Don't Miss!
- Lifestyle ಗುಡ್ಫ್ರೈಡೆ ಆಚರಣೆ ಹುಟ್ಟಿದ್ದು ಹೇಗೆ? ಇದರ ಮಹತ್ವವೇನು ಗೊತ್ತಾ?
- Sports Hardik Pandya: ಹಾರ್ದಿಕ್ ಪಾಂಡ್ಯರಲ್ಲಿನ ನಾಯಕತ್ವದ ಗುಣಗಳು ಕಾಣೆಯಾಗಿವೆಯಾ?
- Finance ಕಳೆದ 5 ವರ್ಷಗಳಲ್ಲಿ ಸಂಸದ ಡಿಕೆ ಸುರೇಶ್ ಅವರ ಆಸ್ತಿ 75% ರಷ್ಟು ಹೆಚ್ಚಳ, ವಿವರ
- Technology ಬಿಎಸ್ಎನ್ಎಲ್ ಗ್ರಾಹಕರಿಗೆ ಸಿಹಿಸುದ್ದಿ!..ಬಜೆಟ್ ದರದಲ್ಲಿ ಹೊಸ ಪ್ಲ್ಯಾನ್ ಲಾಂಚ್!
- News Gold Price: ಇಂದು ಮತ್ತಷ್ಟು ಹೆಚ್ಚಾದ ಬಂಗಾರದ ಬೆಲೆ: ಬೆಳ್ಳಿಯೂ ಬಲು ದುಬಾರಿ
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
"ಎಣ್ಣೆ ಹೊಡೆಯೋ ಟೈಮಲ್ಲಿ ನನ್ನ ಸ್ವಲ್ಪ ನೆನಸಿಕೊಳ್ಳಿ.." ಎಂದ ಮಂಗ್ಲಿ
'ರಾಬರ್ಟ್' ಸಿನಿಮಾ ತೆಲುಗು ಅವತರಣಿಕೆಯಲ್ಲಿ ಕಣ್ಣೇ ಅದಿರಿಂದಿ ಅಂತ ಹಾಡಿದ್ದ ಮಂಗ್ಲಿ ಕನ್ನಡಿಗರಿಗೆ ತೀರ ಹತ್ತಿರವೆನಿಸಿದ್ದರು. ಈಗ ಬ್ಯಾಕ್ ಟು ಬ್ಯಾಕ್ ಕನ್ನಡ ಹಾಡುಗಳನ್ನು ಮಂಗ್ಲಿ ಹಾಡುತ್ತಿದ್ದಾರೆ. ಇತ್ತೀಚೆಗೆ ಮತ್ತೊಂದು ಕನ್ನಡ ಸಿನಿಮಾದ ಹಾಡಿಗೆ ತೆಲುಗು ಗಾಯಕಿ ಮಂಗ್ಲಿ ಧ್ವನಿಯಾಗಿದ್ದಾರೆ.
ಮಂಗ್ಲಿ ಈಗ ಕನ್ನಡಿಗರಿಗೂ ತುಂಬಾನೇ ಚೆನ್ನಾಗಿ ಪರಿಚಯವಿದೆ. ಗಾಯಕಿ ಅಷ್ಟೇ ಅಲ್ಲ ಕನ್ನಡ ಸಿನಿಮಾವೊಂದಕ್ಕೆ ನಾಯಕಿಯಾಗಿಯೂ ನಟಿಸುತ್ತಿದ್ದಾರೆ. ಈಗ ಕನ್ನಡದ 'ಸೈರನ್' ಅನ್ನೋ ಸಿನಿಮಾಗೆ ಮಂಗ್ಲಿ ಹಾಡಿದ್ದು, ಎಣ್ಣೆ ಪ್ರಿಯರಿಗೆ ಮನಮೆಚ್ಚಿಸುವಂತಿದೆ.
ರಶ್ಮಿಕಾ ಮಂದಣ್ಣ ಹಾಡಿಗೆ ತಾಯಿ ಗರ್ಭದಲ್ಲಿರುವ ಮಗು ಡ್ಯಾನ್ಸ್: ವಿಡಿಯೋ ಫುಲ್ ವೈರಲ್
ಕನ್ನಡ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಅವರ ಪುತ್ರ ಪ್ರವೀರ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ ಸಿನಿಮಾ 'ಸೈರನ್'. ಈ ಸಿನಿಮಾದ ಎಣ್ಣೆ ಹಾಡನ್ನು ಮಂಗ್ಲಿ ಹಾಡಿದ್ದಾರೆ. "ಎಣ್ಣೆ ಹೊಡೆಯೋ ಟೈಮಲ್ಲಿ ನನ್ನ ಸ್ವಲ್ಪ ನೆನಸಿಕೊಳ್ಳಿ.." ಅಂತ ಹಾಡಿರೋ ಹಾಡಿನ ಝಲಕ್ ಈಗಾಗ್ಲೇ ಸಂಗೀತ ಪ್ರಿಯರಿಗೆ ಕಿಕ್ ಕೊಡುತ್ತಿದೆ.
ಪ್ರವೀರ್ ಶೆಟ್ಟಿ ನಾಯಕನಾಗಿ ನಟಿಸುತ್ತಿರುವ 'ಸೈರನ್' ಸಿನಿಮಾವನ್ನು ರಾಜ ವೆಂಕಯ್ಯ ನಿರ್ದೇಶನ ಮಾಡಿದ್ದಾರೆ. ಭಾರದ್ವಾಜ್ ಸಂಗೀತ ನೀಡಿರುವ "ಎಣ್ಣೆ ಹೊಡೆಯೋ ಟೈಮಲ್ಲಿ ನನ್ನ ಸ್ವಲ್ಪ ನೆನಸಿಕೊಳ್ಳಿ.." ಹಾಡಿಗೆ ಚಿನ್ಮಯ್ ಬಾವಿಕೆರೆ ಸಾಹಿತ್ಯ ರಚಿಸಿದ್ದಾರೆ. ಈ ಹಾಡು ಇದೇ ತಿಂಗಳ 24ರಂದು ರಿಲೀಸ್ ಆಗುತ್ತಿದೆ.
ಡೋಂಟ್ ಮೆಸ್ ವಿತ್ ಹಿಮ್, ಇರಲಿ ಜಾಗೃತೆ: 'ಕ್ರಾಂತಿ'ಯ ಹೊಸ ಮಾಸ್ ಹಾಡು ಬಿಡುಗಡೆ
'ಸೈರನ್' ಸಿನಿಮಾದಲ್ಲಿ ಲಾಸ್ಯ ನಾಯಕಿಯಾಗಿ ನಟಿಸುತ್ತಿದ್ದಾರೆ. ಇವರೊಂದಿಗೆ ಶರತ್ ಲೋಹಿತಾಶ್ವ, ಅಚ್ಯುತ್ ಕುಮಾರ್, ಪವಿತ್ರಾ ಲೋಕೇಶ್, ಸ್ಪರ್ಶ ರೇಖಾ, ಸಾಯಿ ಧೀನ ಸೇರಿದಂತೆ ಕನ್ನಡ ಪ್ರಮುಖ ಕಲಾವಿದರು ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಬಿಜು.ಶಿವಾನಂದ್ 'ಸೈರನ್' ಸಿನಿಮಾಗೆ ಹಣ ಹೂಡಿದ್ದರೆ, ರಾಜ ವೆಂಕಯ್ಯ ನಿರ್ದೇಶನ ಮಾಡಿದ್ದಾರೆ. ನಾಗೇಶ್ ವಿ ಆಚಾರ್ಯ ಕ್ಯಾಮರಾವರ್ಕ್ ಮಾಡಿದ್ದಾರೆ. ವಾಲಿ ಕುಲೇಸ್ ಸಂಕಲನ, ಚಂದ್ರು ಬಂಡೆ, ನರಸಿಂಹ ಸಾಹಸ ನಿರ್ದೇಶನ ಹಾಗೂ ಕಲೈ ಅವರ ನೃತ್ಯ ನಿರ್ದೇಶನವಿದೆ.
ಕನ್ನಡಿಗರ ಕೋಪದ ಬೆನ್ನಲ್ಲೆ ತುಳು ಸಿನಿಮಾಕ್ಕೆ ಹಾಡಿದ ಮಂಗ್ಲಿ
ಮಂಗ್ಲಿ ವಿಶಿಷ್ಟ ಗಾಯನದ ಶೈಲಿಗೆ ಸಂಗೀತಗಾರರು ಫಿದಾ ಆಗಿದ್ದಾರೆ. 'ಏಕ್ ಲವ್ ಯಾ' ಸಿನಿಮಾದ "ಎಣ್ಣೆಗೂ ಹೆಣ್ಣಿಗೂ.." ಕನ್ನಡದಲ್ಲಿ ಹಾಡಿದ ಮೊದಲ ಹಾಡು. ಆ ಬಳಿಕ 'ಪುಷ್ಪ' ಸಿನಿಮಾದ ಕನ್ನಡ ಅವತರಣಿಕೆಯ " ಊ ಅಂತಿಯಾ..ಊಹುಂ ಅಂತಿಯಾ.." ಅನ್ನೋ ಹಾಡನ್ನು ಹಾಡಿ ಮತ್ತಷ್ಟು ಜನಪ್ರಿಯತೆಯನ್ನು ಗಳಿಸಿದ್ದಾರೆ.
ಇತ್ತೀಚೆಗಷ್ಟೇ ಸೆಂಚುರಿ ಸ್ಟಾರ್ ಶಿವರಾಜ್ಕುಮಾರ್ ಅಭಿನಯದ 125ನೇ ಸಿನಿಮಾ 'ವೇದ'ದಲ್ಲಿ ಹಾಡಿದ "ಗಿಲಕ್ಕು ಶಿವ.." ಹಾಡು ಕೂಡ ಫೇಮಸ್ ಆಗಿತ್ತು. ಆ ಬಳಿಕವೇ ಈಗ 'ಸೈರನ್' ಸಿನಿಮಾ ಎಣ್ಣೆ ಹಾಡಿಗೆ ಧ್ವನಿ ನೀಡಿದ್ದಾರೆ.