ನಟ ದರ್ಶನ್ ಜತೆ ಮತ್ತೆ ಒಂದಾದ ನಿಖಿತಾ ತುಕ್ರಲ್

ಈ ಚಿತ್ರದ ನಾಯಕಿ ನಿಖಿತಾ ತುಕ್ರಲ್ ಶೀಘ್ರದಲ್ಲೆ ಮತ್ತೆ ಗಾಂಧಿನಗರಕ್ಕೆ ಅಡಿಯಿಡಲಿದ್ದಾರೆ. ನಟ ದರ್ಶನ್ ಕೌಟುಂಬಿಕ ಕಲಹಕ್ಕೆ ನಿಖಿತಾರೇ ಕಾರಣ ಎಂದು ಬಿಂಬಿಸಲಾಗಿತ್ತು. ಈಗ ಮತ್ತೆ ಇಬ್ಬರೂ ಕ್ಯಾಮೆರಾ ಮುಂದೆ ಬರುತ್ತಿದ್ದು ಅವರಿಬ್ಬರ ಆನ್ ಸ್ಕ್ರೀನ್ ಕೆಮಿಸ್ಟ್ರಿ ಹೇಗಿರುತ್ತದೋ ಏನೋ ಎಂಬ ಆತಂಕ, ಕುತೂಹಲ ಒಟ್ಟಿಗೆ ಮನೆಮಾಡಿದೆ.
ಈ ಹಿಂದೆ ನಿಖಿತಾ ಹಾಗೂ ದರ್ಶನ್ ಇಬ್ಬರೂ ಹಲವು ಚಿತ್ರಗಳಲ್ಲಿ ಅಭಿನಯಿಸಿದ್ದರು. ಆಗೆಲ್ಲಾ ಇಬ್ಬರೂ ಆಫ್ ಸ್ಕ್ರೀನ್, ಆನ್ ಸ್ಕ್ರೀನ್ ನಲ್ಲಿ ಜಾಲಿಯಾಗಿರುತ್ತಿದ್ದರು. ಈಗಲೂ ಇಬರಿಬ್ಬರೂ ಅದೇ ಹುಮ್ಮಸ್ಸಿನಲ್ಲಿ ಅಭಿನಯಿಸುತ್ತಾರಾ? ಎಂಬ ಪ್ರಶ್ನೆ ಗಾಂಧಿನಗರಿಗರನ್ನು ಕಾಡುತ್ತಿದೆ.
ಇನ್ನು ಚಿತ್ರದ ನಿರ್ಮಾಪಕ ಆನಂದ್ ಅಪ್ಪುಗೋಳ್ ಅವರಂತೂ ಚಿತ್ರೀಕರಣ ಸುಸೂತ್ರವಾಗಿ ನಡೆದರೆ ಸಾಕಪ್ಪಾ ಎಂದು ದೇವರಿಗೆ ಮೊರೆ ಹೋಗಿದ್ದಾರೆ. ಅದರಲ್ಲೂ ರೊಮ್ಯಾನ್ಸ್ ಸೀನ್ಸ್, ಟಪ್ಪಾಂಗುಚ್ಚಿ ಸನ್ನಿವೇಶಗಳ ಚಿತ್ರೀಕರಣದ ವೇಳೆ ಎಲ್ಲಿ ಎಡವಟ್ಟಾಗಿ ಮತ್ತೆ ಕತೆ ಮೊದಲಿಗೆ ಬರುತ್ತದೋ ಎಂಬ ಚಿಂತೆಯಲ್ಲಿ ನಿರ್ಮಾಪಕರಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹೊಗೆಯಾಡುತ್ತಿದೆ. (ಒನ್ಇಂಡಿಯಾ ಕನ್ನಡ)


Click it and Unblock the Notifications











