Just In
Don't Miss!
- News
ನಮ್ಮನ್ನು ಬಿಟ್ಟು ಓಡುತ್ತಿವೆ 500 ನಕ್ಷತ್ರಗಳು, ವಿಜ್ಞಾನಿಗಳಿಂದ ರಹಸ್ಯ ರಿವೀಲ್..!
- Lifestyle
"ಗುರುವಾರದ ರಾಶಿಫಲ: ಮೇಷ-ಮೀನದವರೆಗಿನ ದಿನ ಭವಿಷ್ಯ"
- Sports
ಐಎಸ್ಎಲ್: ಬೆಂಗಳೂರಿಗೆ ಸೋಲಿನ ಆಘಾತ ನೀಡಿದ ಕೇರಳ ಬ್ಲಾಸ್ಟರ್ಸ್
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Finance
ಇಪ್ಪತ್ತು ದಿನದಲ್ಲಿ 47 ಪರ್ಸೆಂಟ್ ನಷ್ಟು ಏರಿಕೆ ಕಂಡ ಟಾಟಾ ಮೋಟಾರ್ಸ್ ಷೇರು
- Automobiles
ಡ್ಯುಯಲ್ ಟೋನ್ ಬಣ್ಣದ ಆಯ್ಕೆಯೊಂದಿಗೆ ರೋಡ್ ಟೆಸ್ಟಿಂಗ್ ನಡೆಸಿದ ಸಿಟ್ರನ್ ಸಿ5 ಏರ್ಕ್ರಾಸ್ ಕಾರು
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕನ್ನಡ ಸಿನಿಮಾ ತಾರೆಗಳಿಗೆ 'ಸುವರ್ಣ' ಅವಕಾಶ
ಚಿನ್ನದ ಬೆಲೆ ದಿನೇ ದಿನೇ ಏರುತ್ತಾ ಹೋಗಿ ಗಗನವನ್ನು ಚುಂಬಿಸುತ್ತಿದ್ದರೂ ಬೇಡಿಕೆ ಮಾತ್ರ ಕುಗ್ಗಿಲ್ಲ. ಈ ಬೆಲೆ ಏರಿಕೆ ಬಿಸಿಯಲ್ಲೂ ಕನ್ನಡ ಸಿನಿಮಾ ತಾರೆಗಳಿಗೆ 'ಸುವರ್ಣ' ಅವಕಾಶ ಸಿಕ್ಕಿದೆ. ಬಹಳಷ್ಟು ಸಿನಿಮಾ ತಾರೆಗಳು ಚಿನ್ನದ ಜಾಹೀರಾತುಗಳಲ್ಲಿ ಮಿಂಚುತ್ತಿರುವುದೇ ಇದಕ್ಕೆ ಸಾಕ್ಷಿ.
ಕಲ್ಯಾಣ್ ಜ್ಯುವೆಲರ್ಸ್ಗೆ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ಮಲಬಾರ್ ಗೋಲ್ಡ್ ಮತ್ತು ಮಣಪ್ಪುರಂ ಗೋಲ್ಡ್ ಗೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್, ಜ್ಯುವೆಲ್ಸ್ ಆಫ್ ಇಂಡಿಯಾಗೆ ಪ್ರಿಯಾಂಕಾ ಉಪೇಂದ್ರ, ಮಣಪ್ಪುರಂ ಗೋಲ್ಡ್ ಗೆ ತಾರೆ ಪೂಜಾಗಾಂಧಿ ಹಾಗೂ ಜಾಯ್ ಅಲುಕಾಸ್ಗೆ ರಾಧಿಕಾ ಗಾಂಧಿ ರಾಯಭಾರಿಗಳಾಗಿ ಮಿಂಚಿಂಗೋ ಮಿಂಚಿಂಗು.
ಈ ಹಿಂದೆ ಲಕ್ಕಿ ಸ್ಟಾರ್ ರಮ್ಯಾ, ಜೆನ್ನಿಫರ್ ಕೊತ್ವಾಲ್ ಹಾಗೂ ಐಂದ್ರಿತಾ ರೇ ಕೂಡ ಚಿನ್ನಾಭರಣ ಮಳಿಗೆಗಳ ರಾಯಭಾರಿಯಾಗಿ ಕಾರ್ಯನಿರ್ವಹಿಸಿದ್ದರು. ಇನ್ನೂ ಕೆಲವು ತಾರೆಗಳು ಸ್ಥಳೀಯ ಚಿನ್ನಾಭರಣ ಮಳಿಗೆಗಳ ರಾಯಭಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಶರ್ಮಿಳಾ ಮಾಂಡ್ರೆ, ಪ್ರಿಯಾಂಕಾ ಚಂದ್ರ, ರೇಖಾ ಕುಮಾರ್ ಇವರಲ್ಲಿ ಪ್ರಮುಖರು.
ಜ್ಯುವೆಲ್ಸ್ ಆಫ್ ಇಂಡಿಯಾದ ರಾಯಭಾರಿಗಳಾಗಿ ಹೇಮಾ ಮಾಲಿನಿ, ಡಾ.ವಿಷ್ಣುವರ್ಧನ್ ಹಾಗೂ ಭಾರತಿ ವಿಷ್ಣುವರ್ಧನ್ ಅಭಿನಯಿಸಿದ್ದರು. ಚಿತ್ರವೊಂದಕ್ಕೆ ಪಡೆಯುವ ಸಂಭಾವನೆಗಿಂತಲೂ ಜಾಹೀರಾತೊಂದಕ್ಕೆ ಪಡೆಯುವ ಸಂಭಾವನೆ ಹೆಚ್ಚಾಗಿರುವುದೇ ಚಿನ್ನದ ಜಾಹೀರಾತುಗಳಿಗೆ ಮುಗಿಬೀಳಲು ಕಾರಣ ಎನ್ನುತ್ತವೆ ಮೂಲಗಳು.