Don't Miss!
- News ಬಂಡೀಪುರ: ಹುಲಿ ದಾಳಿಯಿಂದ ಮರಿಯಾನೆ ಸಾವು, ನಡುರಸ್ತೆಯಲ್ಲೇ ಮುಗಿಲು ಮುಟ್ಟಿದ ತಾಯಿಯ ಆಕ್ರಂದನ, ವಿಡಿಯೋ ವೈರಲ್
- Technology ಒಪ್ಪೋ ಸಂಸ್ಥೆಯ ಈ ಫೋನ್ ಬೆಲೆಯಲ್ಲಿ ಭರ್ಜರಿ ಇಳಿಕೆ; ಆಫರ್ಗೆ ಗ್ರಾಹಕರು ಫಿದಾ!
- Automobiles ಭಾರತದ ರಸ್ತೆಯಲ್ಲಿ ಘರ್ಜಿಸುತ್ತಿರುವ ಪವರ್ಫುಲ್ ಎಪ್ರಿಲಿಯಾ ಬೈಕ್ಗಾಗಿ ಅಕ್ಸೆಸರೀಸ್ ಬಿಡುಗಡೆ
- Sports ಐಪಿಎಲ್ನಿಂದ ದೂರವುಳಿದಿದ್ದ ಟೀಮ್ ಇಂಡಿಯಾ ವೇಗಿ ಟಿ20 ವಿಶ್ವಕಪ್ ಆಡುತ್ತಾರಾ?: ಆಟಗಾರ ಹೇಳಿದ್ದೇನು?
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಹೋರಿಯಾಗಿ ಟೈಗರ್ ಪ್ರಭಾಕರ್ ಮಗ ವಿನೋದ್!
ಟೈಗರ್ ಪ್ರಭಾಕರ್ ಅವರ ಜೊತೆ ಹಲವಾರು ಚಿತ್ರಗಳಿಗೆ ಕೆಲಸ ಮಾಡಿದಂತಹ ನಾಗೇಂದ್ರ ಮಾಗಡಿ (ಪಾಂಡು) ಸಾಹಸ ನಿರ್ದೇಶಕನಾಗಲು ಚಿತ್ರರಂಗಕ್ಕೆ ಬಂದವರು. ಆದರೆ, ಚಿತ್ರನಿರ್ದೇಶಕರಾಗಿ ಗೆಲುವು ಸಾಧಿಸಿದರು. ಟಾಟಾ ಬಿರ್ಲಾ, ಹನಿಮೂನ್ ಎಕ್ಸ್ಪ್ರೆಸ್ನಂತಹ ಕಾಮಿಡಿ ಚಿತ್ರಗಳನ್ನು ನಿರ್ದೇಶಿಸಿದ ಪಾಂಡು ಈಗ ಆಕ್ಷನ್-ಕಾಮಿಡಿ ವಿಷಯದ ಕಥೆಯನ್ನು ಕೈಗೆತ್ತಿಕೊಂಡಿದ್ದಾರೆ.
'ಹೋರಿ' ಹೆಸರಿನ ಈ ಚಿತ್ರದಲ್ಲಿ ಪಾಂಡು ಅವರ ಗುರು ಟೈಗರ್ ಪ್ರಭಾಕರ್ ಅವರ ಪುತ್ರ ವಿನೋದ್ ಪ್ರಭಾಕರ್ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ನಂದಿನಿ ಲೇ ಔಟ್ನಲ್ಲಿರುವ ರೇಣುಕುಮಾರ್ಅವರ ರೇಣು (ಅಣ್ಣಾ) ಸ್ಟುಡಿಯೋದಲ್ಲಿ ಈ ಚಿತ್ರದ ಆರು ಹಾಡುಗಳನ್ನು ಕಳೆದ ಯುಗಾದಿ ಹಬ್ಬದಂದು ಧ್ವನಿಮುದ್ರಿಸಿಕೊಳ್ಳಲಾಯಿತು. ರೇಣು ವಾದ್ಯವೃಂದದ ಮೂಲಕ ರಾಜ್ಯಾದ್ಯಂತ ಹೆಸರಾದ ರೇಣುಕುಮಾರ್ ಎಸ್.ನಾರಾಯಣ್ ಅವರ ಜೊತೆ ಅನೇಕ ಚಿತ್ರಗಳಿಗೆ ಕೆಲಸ ಮಾಡಿದವರು. ಸಂಗೀತದ ಮೂಲಕ ನವರಸಗಳನ್ನು ತುಂಬುವ ಮಹದಾಸೆಯಿಂದ ಈ ಚಿತ್ರದ ಸಂಗೀತ ಸಂಯೋಜನೆ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾರೆ.
ಎಂ.ಆರ್. ಸೀನು ಅವರ ಛಾಯಾಗ್ರಹಣ, ಕೆ. ರಾಮನಾರಾಯಣ್ ಅವರ ಸಾಹಿತ್ಯ, ರವಿವರ್ಮರ ಸಾಹಸ ಸಂಯೋಜನೆ ಈ ಚಿತ್ರಕ್ಕಿದ್ದು, ಬಹಳ ದಿನಗಳಿಂದ ಒಂದು ಸದಭಿರುಚಿಯ ಚಿತ್ರ ನಿರ್ಮಿಸುವ ಆಸೆ ಹೊತ್ತಿದ್ದ ಲಿಂಗೇಗೌಡರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ನಾಗೇಂದ್ರ ಮಾಗಡಿ ಅವರ ಚಿತ್ರಕಥೆ ಹಾಗೂ ನಿರ್ದೇಶನ ಇದ್ದು, ಏಪ್ರಿಲ್ ಮೊದಲ ವಾರ ಪ್ರಾರಂಭಿಸಿ ಬೆಂಗಳೂರು ಸುತ್ತಮುತ್ತ ಒಂದೇ ಹಂತದಲ್ಲಿ ಚಿತ್ರೀಕರಣ ನಡೆಸಲಿದ್ದಾರೆ. ನಮ್ಮ ಬಸವ, ಗಂಡನ ಮನೆ ಖ್ಯಾತಿಯ ಗೌರಿ ಮಂಜಾಲ್ ಈ ಚಿತ್ರದ ನಾಯಕಿಯಾಗಿದ್ದು, ಉಳಿದ ತಾರಾಗಣದ ಆಯ್ಕೆ ನಡೆಯುತ್ತಿದೆ.
(ದಟ್ಸ್ ಕನ್ನಡ ಚಿತ್ರವಾರ್ತೆ)
ಇದನ್ನೂ
ಓದಿ
ಎಲ್ಲ
ಯೋಗೀಶನ
ಮಹಿಮೆ,
ಶತಕದತ್ತ
ಅಂಬಾರಿ
ಮಂಡ್ಯ
ಲೋಕಸಭೆಯಿಂದ
ನಟಿ
ರಮ್ಯಾ
ಸ್ಪರ್ಧೆ?
ಅನಂತ್
ಪರ
ನಟಿ
ತಾರಾ
ಖಡಕ್
ಪ್ರಚಾರ!
ಶಿವಣ್ಣನಿಗೆ
ಹೊಸ
ತಂಗಿಯಾಗಿ
ಮೀರಾ
ಜಾಸ್ಮಿನ್
ಶಂಕರನಾಗ್
ಚಿತ್ರಮಂದಿರಕ್ಕೆ
ಮರುಹುಟ್ಟು