Don't Miss!
- Sports IPL 2024: ಸೋತು ಸುಣ್ಣವಾದರೂ ಪಾರ್ಟಿ ಮಾಡಿದ ಆರ್ಸಿಬಿ ಪ್ಲೇಯರ್ಸ್; ಕೊಹ್ಲಿ ವಿರುದ್ಧ ರೊಚ್ಚಿಗೆದ್ದ ಫ್ಯಾನ್ಸ್
- News ನೇಹಾ ಹತ್ಯೆ: ಸಾವಿನ ಮನೆಯಲ್ಲಿ ರಾಜಕಾರಣ ಸರಿಯಲ್ಲ, 90 ದಿನದಲ್ಲಿ ನ್ಯಾಯ ಸಿಗಲಿದೆ: ಸುರ್ಜೇವಾಲ
- Automobiles Suzuki Access Electric: ಸುಜುಕಿ ಆಕ್ಸೆಸ್ ಎಲೆಕ್ಟ್ರಿಕ್ ಸ್ಕೂಟರ್ ಈ ವರ್ಷ ಬಿಡುಗಡೆ ಸಾಧ್ಯತೆ!
- Lifestyle 5 ಸೆಕೆಂಡ್ನಲ್ಲಿ ಈ ಚಿತ್ರದಲ್ಲಿರುವ ಮೇಕೆ ಮಾಲೀಕನ ಹುಡುಕಿ..! ಎಲ್ಲಿದ್ದಾನೆ ಗೊತ್ತಾ?
- Technology Bengaluru: ಆ ಆಪ್ ಇನ್ಸ್ಟಾಲ್ ಮಾಡಿದ್ದೇ ತಡ 5.2 ಕೋಟಿ ರೂ. ಮಾಯ.. ನೀವು ಎಚ್ಚರ
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಗಣೇಶ್ ಶೈಲೂ ಚಿತ್ರಕ್ಕೆ ರಕ್ಷಕನಾಗದ ಆ'ರಕ್ಷಕ'
ಶೈಲೂ ಚಿತ್ರ ಐವತ್ತನೇ ದಿನದತ್ತ ಮುನ್ನುಗ್ಗುತ್ತಿದೆ. ಆದರೆ ಅದಕ್ಕೆ ಯಾರೊಬ್ಬರೂ ರಕ್ಷಕರಿಲ್ಲ ಎನ್ನುವುದು ಗಾಂಧಿನಗರದಿಂದ ಬಂದಿರುವ ಸುದ್ದಿ. ಎಕೆಂದರೆ ಶೈಲೂ ಚಿತ್ರ ಐದು ವಾರಗಳಾಗುತ್ತಿದ್ದಂತೆ, "ಅದರ ಕಲೆಕ್ಷನ್ ಕಡಿಮೆಯಾಗಿದೆ, ಅದಿರುವ ಸಾಗರ್ ಥಿಯೇಟರಿನಲ್ಲಿ ಕೋ ಕೋ ತರುತ್ತೇವೆ" ಎಂದಿದ್ದರು ಆರ್ ಚಂದ್ರು.
ಆದರೆ ಶೈಲೂ ಚಿತ್ರ ಚೆನ್ನಾಗಿಯೇ ಓಡುತ್ತಿದೆ ಎಂಬುದಕ್ಕೆ ಪುಷ್ಟಿ ನೀಡುವಂತೆ ಅದು ಎತ್ತಂಗಡಿ ಆಗದೇ ಕೋ ಕೋ, ಸಾಗರ್ ಥಿಯೇಟರಿನಲ್ಲಿ ಬಿಡುಗಡೆಯಾಯ್ತು. ಶೈಲೂ ಪಯಣ ಸಾಗರ್ ದಲ್ಲಿ ನಿರಾತಂಕವಾಗಿ ಮುಂದುವರಿಯುತ್ತಿದೆ. ಆದರೆ ಇದೀಗ ಮತ್ತೆ ಶೈಲೂ ಚಿತ್ರಕ್ಕೆ ಕೋ ಕೋ ಬದಲು ಆರಕ್ಷಕ ಚಿತ್ರದಿಂದ ವಿಘ್ನ ಬಂದೊದಗಿದೆ.
ಈ ತಿಂಗಳು 26ಕ್ಕೆ 'ಆರಕ್ಷಕ' ಚಿತ್ರ ಸಾಗರ್ ಥಿಯೇಟರ್ ಗೆ ಲಗ್ಗೆ ಇಡಲಿದೆ. ಅಷ್ಟರಲ್ಲಿ ಶೈಲೂ ಐವತ್ತನೇ ದಿನ ಮುಗಿಸಿರುತ್ತದೆ. ಆದರೆ ಇನ್ನೂ ಓಡಬಹುದಾದ ಶೈಲೂವನ್ನು ಎತ್ತಂಗಡಿ ಮಾಡುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಶೈಲೂ ಚಿತ್ರತಂಡದ ಅಹವಾಲು. ಹೆಸರಿನಲ್ಲಿ 'ಆರಕ್ಷಕ' ಆಗಿದ್ದರೂ ಅದು ಶೈಲೂವನ್ನು ರಕ್ಷಿಸದಿರುವುದು ವಿಪರ್ಯಾಸ. (ಒನ್ ಇಂಡಿಯಾ ಕನ್ನಡ)