Just In
Don't Miss!
- News
ಧಾರವಾಡ ಅಪಘಾತ; ಮತ್ತೊಬ್ಬ ಮಹಿಳೆ ಸಾವು, ಅಂಗಾಂಗ ದಾನ
- Finance
ವಿಶ್ವದ ಸಿರಿವಂತರ ಪಟ್ಟಿಯಲ್ಲಿ 11ನೇ ಸ್ಥಾನದಲ್ಲಿ ಮುಕೇಶ್; ಆಸ್ತಿ 5.78 ಲಕ್ಷ ಕೋಟಿ ರು.
- Sports
ಟೀಮ್ ಇಂಡಿಯಾದ ನಿರ್ಭೀತ ಆಟಕ್ಕೆ ಆ ಇಬ್ಬರು ಕಾರಣ ಎಂದ ಭರತ್ ಅರುಣ್
- Automobiles
ಕರೋಕ್ ಎಸ್ಯುವಿಯನ್ನು ಸ್ಥಳೀಯವಾಗಿ ಅಭಿವೃದ್ಧಿಪಡಿಸಲಿದೆ ಸ್ಕೋಡಾ
- Lifestyle
ವಾರ ಭವಿಷ್ಯ: 12 ರಾಶಿಗಳ ರಾಶಿ ಫಲ ಹೇಗಿದೆ ನೋಡಿ
- Education
NIT Recruitment 2021: ರಿಸರ್ಚ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಣ್ಣಾವ್ರ ಹುಟ್ಟುಹಬ್ಬಕ್ಕೆ ಆಪರೇಷನ್ ಗೋಲ್ಡನ್ ಗ್ಯಾಂಗ್
ಸೆಂಚುರಿ ಸ್ಟಾರ್, ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರ ಬಾಂಡ್ ಚಿತ್ರಕ್ಕೆ ಕಡೆಗೂ ಮುಹೂರ್ತ ನಿಗದಿಯಾಗಿದೆ. ಅಣ್ಣಾವ್ರ ಹುಟ್ಟುಹಬ್ಬ ಏಪ್ರಿಲ್ 24, 2011ರಂದು ಚಿತ್ರ ಸೆಟ್ಟೇರಲಿದೆ. ಬಸವಾರೆಡ್ಡಿ ಮತ್ತು ಕೆ ಎಂ ವೀರೇಶ್ ಜಂಟಿಯಾಗಿ ನಿರ್ಮಿಸುತ್ತಿರುವ ಚಿತ್ರ ಇದಾಗಿದೆ.
ಮಾರ್ಚ್ ಹೊತ್ತಿಗೆ ಶಿವರಾಜ್ ಕುಮಾರ್ ಅವರ ನೂರನೇ ಚಿತ್ರ 'ಜೋಗಯ್ಯ' ಚಿತ್ರೀಕರಣ ಮುಗಿಯಲಿದೆ. ಜನವರಿ 16ಕ್ಕೆ ರಾಘವ ಲೋಕಿ ನಿರ್ದೇಶಿಸುತ್ತಿರುವ ಶಿವಣ್ಣ ಮುಖ್ಯಭೂಮಿಕೆಯಲ್ಲಿರುವ 'ಲಕ್ಷ್ಮಿ' ಚಿತ್ರ ಸೆಟ್ಟೇರಲಿದೆ. ಈ ಚಿತ್ರದ ಮೊದಲ ಹಂತ ಮುಗಿದ ಕೂಡಲೆ 'ಜೋಗಯ್ಯ' ಹಾಡಿನ ಚಿತ್ರೀಕರಣಕ್ಕೆ ವಿದೇಶಕ್ಕೆ ಹಾರಲಿದ್ದಾನೆ.
ಇದೆಲ್ಲಾ ಮುಗಿಯುವ ವೇಳೆಗೆ ಹ್ಯಾಟ್ರಿಕ್ ಹೀರೋ ಅಭಿನಯಿಸಲಿರುವ 102ನೇ ಚಿತ್ರ 'ಆಪರೇಷನ್ ಗೋಲ್ಡನ್ ಗ್ಯಾಂಗ್'ಗೆ ಮುಹೂರ್ತ ಕೂಡಿಬಂದಿರುತ್ತದೆ. ಅಂದರೆ ಏಪ್ರಿಲ್ 24ರಂದು ಈ ಚಿತ್ರ ಭರ್ಜರಿಯಾಗಿ ಆರಂಭವಾಗಲಿದೆ. "ಈ ಚಿತ್ರವನ್ನು ಅಪ್ಪಾಜಿ ಅವರಿಗೆ ಹುಟ್ಟುಹಬ್ಬದ ಉಡುಗೊರೆಯಾಗಿ ನೀಡುತ್ತಿರುವುದಾಗಿ" ಶಿವಣ್ಣ ಹೇಳಿದ್ದಾರೆ.
ಕನ್ನಡ ಚಿತ್ರಗಳು : ಆರಿಸಿನೋಡು ಬೀಳಿಸಿನೋಡು
ಬಾಂಡ್ ಚಿತ್ರಗಳಲ್ಲಿ ವರನಟ ರಾಜ್ ಕುಮಾರ್ ಅವರು ತಮ್ಮದೇ ಆದಂತಹ ಶೈಲಿಗೆ ಹೆಸರಾಗಿದ್ದರು. ಜೇಡರಬಲೆ, ಗೋವಾದಲ್ಲಿ ಸಿಐಡಿ 999, ಅಪರೇಷನ್ ಜಾಕ್ ಪಾಟ್, ಅಪರೇಷನ್ ಡೈಮಂಡ್ ರಾಕೆಟ್ ಬಾಂಡ್ ಶೈಲಿ ಚಿತ್ರಗಳನ್ನು ಹೆಸರಿಸಬಹುದು. ಧೂಮಕೇತು ಚಿತ್ರವನ್ನು ಬೇಕಾದರೆ ಈ ಪಟ್ಟಿಗೆ ಸೇರಿಸಬಹುದು.
ಹಾಲಿವುಡ್ನಲ್ಲಿ ಬಾಂಡ್ ಚಿತ್ರಗಳೆಂದರೆ ಪ್ರೇಕ್ಷಕರು ಈಗಲೂ ಮುಗಿಬಿದ್ದು ನೋಡುತ್ತಾರೆ. ಭಾರತೀಯ ಚಿತ್ರರಂಗದಲ್ಲೂ ಈ ರೀತಿಯ ಪ್ರಯೋಗಗಳು ಸಾಕಷ್ಟು ನಡೆದಿವೆ. ಇದೇ ಮೊದಲ ಬಾರಿಗೆ ಬಾಂಡ್ ಶೈಲಿಯ ಚಿತ್ರದಲ್ಲಿ ಅಭಿನಯಿಸುತ್ತಿರುವ ಶಿವಣ್ಣನನ್ನು ಪ್ರೇಕ್ಷಕರು ಎಷ್ಟರ ಮಟ್ಟಿಗೆ ಒಪ್ಪುತ್ತಾರೋ ಕಾದು ನೋಡಬೇಕು.
ಅಂದಹಾಗೆ 'ಆಪರೇಷನ್ ಗೋಲ್ಡನ್ ಗ್ಯಾಂಗ್' ಚಿತ್ರಕ್ಕೆ ಗುರುಕಿರಣ್ ಸಂಗೀತ ಸಂಯೋಜನೆ ಇರುತ್ತದೆ. ಇನ್ನುಳಿದಂತೆ ತಾರಾಬಳಗ, ತಂತ್ರಜ್ಞರ ಆಯ್ಕೆ ಇನ್ನಷ್ಟೇ ನಡೆಯಬೇಕಿದೆ. ಏಪ್ರಿಲ್ 24ರಂದೇ ಜೋಗಯ್ಯನನ್ನು ಬಿಡುಗಡೆ ಮಾಡಬೇಕೆಂದು ಪ್ರೇಮ್ ಸಂಕಲ್ಪ ಮಾಡಿದ್ದಾರೆ. [ಶಿವರಾಜ್ ಕುಮಾರ್]