Don't Miss!
- Automobiles Bullet Train: ಭಾರತದಲ್ಲಿ ಮೊದಲ ಬಾರಿಗೆ ನವೀನ ರೀತಿಯ ಹಳಿ ಬಳಕೆ.. 320 ಕಿ.ಮೀ ವೇಗದಲ್ಲಿ ಓಡುತ್ತೆ ರೈಲು!
- Lifestyle ಬಾಯಲ್ಲಿ ನೀರು ತರಿಸುವ ಮಾವಿನ ಕಾಯಿ ಚಟ್ನಿ..! 5 ನಿಮಿಷದಲ್ಲಿ ರೆಡಿ..!
- Technology Motorola: ಮೊಟೊರೊಲಾ ಎಡ್ಜ್ 50 ಅಲ್ಟ್ರಾ ಸ್ಮಾರ್ಟ್ಫೋನ್ ಫೀಚರ್ಸ್ ಲೀಕ್! ವಿಶೇಷತೆ ಏನು?
- News RBI: ಬ್ಯಾಂಕ್ ಕೆಲಸ ಮುಗಿದಿಲ್ವಾ? ಭಯ ಬೇಡ ಮಾರ್ಚ್ 30, 31ಕ್ಕೂ ಓಪನ್ ಇರುತ್ತೆ ಆರ್ಬಿಐ ಕಚೇರಿಗಳು!
- Finance ಮೊದಲ ಬಾರಿಗೆ ಅಂಬಾನಿ ಅದಾನಿ ಸೇರಿ ವ್ಯಾಪಾರ ಒಪ್ಪಂದ, ಇಲ್ಲಿದೆ ಒಪ್ಪಂದ ವಿವರ
- Sports IPL 2024: ವಿರಾಟ್ ಕೊಹ್ಲಿ ಕೆಕೆಆರ್ ಡಗೌಟ್ ನೋಡಿದ್ರೆ ಉರಿದು ಬೀಳ್ತಾರೆ; ಆರ್ಸಿಬಿ ಮಾಜಿ ಕ್ರಿಕೆಟಿಗ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ನಯನತಾರಾಗೆ ಬೆವರಿಳಿಸಿದ ಕಸ್ಟಮ್ ಅಧಿಕಾರಿಗಳು
ನಟಿ ನಯನತಾರಾಗೆ ಕಸ್ಟಮ್ ಅಧಿಕಾರಿಗಳು ಬೆವರಿಳಿಸಿದ ಘಟನೆ ಚೆನ್ನೈ ಏರ್ಪೋರ್ಟ್ನಲ್ಲಿ ನಡೆದಿದೆ. ಆಕೆಗೆ ಬೆವರಲು ಚೆನ್ನೈ ತಾಪಮಾನ (36° C) ಸುತಾರಾಂ ಕಾರಣವಲ್ಲ ಎನ್ನಲಾಗಿದೆ. ಬ್ಯಾಂಕಾಕ್ನಿಂದ ನಟಿ ನಯನತಾರಾ ತಮ್ಮ ಮ್ಯಾನೇಜರ್ ಹಾಗೂ ಮೇಕಪ್ ಮ್ಯಾನ್ ಜೊತೆ ಚೆನ್ನೈಗೆ ಹಿಂತಿರುಗುತ್ತಿದ್ದರು.
ಇವರು ಮೂವರು ಚೆನ್ನೈಗೆ ಬಂದಿಳಿಯುತ್ತಿದ್ದಂತೆ ಮೂವರನ್ನೂ ಪ್ರತ್ಯೇಕವಾಗಿ ವಿಚಾರಣೆ ಮಾಡಿ ಬಳಿಕ ಮನೆಗೆ ಕಳುಹಿಸಿದ್ದಾರೆ. ನಯನತಾರಾ ಅವರನ್ನು ಕಸ್ಟಮ್ ಅಧಿಕಾರಿಗಳಿಗೆ 45 ನಿಮಿಷಗಳಿಗೂ ಅಧಿಕ ಕಾಲ ವಿಚಾರಣೆ ಮಾಡಿದ್ದಾರೆ. ಆದರೆ ಅವರಿಗೆ ತೆರಿಗೆ ಕಟ್ಟದೆ ಇರುವಂತಹ ವಸ್ತುಗಳೇನು ಸಿಕ್ಕಿಲ್ಲ. ಅದೆಲ್ಲಾ ಸರಿ ಇಷ್ಟಕ್ಕೂ ನಯನತಾರಾ ಬ್ಯಾಂಕಾಂಕ್ಗೆ ಹೋಗಲು ಕಾರಣ ಏನು ಎಂಬ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.
ಮೂಲಗಳ ಪ್ರಕಾರ ನಯನತಾರಾ ತಮ್ಮ ಮಾಜಿ ಪ್ರಿಯತಮ ಪ್ರಭುದೇವ ಅವರ ಹಚ್ಚೆಯನ್ನು ಕೈಮೇಲೆ ಹಾಕಿಸಿಕೊಂಡಿದ್ದರು. ಅದನ್ನು ತೆಗೆಸುವ ಸಲುವಾಗಿ ಅವರು ಬ್ಯಾಂಕಾಕ್ಗೆ ಹೋಗಿದ್ದರು ಎನ್ನಲಾಗಿದೆ. ಬ್ಯಾಂಕಾಕ್ನಿಂದ ಮರಳುತ್ತಿರುವ ನಯನತಾರಾ ಬಗ್ಗೆ ಯಾರೋ ರಾಂಗ್ ಇನ್ಫರ್ಮೇಷನ್ ಕೊಟ್ಟಿದ್ದಾಗಿಯೂ ಸುದ್ದಿ ಇದೆ. (ಏಜೆನ್ಸೀಸ್)