Don't Miss!
- News Government Employees; ಸರ್ಕಾರಿ ನೌಕರರ ಜೀವ ವಿಮೆ ಪಾಲಿಸಿ ಅವಧಿ ಏರಿಕೆ
- Lifestyle ಬಾಯಿ ರುಚಿಗೆ ಗರಿ ಗರಿ ನಿಪ್ಪಟ್ಟು..! ಮನೆಯಲ್ಲೇ ಮಾಡಿ ಟೆಸ್ಟಿ ತಿಂಡಿ
- Automobiles Kia: ಬ್ರೇಕ್ ಇಲ್ಲದ ಟ್ರಕ್ನಂತೆ ಮುನ್ನುಗ್ಗುತ್ತಿದೆ ಕಿಯಾ: ಈಗ ಸಣ್ಣ ಪಟ್ಟಣಗಳಲ್ಲೂ ಸಿಗಲಿದೆ!
- Sports RCB vs KKR: ಯಶ್ ಮೇಲೆ 'ದಯೆ' ತೋರುತ್ತಾರಾ ರಿಂಕು ಸಿಂಗ್?; ಜಿದ್ದು ತೀರಿಸಿಕೊಳ್ತಾರಾ ಆರ್ಸಿಬಿ ವೇಗಿ?
- Technology ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಡೀಪ್ಫೇಕ್ ದೊಡ್ಡ ಕಳವಳಕಾರಿ ಎಂದ ಮೋದಿ
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಶತಸೋದರಾಗ್ರಜಾ ಶರವೀರ' ಚಾಲೆಂಜಿಂಗ್ ಸ್ಟಾರ್ ದರ್ಶನ್
ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಇರುವ ಬಿರುದುಗಳು ಅಪಾರ. ದರ್ಶನ್ ಸರಳತೆ ಹಾಗೂ ಅಭಿನಯಕ್ಕೆ ಮೆಚ್ಚಿ ಅಭಿಮಾನಿಗಳು ಸಾಕಷ್ಟು ಹೆಸರಿನಿಂದ ಅವರನ್ನ ಕರೆಯುತ್ತಾರೆ. ದಾಸ, ಡಿ ಬಾಸ್, ಚಾಲೆಂಜಿಂಗ್ ಸ್ಟಾರ್, ಕರುನಾಡಿನ ಕರ್ಣ, ಬಾಕ್ಸ್ ಆಫೀಸ್ ಸುಲ್ತಾನ್, ಹೀಗೆ ಹತ್ತು ಹಲವಾರು ರೀತಿಯಲ್ಲಿ ಕರೆದು ದರ್ಶನ್ ಅವರ ಕೀರ್ತಿಯನ್ನ ಮತ್ತಷ್ಟು ಹೆಚ್ಚಿಸಿದ್ದಾರೆ ಅಭಿಮಾನಿಗಳು.
ಇಷ್ಟು ಹೆಸರಿನ ಜೊತೆಗೆ ಡಿ ಬಾಸ್ ಅವರ ಮುಡಿಗೆ ಮತ್ತೊಂದು ಬಿರುದು ಸೇರಿಕೊಂಡಿದೆ. ದರ್ಶನ್ ಅವರ ಸ್ನೇಹಿತ ಹಾಗೂ ಕವಿರತ್ನ ಅಂತಾನೇ ಹೆಸರು ಗಳಿಸಿರುವ ವಿ ನಾಗೇಂದ್ರ ಪ್ರಸಾದ್ ಅವರು ಹೊಸ ಹೆಸರನ್ನ ನೀಡಿದ್ದಾರೆ.
ಅಷ್ಟಕ್ಕೂ ದರ್ಶನ್ ಅವರಿಗೆ ಹೊಸ ಬಿರುದು ನೀಡಿರುವ ಉದ್ದೇಶವೇನು? ಆ ಬಿರುದು ಯಾವುದು? ದರ್ಶನ್ ಹಾಗೂ ನಾಗೇಂದ್ರ ಪ್ರಸಾದ್ ಭೇಟಿ ಆಗಿದ್ದು ಯಾವಾಗ? ಇಂತಹ ಕುತೂಹಲಕಾರಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ. ಮುಂದೆ ಓದಿ
ದರ್ಶನ್ ಈಗ ಶತಸೋದರಾಗ್ರಜಾ ಶರವೀರ
ಚಾಲೆಂಜಿಂಗ್ ಸ್ಟಾರ್ ದರ್ಶನ್ ಇನ್ನು ಮುಂದೆ ಶತಸೋದರಾಗ್ರಜಾ ಶರವೀರ ಆಗಲಿದ್ದಾರೆ. ನಿರ್ದೇಶಕ, ಚಿತ್ರ ಸಾಹಿತಿ ಹಾಗೂ ನಟ ವಿ ನಾಗೇಂದ್ರ ಪ್ರಸಾದ್ ಈ ಹೆಸರನ್ನ ಡಿ ಬಾಸ್ ಅವರಿಗೆ ನೀಡಿದ್ದಾರೆ.
ಶತಸೋದರಾಗ್ರಜಾ ಶರವೀರ ಅರ್ಥ
ಶತಸೋದರಾಗ್ರಜಾ ಎಂದರೆ ನೂರಾರು ಜನರ ಸಹೋದರ ಎಂದು ಅರ್ಥ ಕೊಡುತ್ತದೆ. ದರ್ಶನ್ ತಮ್ಮ ಸುತ್ತಾ ಮುತ್ತ ಇರುವವರನ್ನ ಸಹೋದರರಂತೆ ಕಾಣುತ್ತಾರೆ. ಇದೇ ಉದ್ದೇಶದಿಂದ ಈ ಮಾತನ್ನ ಹೇಳಿದ್ದಾರೆ.
ಕನ್ನಡದ ಶರವೀರವಾದ ದರ್ಶನ್
ಶತಸೋದರಾಗ್ರಜಾ ಎಂದು ಹೇಳುವುದರ ಜೊತೆಯಲ್ಲಿ ಶರವೀರ ಎಂದು ಸಂಭೋದಿಸಿದ್ದಾರೆ. ಗದಾಯುದ್ಧ ಹಾಗೂ ಬಿಲ್ಲು ವಿದ್ಯೆಯಲ್ಲೂ ವೀರನಾಗಿದ್ದಾನೆ ಎಂದಿದ್ದಾರೆ.
ಗೂಗಲ್ ಹಾಡನ್ನ ಮೆಚ್ಚಿದ ಡಿ ಬಾಸ್
ವಿ ನಾಗೇಂದ್ರ ಪ್ರಸಾದ್ ಅಭಿನಯಿಸಿ ನಿರ್ದೇಶನ ಮಾಡಿರುವ ಗೂಗಲ್ ಸಿನಿಮಾದ ಹಾಡುಗಳನ್ನ ಚಾಲೆಂಜಿಂಗ್ ಸ್ಟಾರ್ ದರ್ಶನ್ ವೀಕ್ಷಣೆ ಮಾಡಿದ್ದಾರೆ. ಹಾಡುಗಳನ್ನ ಮೆಚ್ಚಿಕೊಂಡು ಸಿನಿಮಾತಂಡಕ್ಕೆ ಶುಭಾಶಯವನ್ನ ತಿಳಿಸಿದ್ದಾರೆ. ಸದ್ಯ ಚಿತ್ರೀಕರಣ ಮುಗಿಸಿ ಪ್ರಚಾರ ಪ್ರಾರಂಭ ಮಾಡಿರುವ ಗೂಗಲ್ ಚಿತ್ರ ಆದಷ್ಟು ಬೇಗ ಪ್ರೇಕ್ಷಕರ ಮುಂದೆ ಬರಲಿದೆ.