Don't Miss!
- News ಮಳೆ.. ಮಳೆ.. ಗುಡುಗು ಸಹಿತ ಭರ್ಜರಿ ಮಳೆಗೆ ತತ್ತರಿಸಿದ ಕರ್ನಾಟಕ!
- Automobiles ಪೆಟ್ರೋಲ್ಗೆ ಹೆಚ್ಚು ಹಣ ಖರ್ಚು ಮಾಡುತ್ತಿದ್ದೀರಾ?.. ಇಲ್ಲಿವೆ ಉತ್ತಮ ಎಲೆಕ್ಟ್ರಿಕ್ ಸ್ಕೂಟರ್ಗಳು, ಜಾಸ್ತಿ ಓಡ
- Finance Bengaluru Traffic Police: ಬೆಂಗಳೂರಿನ ಈ ರಸ್ತೆ ಸಂಚಾರ ಮಾರ್ಗ ಬದಲಾವಣೆ, ವಿವರ
- Technology Samsung: ಭಾರತದಲ್ಲಿ ಹೊಸ ವೇರಿಯಂಟ್ನಲ್ಲಿ ಸ್ಯಾಮ್ಸಂಗ್ ಗ್ಯಾಲಕ್ಸಿ F15 5G! ಬೆಲೆ ಎಷ್ಟು?
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಲಾತ್ಮಕ ಚಿತ್ರಗಳ ಕಡೆಗೆ ಜ್ಯೋತಿ ರೈ ಒಲವು
ಕಿರುತೆರೆಯ ಜನಪ್ರಿಯ ನಟಿ ಜ್ಯೋತಿ ರೈ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡುವ ಸಿದ್ಧತೆಯಲ್ಲಿದ್ದಾರೆ. ಕಿರುತೆರೆಯಲ್ಲಿ ಇವರು ಈಗಾಗಲೇ ಪ್ರಬುದ್ಧ ಪಾತ್ರಗಳನ್ನುಪೋಷಿಸಿದ್ದಾರೆ ಮನೆಮಾತಾಗಿದ್ದಾರೆ. ಬೆಳ್ಳಿತೆರೆಯಲ್ಲೂ ಇದೇ ರೀತಿಯ ಪಾತ್ರಗಳಲ್ಲಿ ಅಭಿನಯಿಸಬೇಕು ಎಂಬುದು ಜ್ಯೋತಿ ಅವರ ಒಲವು.
ಜೀ ಕನ್ನಡ ವಾಹಿನಿಯ 'ಜೋಗುಳ' ಧಾರಾವಾಹಿಯಲ್ಲಿ ದೇವಕಿಯಾಗಿ ಹಲವು ಮಹಿಳೆಯರ ಮನಗೆದ್ದಿದ್ದಾರೆ ಜ್ಯೋತಿ. ಈ ಧಾರಾವಾಹಿಯಲ್ಲಿ ಜ್ಯೋತಿ ಅವರದು ಬಾಡಿಗೆ ತಾಯಿಯ ಪಾತ್ರ. ಅದನ್ನು ಅವರು ಮನಮಿಡಿಯುವಂತೆ ಅಭಿನಯಿಸಿ ಕಿರುತೆರೆ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ. ಹಾಗಾಗಿ ಈ ಧಾರಾವಾಹಿ 200 ಕಂತುಗಳನ್ನು ಪೂರೈಸಿದೆ.
ಈಟಿವಿ ಕನ್ನಡ ವಾಹಿನಿಯ 'ಶಾಂತಲಾ' ಮತ್ತು 'ಬಂದೇ ಬರತಾವ ಕಾಲ' ಧಾರಾವಾಹಿಗಳಲ್ಲೂ ಜ್ಯೋತಿ ರೈ ಅಭಿನಯಿಸಿದ್ದಾರೆ. ಜೋಗುಳದಲ್ಲಿನ ಅವರ ಅಭಿನಯಕ್ಕೆ ಮನಸೋತಿರುವ ಪ್ರೇಕ್ಷಕರು ಅವರನ್ನು 'ದೇವಕಿ' ಎಂದೇ ಗುರುತಿಸುತ್ತಿರುವುದೇ ಇದಕ್ಕೆ ಸಾಕ್ಷಿ.
ಮಂಗಳೂರು ಮೂಲದ ಈ ಕಿರುತೆರೆ ಬೆಡಗಿ ಬೆಳೆದದ್ದು ಮಡಿಕೇರಿಯಲ್ಲಿ. ಓದಿದ್ದು ಕಂಪ್ಯೂಟರ್ ಸೈನ್ಸ್ ನಲ್ಲಿ ಬಿಎಸ್ಸಿ ಪದವಿ. ನೆಟ್ ವರ್ಕಿಂಗ್ ಇಂಜಿನಿಯರ್ ಆಗಿರುವ ಪದ್ಮನಾಭ ರೈ ಅವರ ಕನಸುಗಳಿಗೆ ನೀರೆಯುತ್ತಿದ್ದಾರೆ. ಕಮರ್ಷಿಯಲ್ ಚಿತ್ರಗಳಿಗಿಂತ ಅಸಾಂಪ್ರದಾಯಿಕ ಚಿತ್ರಗಳ ಕಡೆಗೆ ಜ್ಯೋತಿ ಅವರ ಒಲವು ಹರಿದಿದೆ.
ಹಲವಾರು ಕಮರ್ಷಿಯಲ್ ಚಿತ್ರಗಳು ಜ್ಯೋತಿ ಅವರನ್ನು ಹುಡುಕಿಕೊಂಡು ಬಂದಿವೆ. ಆದರೆ ಅವರ ಒಲವು ಅಸಾಂಪ್ರದಾಯಿಕಚಿತ್ರಗಳ ಕಡೆಗೆ ಇರುವ ಕಾರಣ ಕಮರ್ಷಿಯಲ್ ಚಿತ್ರಗಳಲ್ಲಿ ನಟಿಸಲು ಒಪ್ಪಲಿಲ್ಲ. ಕಮರ್ಷಿಯಲ್ ಚಿತ್ರಗಳಲ್ಲಿ ಬಲವಂತವಾಗಿ ಹೇರುವ ಉಡುಗೆ ತೊಡುಗೆಗಳನ್ನು ಅವರು ಬಲವಾಗಿ ವಿರೋಧಿಸುತ್ತಾರೆ. ಒಂದೇ ಮಾತಿನಲ್ಲಿ ಹೇಳುವುದಾದರೆ 'ಮೊಗ್ಗಿನ ಮನಸು' ಚಿತ್ರದಲ್ಲಿ ರಾಧಿಕಾ ಪಂಡಿತ್ ನಿರ್ವಹಿಸಿದಂತಹ ಪಾತ್ರದಲ್ಲಿ ಅಭಿನಯಿಸಬೇಕು ಎನ್ನುತ್ತಾರೆ ಜ್ಯೋತಿ ರೈ.
(ದಟ್ಸ್ ಕನ್ನಡ ಚಿತ್ರವಾರ್ತೆ)