Don't Miss!
- News
ಪಂಜಾಬ್ನಲ್ಲಿ 400 ಮೊಹಲ್ಲಾ ಕ್ಲಿನಿಕ್ಗಳ ಲೋಕಾರ್ಪಣೆ
- Sports
KCC Cup 2023: ಯಾವ ತಂಡಕ್ಕೆ ಯಾರು ನಾಯಕ?; ಸುದೀಪ್ ತಂಡದಲ್ಲಿ ಯೂನಿವರ್ಸಲ್ ಬಾಸ್!
- Finance
LIC plan: ದಿನಕ್ಕೆ 83 ರೂ ಹೂಡಿಕೆ ಮಾಡಿ, ಮೆಚ್ಯೂರಿಟಿ ವೇಳೆ 10 ಲಕ್ಷ ರೂ ಪಡೆಯಿರಿ!
- Technology
ವಾಟ್ಸಾಪ್ನ ಈ ಹೊಸ ಫೀಚರ್ಸ್ನಲ್ಲಿ ಏನೆಲ್ಲಾ ಅನುಕೂಲ ಇದೆ ಗೊತ್ತಾ!?
- Automobiles
ಭಾರತದಲ್ಲಿ ದಾಖಲೆ ಮಟ್ಟದ ಬುಕ್ಕಿಂಗ್ ಪಡೆದುಕೊಳ್ಳುತ್ತಿವೆ ಮಾರುತಿ ಜಿಮ್ನಿ, ಫ್ರಾಂಕ್ಸ್
- Lifestyle
ಸಂಗಾತಿ ಸುಮ್-ಸಮ್ಮನೇ ಸಂಶಯ ಪಡುತ್ತಾರಾ? ಅವರ ಸಂಶಯ ಹೋಗಲಾಡಿಸಲು ಏನು ಮಾಡಬೇಕು?
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಮಹಾನ್ ನಿರ್ದೇಶಕನಿಗೆ ಇದೆಂಥಾ ನ್ಯಾಯ?
ನವೀಕರಣದ ಹೆಸರಿನಲ್ಲಿ ಕೆಲ ವರ್ಷಗಳ ಹಿಂದೆ ಬಾಗಿಲು ಮುಚ್ಚಿದ್ದ ಈ ಚಿತ್ರಮಂದಿರ ಇದುವರೆಗೆ ಪುನರಾರಂಭ ಗೊಳ್ಳುವ ಮಾತಿರಲಿ ನವೀಕರಣ ಕಾಮಗಾರಿಗೂ ಇನ್ನೂ ಚಾಲನೆಯಾಗಿಲ್ಲ. ಪುಟ್ಟಣ್ಣ ಶಿಷ್ಯರಾದ ವಿಷ್ಣುವರ್ಧನ್, ಅಂಬರೀಶ್ ಮುಂತಾದವರೂ ಎಷ್ಟೇ ಒತ್ತಡ ತಂದರೂ ಎಸ್ ಎಂ ಕೃಷ್ಣ ಅವರಿಂದ ಹಿಡಿದು ಯಡಿಯೂರಪ್ಪನವರೆಗೂ ಯಾವ ಸರಕಾರವೂ ಈ ಬಗ್ಗೆ ಗಂಭೀರ ಚಿಂತನೆ ನಡೆಸಿದಂತಿಲ್ಲ. ಕೆಲ ಸಮಯ ಈ ಚಿತ್ರಮಂದಿರ ಜಯನಗರ ಪೋಲಿಸ್ ಠಾಣೆಯಾಗಿಯೂ ಪರಿವರ್ತನೆಗೊಂಡಿತ್ತು. ಚಿತ್ರಮಂದಿರದ ಇಂದಿನ ದುಸ್ಥಿತಿಗೆ ಸರಕಾರ ಮತ್ತು ಬಿಬಿಎಂಪಿ ನೇರ ಹೊಣೆ.
ಈಗ ಜಯನಗರದ ಜನತೆ ಚಿತ್ರಮಂದಿರದ ಪುನರಾರಂಭಕ್ಕೆ ಒತ್ತಾಯಿಸಿ ಬೃಹತ್ ಸಹಿ ಸಂಗ್ರಹ ಚಳುವಳಿಯನ್ನು ಶನಿವಾರದಿಂದ (ಜ 29) ಆರಂಭಿಸಿ ಚಳವಳಿಗಿಳಿದಿದ್ದಾರೆ. ಈ ಕಾರ್ಯಕ್ರಮದಲ್ಲಿ ಪದ್ಮ ಪ್ರಶಸ್ತಿ ವಿಜೇತ ಗಿರೀಶ್ ಕಾಸರವಳ್ಳಿ, ಎಂ ಎಸ್ ಸತ್ಯು, ವಿ ಮನೋಹರ್, ಶಿವರುದ್ರಯ್ಯ, ಬರಗೂರು ರಾಮಚಂದ್ರಪ್ಪ, ಟಿ ಎನ್ ಸೀತಾರಾಮ್, ನಟಿ ತಾರಾ ಮುಂತಾದವರು ಭಾಗವಹಿಸಿ ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿ ಚಳುವಳಿಯನ್ನು ಯಶಸ್ವಿಗೊಳಿಸಿದರು. ಡಿಮೋಕ್ರೆಟಿಕ್ ಯೂಥ್ ಫೆಡರೇಷನ್ ಆಫ್ ಇಂಡಿಯಾ(DYFI) ಆರಂಭಿಸಿದ ಈ ಸಹಿ ಅಭಿಯಾನಕ್ಕೆ ಸುಮಾರು 250ಕ್ಕೂ ಹೆಚ್ಚಿನ ಮಂದಿ ಬೆಂಬಲ ವ್ಯಕ್ತಪಡಿಸಿದರು.
1985ರಲ್ಲಿ ಆರಂಭವಾದ ಪುಟ್ಟಣ್ಣ ಚಿತ್ರಮಂದಿರ ಬೆಂಗಳೂರಿನ ಮಧ್ಯಮ ವರ್ಗ ಜನರ ಅಚ್ಚುಮೆಚ್ಚಿನ ಸಿನಿಮಾ ಮಂದಿರವಾಗಿತ್ತು. ಜಯನಗರ ಈಗಾಗಲೇ ಪುಟ್ಟಣ್ಣ, ನಂದ, ಶಾಂತಿ ಹಾಗೂ ಸ್ವಾಗತ್ ಚಿತ್ರಮಂದಿರಗಳನ್ನು ಕಳೆದುಕೊಂಡು ಬರಿದಾಗಿದೆ. ಪುಟ್ಟಣ್ಣ ಚಿತ್ರಮಂದಿರದ ನವೀಕರಣದ ಹೊಣೆಯನ್ನು ಬಿಬಿಎಂಪಿ ವಹಿಸಿಕೊಂಡು, ಕನ್ನಡ ಚಿತ್ರಗಳಿಗೆ ಆದ್ಯತೆ ನೀಡಬೇಕು ಎಂದು ಬರಗೂರು ರಾಮಚಂದ್ರಪ್ಪ ಅಭಿಪ್ರಾಯಪಟ್ಟರು. ಇದು ಅಲ್ಲಿ ನೆರದಿದ್ದ ಎಲ್ಲರ ಅಭಿಪ್ರಾಯವೂ ಆಗಿತ್ತು.
ಕನ್ನಡ ಚಿತ್ರರಂಗ ಕ್ಷೀಣಿಸುತ್ತಿರುವ ಈ ಸಮಯದಲ್ಲಿ ಮತ್ತು ಮಲ್ಟಿಪ್ಲೆಕ್ಸ್ ಭರಾಟೆಯಲ್ಲಿ ಕನ್ನಡ ಚಿತ್ರಮಂದಿರಗಳು ಸೊರಗಿ ಹೋಗುವುದು ತಪ್ಪಬೇಕು. ಈ ದೇಶ ಕಂಡ ಮಹಾನ್ ನಿರ್ದೇಶಕ ಪುಟ್ಟಣ್ಣ ಹೆಸರಿನಲ್ಲಿರುವ ಚಿತ್ರಮಂದಿರ ನವೀಕರಣಗೊಂಡು ಮತ್ತೆ ಮೊದಲಿನ ಚಿತ್ರಸಂಭ್ರಮ ಮರುಕಳಿಸುವಂತಾಗಲಿ ಎನ್ನುವುದು ನಮ್ಮೆಲ್ಲರ ಆಶಯ. [ಚಿತ್ರಮಂದಿರ]