Don't Miss!
- News Siddaramaiah: ಹುಬ್ಬಳ್ಳಿಯ ನೇಹಾ ಹಿರೇಮಠ ನಿವಾಸಕ್ಕೆ ಸಿಎಂ ಭೇಟಿ: ಸಿದ್ದರಾಮಯ್ಯ ಕೊಟ್ಟ ಭರವಸೆ ಏನು?
- Lifestyle ದೇಹದಲ್ಲಿ ಈ ಬದಲಾವಣೆ ಆದರೆ ನಿಮ್ಮಲ್ಲಿ ವಿಟಮಿನ್ ಬಿ12 ಕೊರತೆಯಾಗಿದೆ ಎಂದರ್ಥ
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡ ಚಿತ್ರಗಳ ಸ್ಪರ್ಧೆ ಬಗ್ಗೆ ಪರಿಯ ಪರಿಪರಿ ಪ್ರಶ್ನೆ
ನಾಳೆ
(ಏಪ್ರಿಲ್
27,
2012)
ರಾಜ್ಯಾದ್ಯಂತ
ಹಾಗೂ
ಚೆನ್ನೈ,
ಮುಂಬೈ,
ದೆಹಲಿ,
ಕ್ಯಾಲಿಪೋರ್ನಿಯಾದಲ್ಲೂ
ಬಿಡುಗಡೆಯಾಗುತ್ತಿರುವ
ಕನ್ನಡ
ಚಿತ್ರ
'ಪರಿ'
ನಿನ್ನೆ
ವಿವಾದವೊಂದನ್ನು
ಸೃಷ್ಟಿಸಿಕೊಂಡಿದೆ.
ನಮ್ಮ
ಚಿತ್ರ
ಬಿಡುಗಡೆಯಾದ
ತಕ್ಷಣವೇ,
ಒಂದು
ವಾರದೊಳಗೇ
ಬಿಗ್
ಬಜೆಟ್
ಚಿತ್ರ
ಅಣ್ಣಾಬಾಂಡ್
ಬಂದರೆ
ನಮ್ಮ
ಗತಿಯೇನು
ಎಂಬುದು
ಅವರ
ಪ್ರಶ್ನೆ.
ಈ
ಮೊದಲು
ಅಣ್ಣಾಬಾಂಡ್
ಬಿಡುಗಡೆ
ದಿನಾಂಕ
ಮೇ
3
ಅಥವಾ
ಅದರ
ನಂತರ
ಎಂಬ
ಮಾಹಿತಿ
ಎಲ್ಲೆಡೆ
ಹರಿದಾಡುತ್ತಿತ್ತು.
ಆದರೀಗ ಮೇ 1, 2012 ಎಂಬುದು ಪಕ್ಕಾ ಆದ ಹಿನ್ನಲೆಯಲ್ಲಿ ಪರಿ ಚಿತ್ರತಂಡ ಪೇಚಿಗೆ ಸಿಲುಕಿದೆ. ಅಣ್ಣಾಬಾಂಡ್ ಬಿಗ್ ಬಜೆಟ್ ಚಿತ್ರ, ನಮ್ಮದು ಕಡಿಮೆ ಬಜೆಟ್. ಸಹಜವಾಗಿ ಪ್ರಮೋಶನ್, ಚಿತ್ರಮಂದಿರಗಳ ಸಂಖ್ಯೆ ಹೀಗೆ ಎಲ್ಲ ವಿಷಯಗಳಲ್ಲೂ ನಾವು ಅಣ್ಣಾಬಾಂಡ್ ಚಿತ್ರಕ್ಕೆ ಪೈಪೋಟಿ ನೀಡಲು ಸಾಧ್ಯವಿಲ್ಲ. ಹೀಗಿರುವಾಗ ಪರಿ ಬಿಡುಗಡೆಯಾದ 5ನೇ ದಿನಕ್ಕೆ ಅಣ್ಣಾಬಾಂಡ್ ಬಿಡುಗಡೆಯಾಗುವುದು ಯಾವ ನ್ಯಾಯ ಎಂಬುದು ಅವರ ಅಳಲು.
ಇದಕ್ಕೆ ಸಂಬಂಧಿಸಿ ನ್ಯಾಯ ಕೇಳಲು ಈಗಾಗಲೇ ನಿರ್ಧರಸಿರುವ ಪರಿ ಚಿತ್ರತಂಡ ಮಾಧ್ಯಮದ ಮುಂದೆ ಬಂದಿದೆ. ಜೊತೆಗೆ ಮುಂದಿನ ಹಜ್ಜೆಯ ಬಗ್ಗೆ ಯೋಚಿಸತೊಡಗಿದೆ. ಕಾರಣ, ಬೇರೆ ಬಾಷೆಯ ಚಿತ್ರಗಳು ಪೈಪೋಟಿ ಎದುರಿಸುವುದೇ ಕಷ್ಟವಾಗಿರುವಾಗ ಕನ್ನಡ ಚಿತ್ರಗಳೆ ಸ್ಪರ್ಧೆಗೆ ಬಿದ್ದರೆ ಹೇಗೆ? ಆದರೆ ಪರಿ ಚಿತ್ರತಂಡ ಪರಿಪರಿಯಾಗಿ ಬೇಡಿಕೊಂಡರೂ ಕೇಳುವವರು ಯಾರೂ ಇಲ್ಲ, ವಿವಾದ ಹಾಗೇ ತಣ್ಣಗಾಗುತ್ತದೆ ಬಿಡಿ, ಎಂದು ನಗುತ್ತಿದೆ ಗಾಂಧಿನಗರ ಎಂಬುದು ಲೇಟೇಸ್ಟ್ ನ್ಯೂಸ್. (ಒನ್ ಇಂಡಿಯಾ ಕನ್ನಡ)