Don't Miss!
- Technology ಈ ಹೊಸ 5G ಫೋನ್ ಖರೀದಿಸಿದರೆ, ವಿವೋ ಕಂಪನಿಯ ಇಯರ್ಫೋನ್ ಉಚಿತ!
- Automobiles ನಟಿ ಶಿಲ್ಪಾ ಶೆಟ್ಟಿಗೆ ಮತ್ತೊಂದು ಸಮಸ್ಯೆ ತಂದಿಟ್ಟ ಪತಿ: ಐಷಾರಾಮಿ ಕಾರುಗಳು ಸೀಜ್!
- News Bengaluru: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಕೆಜಿಗಟ್ಟಲೆ ಚಿನ್ನ, ವಜ್ರ ಮತ್ತು ಹಣ ಪತ್ತೆ
- Lifestyle ವೋಟರ್ ಐಡಿ ಇಲ್ಲದೆಯೂ ಮತ ಚಲಾಯಿಸಬಹುದು.! ಹೇಗೆ ಗೊತ್ತಾ?
- Sports 2025ರ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸಲಿದೆಯೇ?; ಬಿಸಿಸಿಐ ಹೇಳಿದ್ದೇನು?
- Finance ಬೆಂಗಳೂರಿನಲ್ಲಿ ಈ ಮೂರು ದಿನಗಳ ಕಾಲ ಮದ್ಯ ಮಾರಾಟ ನಿಷೇಧ, ದಿನಾಂಕ, ಸಮಯ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಪಾವಗಡದ ಶನೈಶ್ಚರ ದೇಗುಲದಲ್ಲಿ ತೆಲುಗು ನಟ ಶ್ರೀಕಾಂತ್
ಕರ್ನಾಟಕ ಮೂಲದ ಬಹುಭಾಷಾ ನಟ ಶ್ರೀಕಾಂತ್ ಅವರು ಇತ್ತೀಚೆಗೆ ತುಮಕೂರು ಜಿಲ್ಲೆ ಪಾವಗಡ ಶನೈಶ್ಚರ ದೇಗುಲಕ್ಕೆ ಭೇಟಿ ನೀಡಿ ಹರಕೆ ತೀರಿಸಿಕೊಂಡಿದ್ದಾರೆ.
ಕರ್ನಾಟಕ ಮೂಲದ ಬಹುಭಾಷಾ ನಟ ಶ್ರೀಕಾಂತ್ ಅವರು ಇತ್ತೀಚೆಗೆ ತುಮಕೂರು ಜಿಲ್ಲೆ ಪಾವಗಡ ಶನೈಶ್ಚರ ದೇಗುಲಕ್ಕೆ ಭೇಟಿ ನೀಡಿ ಹರಕೆ ತೀರಿಸಿಕೊಂಡಿದ್ದಾರೆ. ಕನ್ನಡ ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕರೆ ಮಿಸ್ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದರು.
ತುಮಕೂರಿನಲ್ಲಿರುವ ಗೆಳೆಯರ ಮನೆಗೆ ಆಗಮಿಸಿದ ಶ್ರೀಕಾಂತ್ ಅವರು ನಂತರ ತುಮಕೂರು ಜಿಲ್ಲೆ ಪಾವಗಡ ಪಟ್ಟಣದ ಐತಿಹಾಸಿಕ ಶನಿ ಮಹಾತ್ಮ ದೇವಸ್ಥಾನಕ್ಕೆ ಭೇಟಿ ನೀಡಿದರು. ಶನಿ ದೋಷ ನಿವಾರಣೆಗಾಗಿ ನವಗ್ರಹ ಹೋಮ ಮಾಡಿಸಿದರು.
ಕರ್ನಾಟದ ಗಂಗಾವತಿ ಮೂಲದವರಾದ ಶ್ರೀಕಾಂತ್ ಅವರು ಕನ್ನಡದಲ್ಲಿ ಈ ಹಿಂದೆ ರವಿಚಂದ್ರನ್ ಜತೆ ಒಂದು ಚಿತ್ರದಲ್ಲಿ ನಟಿಸಿದ್ದರು. ಮಿಕ್ಕಂತೆ ತೆಲುಗು ಚಿತ್ರರಂಗದಲ್ಲಿ ಚಿರಂಜೀವಿ ಸೇರಿದಂತೆ ಎಲ್ಲಾ ಟಾಪ್ ನಟರ ಜತೆ ನಟಿಸಿದ್ದಾರೆ.
ಸರೈನೋಡು, ಟೆರರ್, ಗೋವಿಂದು ಅಂದರಿವಾಡೆಲಿ, ಶ್ರೀ ರಾಮ ರಾಜ್ಯಂ ಇತ್ತೀಚಿನ ಅವರ ಯಶಸ್ವಿ ಚಿತ್ರಗಳು.
500
ವರ್ಷಗಳ
ಇತಿಹಾಸ
ಹೊಂದಿರುವ
ಪಾವಗಡದ
ಶನೈಶ್ಚರ
ದೇಗುಲದಲ್ಲಿ
50ರ
ದಶಕದಲ್ಲಿ
ಶನಿಮಹಾತ್ಮನ
ವಿಗ್ರಹದ
ಮರು
ಪ್ರತಿಷ್ಟಾಪನೆಯಾಯಿತು.
ನಂತರ
ನವಗ್ರಹಗಳ
ಪ್ರತಿಷ್ಟಾಪನೆ.
ಗಣಪತಿ,
ಲಕ್ಷ್ಮಿ
ಹಾಗೂ
ಶ್ರೀ
ಸತ್ಯನಾರಾಯಣ
ಸ್ವಾಮಿಯ
ಪುಟ್ಟ
ದೇಗುಲಗಳು
ದೇವಾಲಯದ
ಪ್ರಾಂಗಣದಲ್ಲೇ
ನಿರ್ಮಿಸಲಾಯಿತು.
ಕರ್ನಾಟಕ ಮಾತ್ರವಲ್ಲದೆ ಪಕ್ಕದ ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ದೇಶದ ಎಲ್ಲೆಡೆಯಿಂದ ಈ ದೇಗುಲಕ್ಕೆ ಭಕ್ತಾದಿಗಳು ಬಂದು ಹರಕೆ, ಶನಿ ಪ್ರದೋಷ, ನವಗ್ರಹ ಯಾಗ ಮುಂತಾದ ವಿಶೇಷ ಪೂಜೆಗಳನ್ನು ನಡೆಸುತ್ತಾರೆ ಎಂದು ಸ್ಥಳೀಯರಾದ ಧರ್ಮಪಾಲ್ ಹೇಳಿದ್ದಾರೆ.