Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡ ನಟಿಗೆ ವಂಚಿಸಿದ್ದವ ಈಗ ಪೊಲೀಸ್ ಅತಿಥಿ
ಕನ್ನಡದ 'ಶ್ರೀಮೋಕ್ಷ' ಚಿತ್ರದಲ್ಲಿ ನಟಿಸಿದ್ದ ರಿತು ಸಚ್ ದೇವ ಅವರಿಂದ ಲಕ್ಷಾಂತರ ಹಣ ಪೀಕಿ ವಂಚಿಸಿದ್ದ ಆರೋಪ ಎದುರಿಸುತ್ತಿದ್ದಏಜೆಂಟ್ ಫ್ಲಿನ್ ರೆಮೆಡಿಯೋಸ್ನನ್ನು ಮುಂಬೈ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ರಿತು ಸಚ್ ದೇವ ಅವರಿಗೆ ಜನಪ್ರಿಯ ರಿಯಾಲಿಟಿ ಷೋ 'ಬಿಗ್ ಬಾಸ್'ಗೆ ಪ್ರವೇಶ ಕೊಡಿಸುವುದಾಗಿ ನಂಬಿಸಿ ಹಣ ಲಪಟಾಯಿಸಿದ್ದ ಆರೋಪ ಫ್ಲಿನ್ ರೆಮೆಡಿಯೋಸ್ ಎದುರಿಸುತ್ತಿದ್ದ.
ಬಂಧನಕ್ಕೊಳಗಾಗಿರುವ ಫ್ಲಿನ್ ರೆಮೆಡಿಯಸ್ನನ್ನು ಬುಧವಾರದ(ನ.24) ತನಕ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ವರ್ಸೋವಾ ಪೊಲೀಸ್ ಠಾಣೆಯ ಸೀನಿಯರ್ ಇನ್ಸೆಪೆಕ್ಟರ್ ಸುರೇಶ್ ನಲವಾಡೆ ತಿಳಿಸಿದ್ದಾರೆ. "ಟಿವಿ ಶೋಗಳಲ್ಲಿ ಛಾನ್ಸ್ ಕೊಡಿಸುವುದಾಗಿ ನಂಬಿಸಿ ತಮ್ಮಿಂದ ರು.5 ಲಕ್ಷ ಹಣ ತೆಗೆದುಕೊಂಡಿದ್ದ" ಎಂದು ರಿತು ಸಚ್ ದೇವ ನವೆಂಬರ್ 12ರಂದು ಪೊಲೀಸರಿಗೆ ದೂರು ನೀಡಿದ್ದರು.
ಜನಪ್ರಿಯ ರಿಯಾಲಿಟಿ ಷೋ 'ಬಿಗ್ ಬಾಸ್'ಗೆ ಪ್ರವೇಶ ನೀಡುವುದಾಗಿ ಹೇಳಿದ್ದ ಫ್ಲಿನ್ ನಡುನೀರಿನಲ್ಲಿ ಕೈಬಿಟ್ಟಿದ್ದ. ಆತನ ಜೋಳಿಗೆ ಲಕ್ಷಾಂತರ ದುಡ್ಡು ಸುರಿದಿದ್ದೀನಿ. ಆತ ಹೇಳಿದ ರೀತಿ ತಯಾರಿ ನಡೆಸಿದ್ದೀನಿ ಆದರೂ, ಆತ ನನ್ನನ್ನು ಕಡೆಗಣಿಸಿದ್ದಲ್ಲದೆ, ಬಿಗ್ ಬಾಸ್ ಪ್ರವೇಶದ ಅವಕಾಶ ವಂಚಿಸಿದ್ದಾನೆ. ಕೆಟ್ಟ ಭಾಷೆಯಲ್ಲಿ ಸಂದೇಶಗಳನ್ನು ಕಳಿಸಿದ್ದಲ್ಲದೆ, ಕಿರುಕುಳ ನೀಡಿದ್ದಾನೆ ಎಂದು ಮಾಧ್ಯಮಗಳ ಮುಂದೆ ರಿತು ಅಲವತ್ತು ಕೊಂಡಿದ್ದರು.
"ಮ್ಯೂಸಿಕ್ ಅಲ್ಬಂ, ಬಿಗ್ ಬಾಸ್ ಪ್ರವೇಶ ಸೇರಿದಂತೆ ಹಲವು ಪೋಗ್ರಾಂಗಳಿಗೆ ಅವಕಾಶ ಕೊಡಿಸುವುದಾಗಿ ನಂಬಿಸಿ ದ್ರೋಹ ಬಗೆದಿದ್ದಾನೆ. ಆರ್ಥಿಕವಾಗಿ, ಮಾನಸಿಕವಾಗಿ ಕಿರುಕುಳ ನೀಡಿದ್ದಾನೆ. ಸ್ವಲ್ಪ ಅಡ್ಜಸ್ಟ್ ಮಾಡ್ಕೋ ಎಂದು ರಾತ್ರಿ ಹೊತ್ತು ಮೆಸೇಜ್ ಕಳಿಸುತ್ತಾನೆ. ಅವನ ನಡವಳಿಕೆ ಭಯ ಹುಟ್ಟಿಸಿದೆ" ಎಂದು ಮುಂಬೈನ ವರ್ಸೊವಾ ಪೊಲೀಸ್ ಠಾಣೆಯಲ್ಲಿ ರಿತು ದೂರು ದಾಖಲಿಸಿದ್ದರು.