Don't Miss!
- News KRS ಸುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆ: ಖಡಕ್ ಎಚ್ಚರಿಕೆ ನೀಡಿದ ಹೈಕೋರ್ಟ್
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಉಪೇಂದ್ರ ರಿಯಲ್ ಸ್ಟಾರ್ ಅಲ್ಲ ಕರ್ನಾಟಕದ ಅಧಿಪತಿ
ಉಪೇಂದ್ರ ಇನ್ನು ಮುಂದೆ ರಿಯಲ್ ಸ್ಟಾರ್ ಅಲ್ಲ! ಅವರು ಇನ್ನೇನಿದ್ದರೂ ಕರ್ನಾಟಕದ ಅಧಿಪತಿ. ಹೌದು ಹಾಗಂತ ಅವರಿಗೆ ಹೊಸ ಬಿರುದನ್ನು ಪ್ರಸಾದಿಸಿದ್ದಾರೆ ಉಪೇಂದ್ರ ಅಭಿಮಾನಿಗಳ ಸಂಘ. ಅವರ ಅಭಿನಯದ ಸೂಪರ್ ಚಿತ್ರದ 125 ದಿನಗಳ ಸಂಭ್ರಮದಲ್ಲಿ ಉಪ್ಪಿ ಅಭಿಮಾನಿಗಳ ಸಂಘ ಈ ಹೊಸ ಬಿರುದನ್ನು ನೀಡಿ ಗೌರವಿಸಿದೆ.
ತಮ್ಮ ನೆಚ್ಚಿನ ನಾಯಕ ನಟನಿಗೆ ಅಭಿಮಾನಿಗಳು ಮೈಸೂರು ಪೇಟ ತೊಡಿಸಿ, ಹಾರ ಹಾಕಿ, ಶಾಲು ಹೊದಿಸುವ ಮೂಲಕ ಕರ್ನಾಟಕದ ಅಧಿಪತಿ ಬಿರುದು ನೀಡಿ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಉಪೇಂದ್ರ ಅವರ ತಂದೆ ಮಂಜುನಾಥ್, ತಾಯಿ ಅನಸೂಯ ಹಾಗೂ ಪತ್ನಿ ಪ್ರಿಯಾಂಕ ಅವರನ್ನು ಸನ್ಮಾನಿಸಲಾಯಿತು.
ದಕ್ಷಿಣ ಭಾರತದ ಜನಪ್ರಿಯ ನಟ,ನಿರ್ದೇಶಕ ಹಾಗೂ ನಿರ್ಮಾಪಕ ಪ್ರಕಾಶ್ ರೈ ಅವರು ಉಪೇಂದ್ರ ಅವರಿಗೆ ಸ್ಮರಣ ಸಂಚಿಕೆಯನ್ನು ನೀಡಿದರು. ಸೂಪರ್ ಚಿತ್ರದಲ್ಲಿ ಅಭಿನಯಿಸಿದ್ದ ನಯನತಾರಾ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಸಾಮಾನ್ಯವಾಗಿ ಸಿನಿಮಾ ತಾರೆಗಳಿಗೆ ನೀಡುವ ಬಿರುದು ಬಾವಲಿಗಳು ಇಂಗ್ಲಿಷ್ನಲ್ಲೇ ಇರುತ್ತವೆ. ಆದರೆ ಈಗ ಉಪೇಂದ್ರ ಅವರಿಗೆ ನೀಡಿರುವ ಬಿರುದು ಮಾತ್ರ ಕನ್ನಡದಲ್ಲೇ ಇರುವುದು ವಿಶೇಷ.