Don't Miss!
- News Neha Hiremath: ಸಿದ್ದರಾಮಯ್ಯ ಹೇಳಿಕೆಗೆ ಕಾಂಗ್ರೆಸ್ ಕಾರ್ಪೊರೇಟರ್ ನೇಹಾ ತಂದೆ ಆಕ್ರೋಶ
- Sports IPL 2024: ಐಪಿಎಲ್ನಲ್ಲಿ ಉಮೇಶ್ ಯಾದವ್ ಅವರ ವಿಶೇಷ ದಾಖಲೆ ಸರಿಗಟ್ಟಿದ ಜಸ್ಪ್ರೀತ್ ಬುಮ್ರಾ
- Automobiles ರಾಜ್ಯದ ಕೈಜಾರಿ ತಮಿಳುನಾಡು ಸೇರಿದ 9000 ಕೋಟಿಯ ಪ್ರಾಜೆಕ್ಟ್: JLR ಇವಿ ಹಬ್ಗೆ ಸಿದ್ದವಾದ ನೆರೆ-ರಾಜ್ಯ!
- Finance ಇಳಿಕೆ ಕಂಡ ನೆಸ್ಲೆ ಇಂಡಿಯಾ ಷೇರು: ಸೆರೆಲಾಕ್ನಲ್ಲಿ ಸಕ್ಕರೆ ಬಗ್ಗೆ ಸಂಸ್ಥೆಯ ಸ್ಪಷ್ಟನೆ ಏನು?
- Technology ವಿವೋ V30e ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಬೆಲೆ, ಕ್ಯಾಮೆರಾ, ವಿನ್ಯಾಸ ವಿವರ ಇಲ್ಲಿದೆ..
- Lifestyle ಸ್ವತಂತ್ರ ಭಾರತದ ಮೊದಲ ಮತದಾರನಿಲ್ಲದ ಮೊದಲ ಚುನಾವಣೆ ಇದು..! ಯಾರು ಈ ಮತದಾರ ಗೊತ್ತಾ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಸುದೀಪ್ ರನ್ನು ಬಚ್ಚನ್ ಮಾಡಲಿರುವ ಶಶಾಂಕ್
ಕಿಚ್ಚ ಸುದೀಪ್ 'ಬಚ್ಚನ್' ಆಗಲಿದ್ದಾರೆಯೇ? ಹೀಗೊಂದು ಪ್ರಶ್ನೆಗೆ ಉತ್ತರ 'ಹೌದು' ಎಂಬುದು ಸದ್ಯದ ಸಮಾಚಾರ. ಜರಾಸಂಧ ನಿರ್ದೇಶಿಸಿ ಹೆಸರು ಕೆಡಿಸಿಕೊಂಡ ನಿರ್ದೇಶಕ ಶಶಾಂಕ್, ಇದೀಗ 'ಬಚ್ಚನ್' ಟೈಟಲ್ ಇಟ್ಟುಕೊಂಡು ಕಥೆ ಹೆಣೆಯುತ್ತಿದ್ದಾರೆ. ಅದು ಸುದೀಪ್ ಗಾಗಿಯೇ ಸಿದ್ಧವಾಗುತ್ತಿದೆ ಎಂಬುದು ಗಾಂಧಿನಗರದ ಮಂದಿಯ ಮೆಸೇಜು.
ಶಶಾಂಕ್ ನಿರ್ದೇಶನದ 'ಜರಾಸಂಧ' ಕಷ್ಟಪಟ್ಟು ಐವತ್ತು ದಿನ ಪೂರೈಸಿದೆ. ಸ್ವತಃ ಶಶಾಂಕ್ ಹಾಗೂ ಸಿನಿಪ್ರೇಕ್ಷಕರು ಅಂದುಕೊಂಡಷ್ಟು ಸಿನಿಮಾ ಯಶಸ್ವಿಯಾಗಿಲ್ಲ. 'ಕರಿಚಿರತೆ' ವಿಜಯ್ ಎಷ್ಟೇ ಕಷ್ಟಪಟ್ಟರೂ ಅದೆಲ್ಲಾ ನೀರಿನಲ್ಲಿ ಮಾಡಿದ ಹೋಮವಾಗಿದೆ. ಆದರೆ ಶಶಾಂಕ್ ಸುಮ್ಮನೆ ಕುಳಿತಿಲ್ಲ, ಮುಂದಿನ ಚಿತ್ರಕ್ಕೆ ಸಿದ್ಧರಾಗಿದ್ದಾರೆ.
ಅಂದುಕೊಂಡಂತೆ ಎಲ್ಲವೂ ನಡೆದರೆ ಬಚ್ಚನ್ ಚಿತ್ರದ ಹೀರೋ ಸುದೀಪ್ ಆಗಲಿದ್ದಾರೆ. ನಾಯಕಿ, ಹಾಗೂ ಮಿಕ್ಕವರ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. ಫೆಬ್ರವರಿ ಕೊನೆಯ ವಾರ ಚಿತ್ರಕ್ಕೆ ಮುಹೂರ್ತ ನಡೆಸಲು ನಿರ್ಧರಿಸಲಾಗಿದೆ. ಜರಾಸಂಧ ಮೂಲಕ ಹೋದ ಶಶಾಂಕ್ ಮಾನ, ಬಚ್ಚನ್ ಕಡೆಯಿಂದ ಬರಬಹುದೇ ಎಂಬುದು ಸದ್ಯದ ಪ್ರಶ್ನೆ. (ಒನ್ ಇಂಡಿಯಾ ಕನ್ನಡ)