Don't Miss!
- News ಉಕ್ರೇನ್ ವಿರುದ್ಧ ರಷ್ಯಾ ಗಂಭೀರ ಆರೋಪ!
- Lifestyle ಯೇಸುವನ್ನು ಶಿಲುಬೆಗೆ ಹಾಕಿದ ದಿನವನ್ನು ಗುಡ್ ಪ್ರೈಡೇ ಎಂದು ಹೇಳುವುದೇಕೆ?
- Sports RR vs DC: ಅವೇಶ್ ಖಾನ್, ರಿಯಾನ್ ಪರಾಗ್ ಶೈನ್; ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ವಿನ್
- Automobiles ಸಾಟಿಯಿಲ್ಲದ ಮೈಲೇಜ್: ಈ ಮಾರುತಿ ಕಾರುಗಳು ಫುಲ್ ಟ್ಯಾಂಕ್ನಲ್ಲಿ 1200 ಕಿ.ಮೀ ಚಲಿಸುತ್ತೆ
- Finance ಷೇರು ಮಾರುಕಟ್ಟೆಯಲ್ಲಿ ಬಂಪರ್ ಲಾಟರಿ: ಹೂಡಿಕೆದಾರರಿಗೆ ಲಾಭವೋ ಲಾಭ!
- Technology Oppo: ಭಾರತದಲ್ಲಿ ಒಪ್ಪೋ F25 ಪ್ರೊ ಸ್ಮಾರ್ಟ್ಫೋನ್ ಹೊಸ ಕಲರ್ ವೇರಿಯಂಟ್ನಲ್ಲಿ! ಬೆಲೆ ಎಷ್ಟು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅನಾಥಶ್ರಮ ಮಕ್ಕಳಿಗೆಲ್ಲಾ ಗಣೇಶ್ ಉಡುಗೊರೆ!
ಗೋಲ್ಡನ್ ಸ್ಟಾರ್ ಗಣೇಶ್ ಗೆ ಪಂಚತಾರಾ ಹೋಟೆಲ್ ಗಿಂತ ಅನಾಥಾಶ್ರಮದ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಹೆಚ್ಚು ಖುಷಿ ಕೊಟ್ಟಿದೆಯಂತೆ. ಕನ್ನಡ ಚಿತ್ರರಂಗದ ಬಹುತೇಕ ತಾರೆಗಳು ಗಣೇಶ್ ಹುಟ್ಟುಹಬ್ಬಕ್ಕೆ(ಜುಲೈ 2)ವಿಡ್ಸರ್ ಮ್ಯಾನರ್ ಹೋಟೆಲ್ ಗೆ ಆಗಮಿಸಿದ್ದರು. ಇದಕ್ಕೂ ಮುನ್ನ ಗಣೇಶ್ ಅನಾಥಾಶ್ರಮದ ಮಕ್ಕಳೊಂದಿಗೆ ಕಳೆದದ್ದು ಗೊತ್ತೇ ಇದೆ.
ಬೆಂಗಳೂರು ರಾಜರಾಜೇಶ್ವರಿ ನಗರದಲ್ಲಿರುವ ಶಿವಶಕ್ತಿ ಅನಾಥಾಶ್ರಮದ ಬೌದ್ಧಿಕ ವಿಕಲಚೇತನ ಮಕ್ಕಳೊಂದಿಗೆ ಗಣೇಶ್ ಕೆಲಕಾಲ ಕಳೆದಿದ್ದರು. ದೀಪಕ್ ಎಂಬ ಬಾಲಕ ಗಣೇಶ್ ರನ್ನು ಒಂದು ಕೈಗಡಿಯಾರ ಕೊಡಿಸುವಂತೆ ಕೇಳಿದ್ದ. ಮುಗ್ಧ ಬೇಡಿಕೆಗೆ ಗಣೇಶ್ ಮೂಕನಾಗಿ ಕೊಡಿಸುವುದಾಗಿ ಭರವಸೆ ನೀಡಿದ್ದರು.
ಶನಿವಾರ(ಜು.4) ಬೆಳಗ್ಗೆ ದೀಪಕ್ ಗೆ ಕೊಡಲು ಕೈಗಡಿಯಾರ ತೆಗೆದುಕೊಂಡು ಹೋಗಿದ್ದರು. ಇದನ್ನು ನೋಡಿದ ಉಳಿದ ಮಕ್ಕಳು ಸುಮ್ಮನೆ ಇರಲು ಸಾಧ್ಯವೇ? ತಮಗೂ ಕೈಗಡಿಯಾರ ಕೊಡಿಸೆಂದು ದುಂಬಾಲು ಬಿದ್ದರು. ಗಣೇಶ್ ಅಲ್ಲಿರುವ 34 ಮಕ್ಕಳಿಗೂ ಕೈಗಡಿಯಾರ ಕೊಡಿಸಿದ್ದಾರೆ.
ಇಷ್ಟಕ್ಕ್ಕೆ ಸುಮ್ಮನಾಗ ಗಣೇಶ್ ಅನಾಥಾಶ್ರಮಕ್ಕೆಅಕ್ಕಿ ಸೇರಿದಂತೆ ದಿನಸಿ ಪದಾರ್ಥಗಳನ್ನು ದಾನಮಾಡಿ ಕೃತಾರ್ಥರಾಗಿದ್ದಾರೆ. ಪಂಚತಾರಾ ಹೋಟೆಲ್ ಗಿಂತಲೂ ಮಕ್ಕಳೊಂದಿಗೆ ಕಳೆದ ಕ್ಷಣಗಳು ಸಾರ್ಥಕ ಎಂಬುದು ಗಣೇಶ್ ಕೊಡುವ ವಿವರಣೆ.
(ದಟ್ಸ್ ಕನ್ನಡ ಚಿತ್ರವಾರ್ತೆ)