ಪುನೀತ್, ರತ್ನವೇಲು ಸಂಗಮದ ಸಿನಿಮಾ ರದ್ದು

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ಛಾಯಾಗ್ರಾಹಕ ರತ್ನವೇಲು ಸಂಗಮದ ಸೆಟ್ಟೇರಲಿರುವ ಚಿತ್ರ ರದ್ದಾಗಿದೆ. ಈ ವಿಷಯವನ್ನು ಸ್ವತಃ ಪುನೀತ್ ಸ್ಪಷ್ಟಪಡಿಸಿದ್ದಾರೆ. "ಸೂರಿಯ ಜೊತೆಯ 'ಅಣ್ಣಾ ಬಾಂಡ್' ಮುಗಿಯುವವರೆಗೆ ಯಾವುದೇ ಸಿನಿಮಾಗೆ ಒಪ್ಪಿಕೊಳ್ಳುವ ಮಾತೇ ಇಲ್ಲ" ಎಂದಿದ್ದಾರೆ.

ಈ ಮೊದಲು ದಕ್ಷಿಣ ಭಾರತದ ಹೆಸರಾಂತ ಛಾಯಾಗ್ರಾಹಕ ರತ್ನವೇಲು "ನಾನು ಮತ್ತು ಪುನೀತ್ ಎರಡು ವರ್ಷಗಳಿಂದ ಸಿನಿಮಾ ಮಾಡಬೇಕೆಂದು ಪ್ಲಾನ್ ಮಾಡುತ್ತಿದ್ದೇವೆ. ಇದೀಗ ಆ ಕಾಲ ಕೂಡಿ ಬಂದಿದೆ" ಎಂದಿದ್ದರು. ಆದರೆ ಈಗ ಪುನೀತ್ ಮಾತಿನ ಮೂಲಕ ಈ ಚಿತ್ರ ಅಧೀಕೃತವಾಗಿ ರದ್ದಾದಂತಾಗಿದೆ. ಮುಂದೆ ಯಾವತ್ತೋ ಮಾಡಬಹುದಾದರೂ ಸದ್ಯಕ್ಕಂತೂ ರದ್ದಾಗಿದೆ.

ಇದೇವೇಳೆ ಪುನೀತ್, "ನಿರ್ದೇಶಕ ಗೌತಮ್ ಮೆನನ್ ಬಳಿ ವನ್ನಿತಾಂಡಿ ವರುವಾಯ' ಚಿತ್ರವನ್ನು ಕನ್ನಡದಲ್ಲಿ ಮಾಡುವ ಬಗ್ಗೆ ಮಾತನಾಡಿದ್ದೇನೆ. ಕೈಯಲ್ಲಿರುವ ಪ್ರಾಜೆಕ್ಟ್ ನಿಂದ ಸ್ವಲ್ಪ ಬಿಡುವು ದೊರೆತ ತಕ್ಷಣ ಆ ಸಿನಿಮಾ ಮುಹೂರ್ತ ಘೋಷಿಸುತ್ತೇನೆ ಎಂದು ಪ್ರಾಮಿಸ್ ಮಾಡಿದ್ದಾರೆ" ಎಂದಿದ್ದಾರೆ. ಒಟ್ಟಿನಲ್ಲಿ ತಮಿಳು ಚಿತ್ರವೊಂದು ಪುನೀತ್-ಗೌತಮ್ ಮೆನನ್ ಸಂಗಮದಲ್ಲಿ ಸೆಟ್ಟೇರಲಿದೆ ಎಂಬ ಸುದ್ದಿ ಕನ್ನಡ ಸಿನಿಪ್ರೇಕ್ಷಕರಿಗೆ ಪುಳಕ ತರಲಿದೆ. (ಒನ್ ಇಂಡಿಯಾ ಕನ್ನಡ)

More from Filmibeat

English summary
Puneet Rajkumar and Rathnavelu proposed project has been shelved. The actor has confirmed that the film is dropped and he has not signed any film, which will only take off after the completion of Anna Bond.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X