ಚಿಂಗಾರಿ ಚಿತ್ರದ ಬಗ್ಗೆ ದರ್ಶನ್ ಹೇಳಿದ ಮಾತು
ಎಲ್ಲರೂ ಕಾತರದಿಂದ ಕಾಯುತ್ತಿರುವ ದರ್ಶನ್ ಚಿತ್ರ 'ಚಿಂಗಾರಿ' ಈ ತಿಂಗಳು 27ರಂದು ತೆರೆಗೆ ಬರಲಿದೆ. ದರ್ಶನ್ ಅಭಿಮಾನಿಗಳಿಗಂತೂ ಚಿಂಗಾರಿ ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಸಹಜವಾಗಿದೆ. ಚಿಂಗಾರಿ ಆಡಿಯೋ ಬಿಡುಗಡೆ ವೇಳೆ ಚಿತ್ರದ ನಾಯಕ ದರ್ಶನ್ ಚಿತ್ರದ ಬಗ್ಗೆ ವೇದಿಕೆಯಲ್ಲಿ ಮೊದಲ ಬಾರಿಗೆ ಮಾತನಾಡಿದ್ದಾರೆ.
ತಮ್ಮ ಅಭಿಮಾನಿಗಳು ಹಾಗೂ ಸಿನಿಪ್ರೇಕ್ಷರಂತೆ ದರ್ಶನ್ ಕೂಡ ಈ ಚಿತ್ರದ ಬಗ್ಗೆ ಅಪಾರ ನಿರೀಕ್ಷೆ ಹೊಂದಿದ್ದಾರೆ. "ಹೊಡೆದಾಟ ಮತ್ತು ಹಾಡುಗಳು ಹದವಾಗಿ ಬೆರೆತ ಚಿತ್ರ 'ಚಿಂಗಾರಿ'ಗೆ ವಿದೇಶಗಳಲ್ಲಿ ಫೈಟ್ ಗಳನ್ನು ನಡೆಸಲಾಗಿದೆ. ಪ್ರತಿಯೊಂದು ಫೈಟ್ಸ್ ಸೂಪರ್ ಆಗಿದೆ. ಸಾಹಸ ಪ್ರಧಾನವಾಗಿರುವ ಇಡೀ ಸಿನಿಮಾ ವಿಶಿಷ್ಠ ಅನುಭವ ನೀಡಲಿದೆ" ಎಂದಿದ್ದಾರೆ.
ಮುಂದುವರಿದ ದರ್ಶನ್ "ಚಿತ್ರ ಎಲ್ಲಾ ವರ್ಗದ ಜನರನ್ನು ತಲುಪುವುದರಲ್ಲಿ ಸಂಶಯವೇ ಇಲ್ಲ. ಸಾಹಸ ಪ್ರಧಾನ ಚಿತ್ರವನ್ನು ಹರ್ಷ ಮೊದಲ ಬಾರಿಗೆ ನಿರ್ದೆಶಿಸಿದ್ದರೂ ನಮ್ಮೆಲ್ಲರ ನಿರೀಕ್ಷೆಯಂತೆ ಚಿತ್ರ ಮೂಡಿಬಂದಿದೆ. ಚಿತ್ರದಲ್ಲಿ ಪ್ರತಿಯೊಬ್ಬ ಕಲಾವಿದರು, ತಂತ್ರಜ್ಞರು ಎಲ್ಲರೂ ಸಾಕಷ್ಟು ಪರಿಶ್ರಮ ಪಟ್ಟು ಚಿತ್ರ ಚೆನ್ನಾಗಿ ಬರುವುದಕ್ಕೆ ಕಾರಣರಾಗಿದ್ದಾರೆ" ಎಂದು ಹೇಳುವ ಮೂಲಕ ತಂಡಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ. ಮುಂದಿನ ಪುಟ ನೋಡಿ...


Click it and Unblock the Notifications











