Don't Miss!
- News Bird Flu: ಮೊಟ್ಟೆ-ಕೋಳಿ ತಿನ್ನುವವರೇ ಹುಷಾರ್!- ಹೆಚ್ಚಾಗಿದೆ ಹಕ್ಕಿಜ್ವರ
- Finance Lok Sabha Election 2024: ಮತದಾನ ಮಾಡಿ ಹೋಟೆಲ್ಗಳಲ್ಲಿ ಫ್ರೀಯಾಗಿ, ರಿಯಾಯಿತಿಯಲ್ಲಿ ಟಿಫನ್ ತಿನ್ನಿ!
- Technology Qubo InstaView ವಿಡಿಯೋ ಡೋರ್ ಫೋನ್ ಲಾಂಚ್!..ಬೆಲೆ ಎಷ್ಟು, ಫೀಚರ್ಸ್ ಏನಿವೆ?
- Automobiles ಭರ್ಜರಿ ಸಿಹಿಸುದ್ದಿ: ಸ್ಕೋಡಾ ಕೊಡಿಯಾಕ್ ಎಸ್ಯುವಿಯ ಮೇಲೆ ಭರ್ಜರಿ ಡಿಸ್ಕೌಂಟ್
- Lifestyle ಖುಲಾಯಿಸಿತು ಅದೃಷ್ಟ: ಫ್ಯಾಂಟಸಿ ಗೇಮ್ನಲ್ಲಿ ₹1.5 ಕೋಟಿ ಗೆದ್ದ ಮೆಕ್ಯಾನಿಕ್..!
- Sports IPL 2024: ಸಿಕ್ಸ್ ಹೊಡೆದು ತಪ್ಪಾಯ್ತು ಎಂದಿದ್ದೇಕೆ ರಿಷಬ್ ಪಂತ್ ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕರ್ನಾಟಕ ರಜನಿ ಅಭಿಮಾನಿಗಳಿಂದ ಲಿಂಗಾರ್ಪಣೆ
ತಮಿಳು ಚಿತ್ರಗಳ ಅಭಿಮಾನಿಗಳು ಒಂದು ರೀತಿ ವಿಲಕ್ಷಣ ಸ್ವಭಾವದವರು. ಈ ಮಾತಿಗೆ ಪುಷ್ಠಿ ನೀಡುವಂತೆ ಈಗಾಗಲೇ ತಮ್ಮ ನೆಚ್ಚಿನ ತಾರೆಯರಿಗೆ ಗುಡಿ, ಗೋಪುರಗಳನ್ನುಕಟ್ಟಿ ತಮ್ಮ ಅಭಿಮಾನವನ್ನು ಮೆರೆದಿದ್ದಾರೆ ತಮಿಳು ಚಿತ್ರರಸಿಕರು.
ತಮಿಳರ ಆರಾಧ್ಯ ನಟಿಯರಲ್ಲಿ ಮೊದಲು ಖುಷ್ಬುಗೆ ಮಂದಿರ ಕಟ್ಟಿಸಲಾಯಿತು. ನಂತರ ನಮಿತಾರಿಗೂ ಹೃದಯದಲ್ಲಿ ಸ್ಥಾನ ಕೊಟ್ಟ ತಮಿಳರು ಆಕೆಗೂ ಒಂದು ಮಂದಿರವನ್ನು ನಿರ್ಮಿಸಿ ಕೃತಾರ್ಥರಾದರು. ಇದೀಗ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಅವರಿಗೂ ಕರ್ನಾಟಕದ ಅಭಿಮಾನಿಗಳು ವಿಭಿನ್ನ ಸೇವೆ ಸಲ್ಲಿಸಿದ್ದಾರೆ.
ಕೋಲಾರ ಜಿಲ್ಲೆಯಲ್ಲಿರುವ ಕೋಟಿ ಲಿಂಗೇಶ್ವರ ಆಲಯದಲ್ಲಿ ವಿಶೇಷ ಸಹಸ್ರ ಲಿಂಗವನ್ನು ಪ್ರತಿಷ್ಠಾಪಿಸಿದ್ದಾರೆ. ರಜನಿಕಾಂತ್ ಅವರ ಬಾಳಿನಲ್ಲಿ ಸದಾ ಶಾಂತಿ, ಸಮೃದ್ಧಿ ವೃದ್ಧಿಸಲಿ ಎಂಬ ಉದ್ದೇಶದಿಂದ ಲಿಂಗವನ್ನು ಪ್ರತಿಷ್ಠಾಪಿಸಿದ್ದಾಗಿ ಕರ್ನಾಟಕದ ರಜನಿ ಅಭಿಮಾನಿ ಬಳಗ ತಿಳಿಸಿದೆ.
ವಿಶೇಷ ಪ್ರಾರ್ಥನೆ, ವೇದ ಮಂತ್ರಗಳ ಪಠನೆಯೊಂದಿಗೆ ಪುರೋಹಿತರು ಈ ಲಿಂಗವನ್ನು ಪ್ರತಿಷ್ಠಾಪಿಸಿದ್ದಾಗಿ ಅವರು ತಿಳಿಸಿದ್ದಾರೆ. ಕೋಟಿಲಿಂಗೇಶ್ವರ ಆಲಯದಲ್ಲಿ ಭಕ್ತರು ತಮ್ಮ ಕುಟುಂಬ ಶ್ರೇಯೋಭಿವೃದ್ಧಿಗಾಗಿ ಇಲ್ಲೊಂದು ಲಿಂಗವನ್ನು ಪ್ರತಿಷ್ಠಾಪಿಸುವುದು ಅನಾದಿಕಾಲದಿಂದಲೂ ನಡೆದುಕೊಂಡು ಬರುತ್ತಿರುವ ಸಂಪ್ರದಾಯ.