ಬಿಬಿಎಂಪಿ ಚುನಾವಣಾ ಕಣಕ್ಕೆ ನಟಿ ಶಾಂತಲಾ

ರೆಬಲ್ ಸ್ಟಾರ್ ಅಂಬರೀಶ್ ಅವರಿಗೆ ಮೊದಲು ನಾಯಕಿಯಾಗಿ 'ಪಡುವಾರಹಳ್ಳಿ ಪಾಂಡವರು' ಚಿತ್ರದಲ್ಲಿ ಅಭಿನಯಿಸಿದ ಕಲಾವಿದೆ ಶಾಂತಲಾ. ಈಕೆ ಅಭಿನಯಿಸಿದ ಏಕೈಕ ಚಿತ್ರ ಸಹ ಅದಾಗಿತ್ತು. ಇದೀಗ ಗಿರಿನಗರ ವಾರ್ಡ್ ನ ಜೆಡಿಎಸ್ ಅಭ್ಯರ್ಥಿಯಾಗಿ ಶಾಂತಲಾ ಕಣಕ್ಕಿಳಿದಿದ್ದಾರೆ.
ಚಿತ್ರರಂಗದಿಂದ ಬಹಳ ದೂರ ಸರಿದಿದ್ದ ಅವರು ಸಿ ಆರ್ ಸಿಂಹ ಅವರ ರಸಋಷಿ ಚಿತ್ರಕ್ಕೆ ಮತ್ತೆ ಬಣ್ಣ ಹಚ್ಚಿಕೊಂಡಿದ್ದರು. ಚಿತ್ರರಂಗದಿಂದ ದೂರವಾಗಿದ್ದರೂ ಬಣ್ಣದ ಲೋಕದೊಂದಿಗೆ ಅವರಿಗೆ ನಂಟು ಇದ್ದೆ ಇದೆ. ರಂಗಭೂಮಿಯಲ್ಲಿ ಸದಾ ತೊಡಗಿಕೊಂಡಿರುವ ಅವರು ಪ್ರಭಾತ್ ತಂಡದಲ್ಲಿ ಸಕ್ರಿಯರಾಗಿದ್ದಾರೆ.
ಸಮಾಜಸೇವೆಯ ಕನಸು ಕಟ್ಟಿರುವ ಅವರು ಇದೀಗ ನಾಗರೀಕರ ಸೇವೆ ಮಾಡಬೇಕು ಎಂಬ ಹಂಬಲದಿಂದ ಚುನಾವಣೆಗೆ ಧುಮುಕಿದ್ದಾರೆ. 'ರಸಋಷಿ' ಚಿತ್ರಕ್ಕಾಗಿ ಬಿಳಿ ವಿಗ್ ತೊಟ್ಟು ಅವರು ಅಜ್ಜಿಯಂತೆ ಕಾಣುತ್ತಿದ್ದರೂ ನಿಜಕ್ಕೂ ಅವರಿಗೆ ಅಷ್ಟು ವಯಸ್ಸಾಗಿಲ್ಲ ಎಂಬುದು ನಿಮ್ಮ ಗಮನಕ್ಕಿರಲಿ.
More from Filmibeat
ಬಿಬಿಎಂಪಿ ಚುನಾವಣೆ ಪಡುವಾರಹಳ್ಳಿ ಪಾಂಡವರು ಶಾಂತಲಾ ಜೆಡಿಎಸ್ ಅಂಬರೀಶ್ ಬೆಂಗಳೂರು ಗಿರಿನಗರ ರಸಋಷಿ bbmp election paduvarahalli pandavaru shantala jds ambarish bangalore girinagara ward rasa rishi


Click it and Unblock the Notifications











