Don't Miss!
- News ಲೋಕಸಭಾ ಚುನಾವಣೆ 2024: ಮತದಾನಕ್ಕೆ ಸಕಲ ಮಂಡ್ಯ ಜಿಲ್ಲಾಡಳಿತದಿಂದ ಸಕಲ ಸಿದ್ಧತೆ
- Sports IPL 2024: ಸೋತು ಸುಣ್ಣವಾದರೂ ಪಾರ್ಟಿ ಮಾಡಿದ ಆರ್ಸಿಬಿ ಪ್ಲೇಯರ್ಸ್; ಕೊಹ್ಲಿ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್
- Automobiles Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- Lifestyle 5 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕಿಟ್ಟಿ ಜೊತೆ ಐಂದ್ರಿತಾ ಜೋಡಿ, ಜಯತೀರ್ಥ ಸವಾರಿ
ಒಲವೇ ಮಂದಾರ ಚಿತ್ರದ ನಿರ್ದೇಶಕ ಜಯತೀರ್ಥ ಹೊಸ ಚಿತ್ರಕ್ಕೆ ತಯಾರಿ ನಡೆಸಿದ್ದಾರೆ. ಒಲವೇ ಮಂದಾರ ಚಿತ್ರ ಗಳಿಕೆಯಲ್ಲಿ ಸೋತರೂ ನಿರ್ದೇಶಕನಾಗಿ ಜಯತೀರ್ಥ ಅವರಿಗೆ ಸ್ಯಾಂಡಲ್ ವುಡ್ ನಲ್ಲಿ ಹೆಸರು ತಂದುಕೊಟ್ಟಿದೆ. ಅವರಿಗೆ ನಿರ್ದೇಶಕನ ಸೆನ್ಸ್ ಇದೆ, ಮುಂದೆ ಭವಿಷ್ಯವಿದೆ ಎಂದೇ ವಿಮರ್ಶಕರಾದಿಯಾಗಿ ಎಲ್ಲರೂ ಅಭಿಪ್ರಾಯಪಟ್ಟಿದ್ದರು.
ಅವರೀಗ
ಹೊಸದೊಂದು
ಚಿತ್ರವನ್ನು
ನಿರ್ದೇಶಿಸಲಿದ್ದಾರೆ.
ಆ
ಚಿತ್ರಕ್ಕೆ
ನಾಯಕರಾಗಿ
ಶ್ರೀನಗರ
ಕಿಟ್ಟಿ
ಹಾಗೂ
ನಾಯಕಿಯಾಗಿ
ಐಂದ್ರಿತಾ
ರೇ
ಆಯ್ಕೆಯಾಗಿದ್ದಾರೆ.
ನಾಗತಿಹಳ್ಳಿ
ಚಂದ್ರಶೇಖರ್
ಜೊತೆ
ನಡೆದ
ವಿವಾದದ
ನಂತರ
ಐಂದ್ರಿತಾ
ರೇ
ಹೆಚ್ಚು
ಚಿತ್ರಗಳಲ್ಲಿ
ಅಭಿನಯಿಸಿರಲಿಲ್ಲ.
ಅವರಿಗೆ
ಇನ್ನು
ಅವಕಾಶ
ಮರೀಚಿಕೆ
ಎಂಬ
ಮಾತುಗಳು
ಕೇಳಿಬಂದಿದ್ದವು.
ಆದರೆ
ಟೀಕಾಕಾರರು
ಬಾಯಿಮುಚ್ಚುವಂತೆ
ಅವಕಾಶ
ಪಡೆಯುತ್ತಿದ್ದಾರೆ
ಐಂದ್ರಿತಾ.
ಚಿತ್ರದ ಸ್ಕ್ರಿಪ್ಟ್ ಕೆಲಸ ಅಂತಿಮ ಹಂತಕ್ಕೆ ಬಂದಿದೆ. ಇನ್ನು ಕೆಲವೇ ದಿನಗಳಲ್ಲಿ ಮುಹೂರ್ತವೂ ನಡೆಯಲಿದೆ. ಚಿತ್ರದ ಹೆಸರು 'ಟೋನಿ - ಏಕ್ ದಿನ್ ಕಾ ಸುಲ್ತಾನ್'. ಟೋನಿ ನಾಯಕನಾಗಿ ಶ್ರೀನಗರ ಕಿಟ್ಟಿ ಹಾಗೂ ಅವರಿಗೆ ಐಂದ್ರಿತಾ ರೇ ನಾಯಕಿ ಎಂಬ ಸುದ್ದಿ ಹರಡಿದ್ದರೂ ನಿರ್ದೇಶಕ ಜಯತೀರ್ಥ ಈ ಸುದ್ದಿಯನ್ನು ಖಚಿತಪಡಿಸದೇ ಕಾದುನೋಡಿ ಎಂದಷ್ಟೇ ಹೇಳಿದ್ದಾರೆ. ಮುಂದೇನಾಗುತ್ತದೆ ಎಂದು ಕಾದು ನೋಡಿ... (ಒನ್ ಇಂಡಿಯಾ ಕನ್ನಡ)