ಖಳನಟ ರವಿಶಂಕರ್ ಅಪೊಲೋ ಆಸ್ಪತ್ರೆಗೆ ದಾಖಲು

ಕೂಡಲೆ ಅವರನ್ನು ಚಿಕಿತ್ಸೆಗಾಗಿ ಸಾಗರ್ ಅಪೊಲೋ ಆಸ್ಪತ್ರೆಗೆ ದಾಖಲಿಸಲಾಯಿತು. ಈ ಚಿತ್ರದಲ್ಲಿ ರವಿಶಂಕರ್ ಅವರು ಖಳನಟನಾಗಿ ಅಭಿನಯಿಸುತ್ತಿದ್ದಾರೆ. ಬೆಂಗಳೂರಿನ ಅಬ್ಬಾಯಿ ನಾಯ್ಡು ಸ್ಟುಡಿಯೋದಲ್ಲಿ ಚಿತ್ರದ ಸಾಹಸ ಸನ್ನಿವೇಶಗಳನ್ನು ಚಿತ್ರೀಕರಿಸಲಾಗುತ್ತಿತ್ತು.
ರವಿಶಂಕರ್ ಅವರು ಹಗ್ಗದ ಮೇಲೆ ಸಾಹಸ ಮಾಡುವ ದೃಶ್ಯವನ್ನು ಸೆರೆಹಿಡಿಯಲಾಗುತ್ತಿತ್ತು. ಈ ಸಂದರ್ಭದಲ್ಲಿ ಅವರು ಆಯತಪ್ಪಿ ಕೆಳಗೆ ಬಿದ್ದಿದ್ದಾರೆ. ಪ್ರಾಣಾಪಾಯದಿಂದ ಪಾರಾಗಿರುವ ಅವರ ಬೆನ್ನಿಗೆ ಬಲವಾದ ಗಾಯವಾಗಿದೆ ಎಂದು ಮೂಲಗಳು ತಿಳಿಸಿವೆ.
ಶಶಾಂಕ್ ನಿರ್ದೇಶಿಸುತ್ತಿರುವ ಈ ಚಿತ್ರದ ತಾರಾಬಳಗದಲ್ಲಿ ಭಾವನಾ, ತುಲಿಪ್ ಜೋಷಿ, ಪಾರುಲ್ ಯಾದವ್, ಆಶಿಶ್ ವಿದ್ಯಾರ್ಥಿ, ಪ್ರದೀಪ್ ರಾವತ್, ಜಗಪತಿ ಬಾಬು ಮುಂತಾದವರಿದ್ದಾರೆ. ಚಿತ್ರದಲ್ಲಿ ಡೈಸಿ ಶಾ ಅವರು ಮಸ್ತ್ ಐಟಂ ಸಾಂಗ್ ಸಹ ಇದೆ.
ಶೇಖರ್ ಚಂದ್ರು ಅವರ ಛಾಯಾಗ್ರಹಣವಿರುವ 'ಬಚ್ಚನ್' ಚಿತ್ರಕ್ಕೆ ವಿ ಹರಿಕೃಷ್ಣ ಅವರ ಸಂಗೀತವಿದೆ. ಕನ್ನಡದಲ್ಲಿ ಖಳನಟನಾಗಿ ಗುರುತಿಸಿಕೊಂಡಿರುವ ರವಿಶಂಕರ್ ಅವರು ಇತ್ತೀಚೆಗೆ ಶಿವ ಚಿತ್ರದಲ್ಲಿ ಅಭಿನಯಿಸಿದ್ದರು.
ದಂಡಂ ದಶಗುಣಂ, ಕೆಂಪೇಗೌಡ, ಕೋಟೆ, ಎದೆಗಾರಿಕೆ, ಟೋಪಿವಾಲ, ಘರ್ಷಣೆ ಮುಂತಾದ ಚಿತ್ರಗಳು ರವಿಶಂಕರ್ ಅಭಿನಯದ ಚಿತ್ರಗಳು. ಕನ್ನಡದ 'ಡಂಡುಪಾಳ್ಯ' (ತೆಲುಗಿನಲ್ಲಿ ದಂಡುಪಾಳ್ಯಂ ಎಂದು ಡಬ್ ಆಗಿದೆ) ಚಿತ್ರದಲ್ಲೂ ಅವರು ಅಭಿನಯಿಸಿದ್ದಾರೆ. (ಏಜೆನ್ಸೀಸ್)


Click it and Unblock the Notifications











