Don't Miss!
- News ತೊಳೆಯೋದಕ್ಕೂ ನೀರು ಇಲ್ಲ ಗುರೂ: ಜನ ಹಿಂಗೆ ಕೇಳ್ತಿದ್ದಾರೆ!
- Lifestyle ಬೇಸಿಗೆಗೆ ಈ 3 ಸೊಪ್ಪಿನ ಚಟ್ನಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು
- Sports GT vs DC: ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ದೊಡ್ಡ ಗೆಲುವು: ಗುಜರಾತ್ಗೆ ತವರಿನಲ್ಲಿ ಸೋಲು
- Automobiles ಸುಜುಕಿ ಹಯಬುಸಾ 25ನೇ ಆನಿವರ್ಸರಿ ಎಡಿಷನ್ ಬಿಡುಗಡೆ: ಬೆಲೆ ಎಷ್ಟು?
- Finance ಇನ್ಮುಂದೆ EMI ಕಟ್ಟೋದು ತಡವಾದ್ರೆ ಚಿಂತಿಸೋಹಾಗಿಲ್ಲ, ಫೈನ್ ಕೂಡ ಕಟ್ಟುವಂತಿಲ್ಲ!
- Technology ಸದ್ಯ ಎಂಟ್ರಿ ಲೆವೆಲ್ನಲ್ಲಿ ಇವೇ ಬೆಸ್ಟ್ ಸ್ಮಾರ್ಟ್ಫೋನ್ಗಳು!..ಫೀಚರ್ಸ್ ಏನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಅನ್ನದಾತನ ಅವತಾರ ಎತ್ತಿದ ಫೈರಿಂಗ್ ಸ್ಟಾರ್ ವೆಂಕಟ್
ಫೈರಿಂಗ್ ಸ್ಟಾರ್ ವೆಂಕಟ್ ಅವರು ಸದ್ಯಕ್ಕೆ ಸಖತ್ ಬ್ಯುಸಿಯಾಗಿರೋ ನಟ ಕಮ್ ಹಾಡುಗಾರ. ಇತ್ತೀಚೆಗೆ ತೆರೆ ಕಾಣುತ್ತಿರುವ ಹಲವರ ಚಿತ್ರಕ್ಕೆ ವೆಂಕಟ್ ಅವರ ಧ್ವನಿಯಲ್ಲಿ ಒಂದಾದರೂ ಹಾಡು ಇದ್ದೇ ಇರುತ್ತದೆ. ಅಷ್ಟರಮಟ್ಟಿಗೆ ವೆಂಕಟ್ ಅವರು ಗಾಂಧಿನಗರದಲ್ಲಿ ಫೇಮಸ್ ಆಗಿದ್ದಾರೆ.
ಇನ್ನು ಎಸ್.ನಾರಾಯಣ್ ಅವರು ಆಕ್ಷನ್-ಕಟ್ ಹೇಳಲಿರುವ ವೆಂಕಟ್ ಅವರ 'ಡಿಕ್ಟೇಟರ್' ಸಿನಿಮಾ ಯಾವಾಗ ಸೆಟ್ಟೇರುತ್ತೆ, ಅದ್ಯಾವಾಗ ಶೂಟಿಂಗ್ ಆರಂಭ ಆಗುತ್ತೆ ಅನ್ನೋದು ಇನ್ನು ಯಾರಿಗೂ ಗೊತ್ತಿಲ್ಲ.[ಪ್ರೀತಿ ಮಾಡೋರಿಗೆ ಬುದ್ಧಿವಾದ ಹೇಳೋಕೆ ಬಂದ ವೆಂಕಟ್]
ಆದರೆ ಅದಕ್ಕಿಂತ ಮುನ್ನ ವೆಂಕಟ್ ಅವರು 'ಅಳಿಲುಗಳ ಅಳಲು' ಎಂಬ ಹೊಸ ಸಿನಿಮಾವೊಂದರಲ್ಲಿ ಇಲ್ಲಿಯವರೆಗೆ ಮಾಡಿರದಂತಹ ವಿಶಿಷ್ಟ ಹಾಗು ಸಣ್ಣ ಪಾತ್ರವೊಂದನ್ನು ನಿರ್ವಹಿಸುತ್ತಿದ್ದಾರೆ. ಅಲ್ಲದೇ ಈ ಚಿತ್ರದ ಹಾಡೊಂದಕ್ಕೆ ತಮ್ಮ ಧ್ವನಿ ಕೂಡ ನೀಡಿದ್ದಾರೆ.[ಪತ್ನಿಯಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ 'ಫೈರಿಂಗ್ ಸ್ಟಾರ್']
ಕಲಾತ್ಮಕತೆಯ ಚಿತ್ರದ ಜೊತೆಗೆ ಮಕ್ಕಳ ಚಿತ್ರವಾಗಿರುವ 'ಅಳಿಲುಗಳ ಅಳಲು' ಬಾಲ ಕಾರ್ಮಿಕ ಪದ್ದತಿ, ಪ್ರಸ್ತುತ ಶಿಕ್ಷಣ ವ್ಯವಸ್ಥೆ ಜೊತೆಗೆ ಹಲವು ವಿಚಾರಗಳ ಬಗ್ಗೆ ಧ್ವನಿ ಎತ್ತಲಿದೆ. ಚಿತ್ರದಲ್ಲಿ ಫೈರಿಂಗ್ ಸ್ಟಾರ್ ವೆಂಕಟ್ ಅವರು ನಮ್ಮ ದೇಶದ ಬೆನ್ನುಲುಬು, ಅನ್ನದಾತ ರೈತನ ಪಾತ್ರ ವಹಿಸಿದ್ದು, ವೃತ್ತಿ ಜೀವನದಲ್ಲಿ ಮೊದಲ ಬಾರಿಗೆ ಇಂತಹ ವಿಶೇಷ ಪಾತ್ರ ವಹಿಸಿದ್ದಾರೆ.[ವೆಂಕಟ್ 'ಡಿಕ್ಟೇಟರ್'ಗೆ ಎಸ್.ನಾರಾಯಣ್ ಆಕ್ಷನ್-ಕಟ್]
ಚಿತ್ರದ ಕಥೆ-ಚಿತ್ರಕಥೆ-ಸಂಭಾಷಣೆಯ ಜೊತೆಗೆ ನಿರ್ದೇಶನವನ್ನು ಗೋವಿಂದು ಮಧುಗಿರಿ ಅವರು ಮಾಡಿದ್ದಾರೆ. ಗ್ರಾಮೀಣ ಪರಿಸರದ ಕಥೆಯನ್ನು ಹೊಂದಿರುವ 'ಅಳಿಲುಗಳ ಅಳಲು' ಚಿತ್ರದಲ್ಲಿ ಮೂರು ಬೀಟ್ ಸಾಂಗ್ ಇದ್ದು, ಅದರಲ್ಲಿ ಒಂದನ್ನು ವೆಂಕಟ್ ಅವರು ಹಾಡಿದ್ದಾರೆ. ಚಿತ್ರಕ್ಕೆ ನಿರ್ಮಾಪಕ ವೇಣುಗೋಪಾಲ್ ಅವರು ಬಂಡವಾಳ ಹೂಡಿದ್ದಾರೆ.