Just In
- 40 min ago
ಸುದೀಪ್ ಗೆ ಸಿನಿಮಾ ನಿರ್ದೇಶನ ಮಾಡುವ ಬಗ್ಗೆ ರಕ್ಷಿತ್ ಶೆಟ್ಟಿ ಹೇಳಿದ್ದೇನು? ಇಲ್ಲಿದೆ ಮಾಹಿತಿ
- 1 hr ago
ಕಂಗನಾ ಮೇಲೆ ಕಥೆ ಕದ್ದ ಆರೋಪ; 72 ಗಂಟೆಯೊಳಗೆ ಉತ್ತರ ನೀಡಬೇಕೆಂದ ಲೇಖಕ
- 2 hrs ago
ಸೋನು ಸೂದ್ ಟೈಲರ್ ಶಾಪ್: ರಸ್ತೆ ಬದಿ ಕುಳಿತು ಬಟ್ಟೆ ಹೊಲಿಯುತ್ತಿರುವ ರಿಯಲ್ ಹೀರೋ
- 4 hrs ago
ಪುನೀತ್ ಸರಳತೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪಂಚಮಸಾಲಿ ಸ್ವಾಮೀಜಿ
Don't Miss!
- News
ಪುದುಚೇರಿ ಬಿಜೆಪಿ ಶಾಸಕ, ಖಜಾಂಚಿ ಶಂಕರ್ ನಿಧನ
- Finance
ಜನವರಿ ತಿಂಗಳ ಮೊದಲ 15 ದಿನಗಳಲ್ಲಿ FPI 14,866 ಕೋಟಿ ರು. ಹೂಡಿಕೆ
- Automobiles
ಬೈಕ್ ಸವಾರರೇ ಎಚ್ಚರ: ರೇರ್ ವೀವ್ ಮಿರರ್ ಬಳಸದಿದ್ದರೂ ಬೀಳಲಿದೆ ದಂಡ
- Sports
ಪೂಜಾರ ವಿರುದ್ಧ ಆಸ್ಟ್ರೇಲಿಯಾ ತನ್ನ ಯೋಜನೆಯನ್ನು ಉತ್ತಮವಾಗಿ ಕಾರ್ಯಗತಗೊಳಿಸಿದೆ
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಮೂಕಾಂಬಿಕೆಯ ಮೊರೆಹೋದ ದುನಿಯಾ ರಶ್ಮಿ!
ನಟಿ ರಶ್ಮಿ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಇದೇ ಫೆ.22ರಂದು ಭೇಟಿನೀಡಿ, ದೇವಿಯ ದರ್ಶನ ಪಡೆದಿದ್ದಾರೆ. ದುನಿಯಾ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪೂರ್ಣಪ್ರಮಾಣದ ನಾಯಕಿಯಾಗಿ ಎಂಟ್ರಿ ಕೊಟ್ಟ ರಶ್ಮಿ, ಆ ನಂತರದ ದಿನಗಳಲ್ಲಿ ಹೆಚ್ಚು ಸುದ್ದಿ ಮಾಡಲಿಲ್ಲ. ರಶ್ಮಿ ಎಲ್ಲಿ ಹೋದರು ಎಂದು ಹುಡುಕುತ್ತಿರುವವರಿಗೆ ಇಲ್ಲಿದೆ ಉತ್ತರ.
ರಮೇಶ್ ಸುರ್ವೆ ಎಂಬ ಪರಮ ಪುಣ್ಯಾತ್ಮ ನಿರ್ದೇಶಕನ ಸಾರರ್ಥ್ಯದಲ್ಲಿ ಮೂಡಿಬಂದ 'ಮಂದಾಕಿನಿ' ಎಂಬ ಎ ಪ್ಲಸ್ ಸರ್ಟಿಫಿಕೇಟ್ ಸಿನಿಮಾದಲ್ಲಿ ನಟಿಸಿ, ಮೂಲೆಗುಂಪಾದ ರಶ್ಮಿ ಅಲ್ಲಿ ಇಲ್ಲಿ ಚೂರು ಪಾರು ಪಾತ್ರಗಳಲ್ಲಷ್ಟೇ ಕಾಣಿಸಿಕೊಂಡರು. ನಂತರ 'ಅನು' ಚಿತ್ರದಲ್ಲಿ ಪೂಜಾ ಗಾಂಧಿಯ ಜೂನಿಯರ್ ನಾಯಕಿಯಾಗಿ ಕಾಣಿಸಿಕೊಂಡರು. ಅದೂ ಮೂರೇ ದಿನಕ್ಕೆ ಫ್ಲಾಪ್ ದುನಿಯಾ ಸೇರಿಬಿಟ್ಟಿತು.
ಮೂರು ವರ್ಷದಿಂದ ಇನ್ನೇನು ಸೆಟ್ಟೇರಲಿದೆ ಎಂಬ ಸುದ್ದಿಯನ್ನೇ ಹೊರಡಿಸುತ್ತಿರುವ 'ಚೆಲ್ಲಾ' ಎಂಬ ಚಿಲ್ಲರೆ ಸಿನಿಮಾಗೆ ಬುಕ್ ಆಗಿದ್ದು ಬಂತೇ ಹೊರತು ಅದು ಶೂಟಿಂಗ್ ಹಂತಕ್ಕೇ ಬರಲಿಲ್ಲ! ಇಷ್ಟೆಲ್ಲಾ ಸೋಲುಗಳಿಗೆ ಉತ್ತರ ಕಂಡುಕೊಳ್ಳಲಾಗದ ರಶ್ಮಿ ಕೊಲ್ಲೂರು ಮೂಕಾಂಬಿಕಾ ಸನ್ನಿಧಿಗೆ ಹೋಗಿಬಂದಿರಬೇಕು ಎನ್ನುತ್ತಿದ್ದಾರೆ ಅವರ ಒಂದು ಕಾಲದ ಅಭಿಮಾನಿಗಳು!