Don't Miss!
- News
ಮಾನ್ವಿ: ಮಂಜೂರಾದ ಬಡವರ ಭೂಮಿಗೆ ಕಣ್ಣು ಹಾಕಿದ ಪ್ರಭಾವಿಗಳು, ಜನಾಕ್ರೋಶ
- Sports
LLC 2023: ಲೆಜೆಂಡ್ಸ್ ಲೀಗ್ನಲ್ಲಿ ಕೈಫ್, ಗೇಲ್, ಗಂಭೀರ್ ಸೇರಿದಂತೆ ಹಲವು ಸ್ಟಾರ್ಗಳು
- Lifestyle
ಆರೋಗ್ಯವಾಗಿರಬೇಕೆ? ಹಾಗಾದರೆ ನೀವು 3 ವಿಷಯಗಳಲ್ಲಿ ನಂಬಿಕೆ ಇಡಲೇಬೇಕು
- Finance
Jio 5G services: ಇಂದಿನಿಂದ ಮತ್ತೆ 34 ನಗರಗಳಲ್ಲಿ ಪ್ರಾರಂಭ- ಮಧ್ಯ ಕರ್ನಾಟಕದ ಯಾವ ನಗರಕ್ಕೆ ಕೊಡುಗೆ? ಮಾಹಿತಿ ಪಡೆಯಿರಿ
- Automobiles
ಪೆಟ್ರೋಲ್ ಬೆಲೆ ಏರಿಕೆ ಚಿಂತೆ ಬಿಡಿ: ರೂ.1 ಲಕ್ಷ ಇದ್ರೆ ಆಕ್ಟಿವಾವನ್ನು ಎಲೆಕ್ಟ್ರಿಕ್ ಸ್ಕೂಟರ್ ಆಗಿ ಪರಿವರ್ತಿಸಬ
- Technology
ಆಂಡ್ರಾಯ್ಡ್ ಬಳಕೆದಾರರಿಗಾಗಿ 'ಕಿಡ್ಸ್ ಮಿಸ್ಟರಿ ಬಾಕ್ಸ್' ಫೀಚರ್ಸ್ ಪರಿಚಯಿಸಿದ ನೆಟ್ಫ್ಲಿಕ್ಸ್!
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಜೈಲಿನಲ್ಲಿದ್ದಾಗ ಗನ್ಮ್ಯಾನ್ ವಾಪಸ್ ಪಡೆಯಲಾಗಿದೆ: ನಟ ಚೇತನ್ ಆರೋಪ
'ಆ ದಿನಗಳು' ಖ್ಯಾತಿಯ ನಟ ಚೇತನ್ ವಿವಾದಗಳಿಂದಲೇ ಆಗಾಗ ಸುದ್ದಿಯಲ್ಲಿರುತ್ತಾರೆ. ಕೆಲವು ತಿಂಗಳ ಹಿಂದೆ ನ್ಯಾಯಾಧೀಶರ ತೀರ್ಪಿಗೆ ವಿರುದ್ಧವಾಗಿ ಮಾಡಿದ್ದ ಒಂದು ಟ್ವೀಟ್ನಿಂದ ಪೊಲೀಸರು ಚೇತನ್ರನ್ನು ವಶಕ್ಕೆ ಪಡೆದಿದ್ದರು. ಬಳಿಕ ನ್ಯಾಯಾಲಯ ಚೇತನ್ಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಿತ್ತು. ಇದೀಗ ಚೇತನ್ ಜಾಮೀನು ಪಡೆದು ಹೊರ ಬಂದಿದ್ದಾರೆ. ಆದರೆ, ತಮಗೆ ನೀಡಿದ್ದ ಗನ್ಮ್ಯಾನ್ ಅನ್ನು ಪೊಲೀಸರು ಹಿಂಪಡೆದಿದ್ದಾರೆ ಎಂದು ಬೇಸರ ಹೊರ ಹಾಕಿದ್ದಾರೆ.
ಜೈಲ್ನಿಂದ ಬಿಡುಗಡೆಗೊಂಡ ಬಳಿಕ ಅವರಿಗೆ ನೀಡಲಾಗಿದ್ದ ಗನ್ಮ್ಯಾನ್ ಅನ್ನು ವಾಪಸ್ ಪಡೆಯಲಾಗಿದೆ. ಈ ಕಾರಣಕ್ಕಾಗಿ ನಟ ಚೇತನ್ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ರನ್ನುಆ ದಿನಗಳು ಚೇತನ್ ಭೇಟಿ ಮಾಡಿದ್ದಾರೆ. ಬಳಿಕ ಮಾಧ್ಯಮದ ಜೊತೆ ಮಾತನಾಡುತ್ತಾ ಜೈಲಿನಲ್ಲಿ ಇರುವಾಗ ನನಗೆ ನೀಡಿದ್ದ ಗನ್ಮ್ಯಾನ್ ಅನ್ನು ವಾಪಾಸ್ ಪಡೆಯಲಾಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಟ
ಚೇತನ್ರನ್ನು
ಅಮೆರಿಕಾಗೆ
ಗಡಿಪಾರು
ಮಾಡಲು
ಸಿದ್ಧತೆ!

ಚೇತನ್ ಗನ್ಮ್ಯಾನ್ ವಾಪಸ್
" ನನ್ನ ಗನ್ಮ್ಯಾನ್ ಅನ್ನು ತೆಗೆದು ಹಾಕಿದ್ದಾರೆ. ನಾನು ಜೈಲಿನಲ್ಲಿ 6 ದಿನ ಇದ್ದೆ. ಆಗ ತೆಗೆದು ಹಾಕಿದ್ದಾರೆ. ಇವತ್ತೂ ಕೂಡ ಬಂದಿಲ್ಲ. ನಾಲ್ಕೂವರೆ ವರ್ಷ, ಗೌರಿ ತೀರಿಕೊಂಡ ಬಳಿಕ ಗನ್ಮ್ಯಾನ್ ಬಂದಿದ್ದರು. ಈಗ ನಮಗೆ ಗನ್ಮ್ಯಾನ್ ಕೊಡಿ ಎಂದು ಮನವಿ ಮಾಡಿಕೊಂಡಿದ್ದೇನೆ." ಎಂದು ಚೇತನ್ ಬೇಸರ ವ್ಯಕ್ತಪಡಿಸಿದ್ದಾರೆ.

ಕಾನೂನು ಪ್ರಕಾರವೇ ಹೋರಾಟ
"ಕಮಿಷನರ್ ಅವರು ನಿಮ್ಮ ಮನೆ ಮುಂದೆ ಬೀಟ್ ಪೊಲೀಸ್ ಹಾಕುತ್ತೇವೆ ಎಂದು ಹೇಳಿದ್ದಾರೆ. ಏನೇನಿದೆ ಅದನ್ನು ನಾವು ನಮ್ಮ ಕಡೆಯಿಂದ ಮಾಡುತ್ತೇವೆ. ಗನ್ಮ್ಯಾನ್ ಬಗ್ಗೆ ಎಡಿಜಿಪಿ ಸೆಕ್ಯೂರಿಟಿ ಬಗ್ಗೆ ಮಾತಾಡಬೇಕು. ನಮಗೆ ಇದರಲ್ಲಿ ವೈಯಕ್ತಿಕ ದ್ವೇಷವಿಲ್ಲವೆಂದು ಹೇಳಿದ್ದಾರೆ. ಕಾನೂನು ಪ್ರಕಾರ ನಾನು ಯಾವ ರೀತಿ ಹೋರಾಟ ಮಾಡಬೇಕೋ ಹಾಗೇ ಹೋರಾಟವನ್ನು ಮುಂದುವರೆಸುತ್ತೇನೆ." ಎಂದು ನಟ ಚೇತನ್ ಹೇಳಿದ್ದಾರೆ.

ನನ್ನ ಬಳಿ ಒಸಿಐ ಕಾರ್ಡ್ ಇದೆ
"ಓವರ್ಸೀನ್ ಸಿಟಿಜನ್ಶಿಪ್ ಆಫ್ ಇಂಡಿಯಾವನ್ನು ಭಾರತ ಸರ್ಕಾರವೇ ನನಗೆ ನೀಡಿದೆ. ನಾನು ಒಸಿಐ ಕಾರ್ಡ್ ಹೋಲ್ಡರ್. ಮತ ಹಾಕುವ ಹಾಗೂ ಚುನಾವಣೆಗೆ ನಿಲ್ಲುವ ಹಕ್ಕನ್ನು ಬಿಟ್ಟು ಒಸಿಐ ಕಾರ್ಡ್ ಹೋಲ್ಡರ್ ಅಂದಮೇಲೆ ಭಾರತೀಯ ನಾಗರೀಕರಿಗೆ ಏನು ಹಕ್ಕಿದೆ ಅದೆಲ್ಲವೂ ಸಿಗುತ್ತೆ. ಮತ ಹಾಕುವ ಆಸಕ್ತಿನೂ ಇಲ್ಲ. ಮತವನ್ನೂ ಹಾಕಿಲ್ಲ. ಚುನಾವಣೆಗೆ ನಿಲ್ಲುವ ಆಸಕ್ತಿನೂ ಇಲ್ಲ. ಅದನ್ನೂ ಮಾಡಿಲ್ಲ" ಎನ್ನುತ್ತಾರೆ ಚೇತನ್.

ನಮ್ಮ ತಾತಾನೂ ಫ್ರೀಡಂ ಫೈಟರ್
"ನಾನು ಕಾನೂನಿಗೆ ವಿರುದ್ಧವಾಗಿ ನಡೆದಿಲ್ಲ. ಈ ಕಾನೂನಿಗೆ 65- 70 ವರ್ಷದ ಇತಿಹಾಸವಿದೆ. ನಮ್ಮ ಪೂರ್ವಿಕರು ಇಲ್ಲಿ ಬಾಳಿ ಬದುಕಿದ್ದಾರೆ. ನಮ್ಮ ತಾತ ಫ್ರೀಡಂ ಫೈಟರ್ ಆಗಿದ್ದರು. ನಮ್ಮ ಅಜ್ಜಿಗೆ ಇಂದಿಗೂ ಪೆನ್ಷನ್ ಬರುತ್ತೆ. ನಮ್ಮ ಅಪ್ಪ-ಅಮ್ಮ ಕೂಡ ಮೆಡಿಕಲ್ ಮಾಡಿರುವುದು ಕರ್ನಾಟಕದಿಂದಲೇ. ನನಗೂ ಆರ್ಥಿಕ ಶಕ್ತಿ, ಶೈಕ್ಷಣಿಕ ಶಕ್ತಿ ಸಿಕ್ಕಿದೆ ಅಂದರೆ, ಅದು ಕರ್ನಾಟಕದಿಂದಲೇ ಸಿಕ್ಕಿರುವುದು." ಎಂದು ಚೇತನ್ ಹೇಳಿದ್ದಾರೆ.