twitter
    For Quick Alerts
    ALLOW NOTIFICATIONS  
    For Daily Alerts

    ಹಾಸ್ಯನಟರಾದ ಶರಣ್ ಚಿತ್ರರಂಗಕ್ಕೆ ಬಂದಿದ್ದೇಕೆ? ಓದಿ...

    |

    Sharan
    ಹಾಸ್ಯನಟ ಶರಣ್ ಎಲ್ಲಾ ಸಿನಿಪ್ರೇಕ್ಷಕರಿಗೂ ಗೊತ್ತು. ಅವರು ಸ್ಯಾಂಡಲ್ ವುಡ್ ಗೆ ಬಂದಮೇಲೆ ಯಾವುದೇ ಕನ್ನಡ ಚಿತ್ರಗಳಲ್ಲಿ ಕಾಲೇಜ್ ದೃಶ್ಯಗಳಿದ್ದರೆ ಅದರಲ್ಲಿ ಶರಣ್ ಇದ್ದೇ ಇರುತ್ತಾರೆ ಅನ್ನುವಷ್ಟು ಕಾಲೇಜ್ ಬಾಯ್ ಪಾತ್ರ ಮಾಡಿದ್ದಾರವರು. ಅದಲ್ಲವೆಂದಾದರೆ ನಾಯಕನ ಗಳೆಯ ಶರಣ್ ಆಗಿರುತ್ತಾರೆ.

    ಹೀಗೆ ಕನ್ನಡ ಚಿತ್ರಗಳಲ್ಲಿ ಹಾಸ್ಯನಟ, ಕಾಲೇಜ್ ಬಾಯ್, ನಾಯಕನ ಸ್ನೇಹಿತ ಹೀಗೆ ಸಿಕ್ಕ ಪಾತ್ರಗಳಿಗೆ ಜೀವ ತುಂಬುತ್ತಿರುವ ಈ ಪ್ರಸಿದ್ಧ ಪ್ರತಿಭೆ ಚಿತ್ರರಂಗಕ್ಕೆ ಬಂದದ್ದು 'ವಿಲನ್' ಆಗುವ ಕನಸುಹೊತ್ತು. ಈ ಮಾತನ್ನು ಸ್ವತಃ ಶರಣ್ ಹೇಳಿದ್ದಾರೆ. ಹಾಗಾಗಿ ನಂಬಲೇಬೇಕು. ಇಲ್ಲದಿದ್ದರೆ ಕಾಮಿಡಿಗೇ ಹುಟ್ಟಿರುವಷ್ಟು ಚೆನ್ನಾಗಿ 'ಕಾಮಿಡಿ' ಮಾಡುವ ಅವರ ಬಗ್ಗೆ ಬೇರೆ ಯಾರಾದರೂ ಹೇಳಿದರೆ ನಂಬಲಸಾಧ್ಯ.

    ಕನ್ನಡದ ಒಂದು ಕಾಲದ ಜನಪ್ರಿಯ ನಟಿ ಶ್ರುತಿ ತಮ್ಮ ಶರಣ್ ಅವರಿಗೆ ಚಿಕ್ಕಂದಿನಿಂದಲೂ ಹಿಂದಿಯ ಖ್ಯಾತ ಖಳನಟ ಕೆ. ಎನ್. ಸಿಂಗ್ ಅವರ ನಟನೆಯೆಂದರೆ ತುಂಬಾ ಇಷ್ಟವಂತೆ. ಅವರನ್ನೇ ಇಷ್ಟಪಟ್ಟು ಬೆಳೆದ ಅವರಿಗೆ ಸಿಂಗ್ ರಂತೆ ಖಳನಟನಾಗಿ ಮಾತೃಭಾಷೆ ಕನ್ನಡದಲ್ಲಿ ಮಿಂಚಬೇಕೆಂಬ ಬಲವಾದ ಆಸೆ ಇತ್ತಂತೆ. ಆದರೆ ಆಗಿದ್ದೇ ಬೇರೆ ಅನ್ನುತ್ತಾರೆ ಶರಣ್. (ಒನ್ ಇಂಡಿಯಾ ಕನ್ನಡ)

    English summary
    Comedy Actor Sharan had dream to act in Villain Role. But in Kannada Film Industry, now he became comedy actor and College Boy.
 
    Monday, February 6, 2012, 14:01
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X