮಾರುತಿ ಅವರು ಆಕ್ಷನ್ ಕಟ್ ಹೇಳುತ್ತಿದ್ದಾರೆ. [ಭಟ್ಟರ 'ವಾಸ್ತು ಪ್ರಕಾರ' ಸಾಂಗು ಹೆಂಗೈತೆ ಹೇಳ್ರಪಾ]
ಈ 'ಸೈಕಲ್ ಗ್ಯಾಪ್ ಅಲ್ಲಿ' ಚಿತ್ರದ ನಾಯಕಿ ದೀಪಿಕಾ ದಾಸ್. ಐದು ಹಾಡುಗಳ ರಾಗ ಸಂಯೋಜಕರು ಶ್ರೀಹರ್ಷ. ಹ್ಯಾರೀಸ್ ಜಾನಿ ಅವರು ಎರಡು ಸಾಹಸ ಸನ್ನಿವೇಶಗಳು ಚಿತ್ರದಲ್ಲಿರುತ್ತವೆ. ನಿರಂಜನ್ ಬಾಬು ಅವರು ರೆಡ್ ಎಪಿಕ್ ಕ್ಯಾಮೆರಾದಲ್ಲಿ ಈ ಸಿನಿಮಾವನ್ನು ಸೆರೆಹಿಡಿಯಲಿದ್ದಾರೆ. (ಒನ್ಇಂಡಿಯಾ ಕನ್ನಡ)