Don't Miss!
- Sports CSK vs LSG IPL 2024: ಮಾರ್ಕಸ್ ಸ್ಟೋಯಿನಿಸ್ ಆರ್ಭಟಕ್ಕೆ ಸಿಎಸ್ಕೆ ಥಂಡಾ; ಚೆನ್ನೈಗೆ ನೀರು ಕುಡಿಸಿದ ಲಕ್ನೋ
- News ಮಂಡ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ: ಕಾರಣ ತಿಳಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್
- Lifestyle ಈ ಕಾರಣಕ್ಕೆ ನೀವು ಮಾವಿನ ಹಣ್ಣನ್ನು ನೀರಿನಲ್ಲಿ ನೆನೆಹಾಕಿಯೇ ತಿನ್ನಬೇಕು, ಅದು ನಿಮ್ಮ ತೋಟದಲ್ಲಿ ಬೆಳೆದಿದ್ದೇ ಆಗಿರಲಿ
- Automobiles ಪ್ರತಿ ಕಿ.ಮೀ ಚಲಿಸಲು 3.3 ರೂ. ವೆಚ್ಚ: 10 ಜನರು ಪ್ರಯಾಣಿಸುವ ಟಾಟಾ ಮ್ಯಾಜಿಕ್ ಬೈ-ಫ್ಯೂಯಲ್ ಲಗ್ಗೆ
- Finance ಸಾಲ ತಂದು ನೌಕರರಿಗೆ ಸಂಬಳ ನೀಡಿದ ಬೈಜುಸ್ ಸಂಸ್ಥೆ!
- Technology Realme: ಭಾರತದಲ್ಲಿ ರಿಯಲ್ಮಿ C65 5G ಸ್ಮಾರ್ಟ್ಫೋನ್ ಲಾಂಚ್ಗೆ ದಿನಾಂಕ ಫಿಕ್ಸ್! ಫೀಚರ್ಸ್ ಲೀಕ್..
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಟ ಬುಲೆಟ್ ಪ್ರಕಾಶ್ ಕಾಲಿನ ಮೇಲೆ ಹರಿದ ಕಾರು
ಕನ್ನಡ ಚಿತ್ರರಂಗದ ಹಾಸ್ಯ ನಟ ಬುಲೆಟ್ ಪ್ರಕಾಶ್ ಕಾಲಿನ ಮೇಲೆ ಕಾರು ಹರಿದ ಪರಿಣಾಮ ಅವರ ಬಲಗಾಲಿನ ಮೂಳೆ ಮುರಿದಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿರುವ ಅವರು ಈಗಷ್ಟೇ ಚೇತರಿಸಿಕೊಂಡಿದ್ದಾರೆ. ಅಪಘಾತ ಹೇಗೆ ಸಂಭವಿಸಿತು ಎಂಬ ಬಗ್ಗೆ ಸ್ವತಃ ಅವರೇ ವಿವರ ನೀಡಿದ್ದಾರೆ.
ತೀರಾ ಇತ್ತೀಚೆಗೆ ಅವರು ಯಲಹಂಕದ ದೇವಸ್ಥಾನ ಒಂದರಲ್ಲಿ ಪೂಜೆ ಮುಗಿಸಿಕೊಂಡು ಹೊರಬರುತ್ತಿರಬೇಕಾದರೆ ಈ ಘಟನೆ ನಡೆದಿದೆ. ರಿವರ್ಸ್ ಗೇರಿನಲ್ಲಿ ಬಂದ ಕಾರು ಇವರ ಕಾಲಿನ ಮೇಲೆ ಹರಿದಿದೆ. ಹರಿದ ರಭಸಕ್ಕೆ ಕಾಲಿನ ಮೂಲೆ ಮುರಿದಿದೆ. ಕೂಡಲೆ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು.
ಬುಲೆಟ್ ಪ್ರಕಾಶ್ ದೇವಸ್ಥಾನದಿಂದ ಹೊರಬರುತ್ತಿರಬೇಕಾದರೆ, ಕೆಲ ಅಭಿಮಾನಿಗಳು ಹಸ್ತಾಕ್ಷರಕ್ಕಾಗಿ ಮುಗಿಬಿದ್ದಾರೆ. ಅವರ ಕಾರಿನ ಚಾಲಕ ರಿವರ್ಸ್ ಗೇರ್ನಲ್ಲಿ ತೀರಾ ಸನಿಹಕ್ಕೆ ಬರಲು ಹೋದಾಗ ಕಾರಿನ ಮೇಲೆ ಹತ್ತಿಸಿದ್ದಾನೆ. ನಡೆದದಿಷ್ಟೇ.
ಅಪಘಾತಕ್ಕಿಂತಲೂ ಅವರಿಗೆ ಬ್ಯಾಡ್ ಎಕ್ಸ್ಪೀರಿಯನ್ಸ್ ಇಂಡಸ್ಟ್ರಿಯಲ್ಲಿ ಆಗಿದೆ. ಬುಲೆಟ್ ಪ್ರಕಾಶ್ ಸತ್ತೇ ಹೋದರು ಎಂದು ಕೆಲವರು ಸುದ್ದಿ ಹಬ್ಬಿಸಿದ್ದರಂತೆ. ಮುಂಗಡ ಹಣ ಕೊಡಲು ಬಂದ ನಿರ್ಮಾಪಕರೊಬ್ಬರು ಇವರ ಕಾಲನ್ನು ನೋಡಿ ಎಸ್ಕೇಪ್ ಆದರಂತೆ. ಬಳಿಕ ಅವರನ್ನು ಕರೆದು ಆಕ್ಸಿಡೆಂಟ್ ಬಳಿಕ ತಾವು ಎಂಟು ಚಿತ್ರಗಳಲ್ಲಿ ಅಭಿನಯಿಸುತ್ತಿರುವುದಾಗಿ ತಿಳಿಸಿದರಂತೆ. (ಏಜೆನ್ಸೀಸ್)