Don't Miss!
- Technology 6000mAh ಬ್ಯಾಟರಿಯ ಈ ಫೋನ್ ಶೀಘ್ರದಲ್ಲೇ ಖರೀದಿಗೆ ಲಭ್ಯ!..ಬೆಲೆ ಎಷ್ಟು?
- Sports ಧೋನಿ ಎದುರು ಬಂದಾಗ ಕೆ.ಎಲ್ ರಾಹುಲ್ ಕ್ಯಾಪ್ ತೆಗೆದಿದ್ದೇಕೆ?: ಕಾರಣವೇನು?
- News Lok Sabha Election 2024: ಮತದಾರರನ್ನು ಆಕರ್ಷಿಸಲು ಚುನಾವಣಾ ಆಯೋಗದ ವಿಭಿನ್ನ ಪ್ರಯತ್ನ
- Automobiles ಸಣ್ಣ ಕುಟುಂಬಗಳಿಗೆ ಬೆಸ್ಟ್ ಕಾರು... 5.36 ಲಕ್ಷ ರೂ. ಬೆಲೆ... 34 ಕಿ.ಮೀ ಮೈಲೇಜ್!
- Lifestyle 2 ಬಗೆಯ ಮಜ್ಜಿಗೆ ಸಾರು ರೆಸಿಪಿ: ಕಾಯಿ ಹಾಕಿದ, ಕಾಯಿ ಹಾಕದ ಸಾರಿನ ರೆಸಿಪಿ
- Finance Bengaluru Rain:ಬಿಸಿಗಾಳಿ ಹೆಚ್ಚಳದಿಂದ ಬೆಂಗಳೂರು ನಗರಕ್ಕೆ ಅಧಿಕ ಮಳೆ, ಐಎಂಡಿ ಹೇಳಿದ್ದೇನು?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಕನ್ನಡದಲ್ಲಿ ಅಧ್ಯಕ್ಷರಾಗಲು ಹೊರಟ ಹಾಸ್ಯ ನಟ ಶರಣ್
ಹಾಸ್ಯ ನಟ ಶರಣ್ ಅವರು ಅಧ್ಯಕ್ಷರಾಗಲು ಹೊರಟಿದ್ದಾರೆ. ಯಾವ ಸಂಘ, ಸಂಸ್ಥೆ ಎಂದಿರಾ? ಅಯ್ಯೋ ಅವರ ಹೊಸ ಚಿತ್ರದ ಹೆಸರೇ 'ಅಧ್ಯಕ್ಷ'. 'ವಿಕ್ಟರಿ' ಚಿತ್ರದ ಯಶಸ್ಸಿನ ಬಳಿಕ ಮತ್ತೆ ಅದೇ ತಂಡ ಮತ್ತೊಂದು ಚಿತ್ರಕ್ಕೆ ರೆಡಿಯಾಗಿರುವುದು ಗೊತ್ತೇ ಇದೆ.
ತಮಿಳಿನ ಯಶಸ್ವಿ ಚಿತ್ರ 'ವರುತಪದತಾ ವಲಿಬಾರ್ ಸಂಘಂ' ಚಿತ್ರದ ರೀಮೇಕ್ ಚಿತ್ರವೇ ಅಧ್ಯಕ್ಷ. ವಿಕ್ಟರಿ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದ ನಂದಕಿಶೋರ್ ಚಿತ್ರದ ನಿರ್ದೇಶಕರು. ಬಿ.ಕೆ.ಗಂಗಾಧರ್ ಹಾಗೂ ಬಿ.ಬಸವರಾಜ್ ನಿರ್ಮಿಸುತ್ತಿರುವ ಚಿತ್ರವಿದು. [ವಿಕ್ಟರಿ ಚಿತ್ರವಿಮರ್ಶೆ]
ಪಾತ್ರವರ್ಗದಲ್ಲಿ ರವಿಶಂಕರ್, ಸಾಧುಕೋಕಿಲ, ಅವಿನಾಶ್, ಕೀರ್ತಿರಾಜ್, ಗಿರಿಜಾಲೋಕೇಶ್ ಸೇರಿದಂತೆ ಹಲವರಿದ್ದಾರೆ. ಮೇಲುಕೋಟೆ, ಶ್ರವಣಬೆಳಗೊಳ, ಮೈಸೂರಿನಲ್ಲಿ ಚಿತ್ರೀಕರಣ ನಡೆಯಲಿದೆ. ತಮಿಳಿನ 'ವಲಿಬಾರ್ ಸಂಘಂ' ಚಿತ್ರವನ್ನು ರು.7 ಕೋಟಿ ಬಜೆಟ್ ನಲ್ಲಿ ನಿರ್ಮಿಸಲಾಗಿತ್ತು. ಬಾಕ್ಸ್ ಆಫೀಸಲ್ಲಿ ಈ ಚಿತ್ರ ಸುಮಾರು ರು.30 ಕೋಟಿ ಕಲೆಕ್ಷನ್ ಮಾಡಿತ್ತು.
ಈಗ ಅದೇ ರೀತಿಯ ನಿರೀಕ್ಷೆಗಳು ಕನ್ನಡದ 'ಅಧ್ಯಕ್ಷ'ನ ಮೇಲಿವೆ. ಕಡಿಮೆ ಬಜೆಟ್ ನಲ್ಲಿ ಭರ್ಜರಿ ಫಸಲು ತೆಗೆಯುವ ನಿರೀಕ್ಷೆಯಲ್ಲಿ ಚಿತ್ರತಂಡವಿದೆ. ಈಗಾಗಲೆ ಶರಣ್ ಪೂರ್ಣಪ್ರಮಾಣದ ನಾಯಕನಾಗಿ 'ರ್ಯಾಂಬೋ' ಹಾಗೂ 'ವಿಕ್ಟರಿ' ಮೂಲಕ ಗೆದ್ದಿದ್ದಾರೆ. ಈಗ ಹ್ಯಾಟ್ರಿಕ್ ಹೊಡೆಯುವ ತವಕ ಅವರದು. ಚಿತ್ರಕ್ಕೆ ನಾಯಕಿಯ ಆಯ್ಕೆ ನಡೆಯುತ್ತಿದೆ. (ಏಜೆನ್ಸೀಸ್)