ನಯನತಾರಾಗೆ ಬೆವರಿಳಿಸಿದ ಕಸ್ಟಮ್ ಅಧಿಕಾರಿಗಳು
ನಟಿ ನಯನತಾರಾಗೆ ಕಸ್ಟಮ್ ಅಧಿಕಾರಿಗಳು ಬೆವರಿಳಿಸಿದ ಘಟನೆ ಚೆನ್ನೈ ಏರ್ಪೋರ್ಟ್ನಲ್ಲಿ ನಡೆದಿದೆ. ಆಕೆಗೆ ಬೆವರಲು ಚೆನ್ನೈ ತಾಪಮಾನ (36° C) ಸುತಾರಾಂ ಕಾರಣವಲ್ಲ ಎನ್ನಲಾಗಿದೆ. ಬ್ಯಾಂಕಾಕ್ನಿಂದ ನಟಿ ನಯನತಾರಾ ತಮ್ಮ ಮ್ಯಾನೇಜರ್ ಹಾಗೂ ಮೇಕಪ್ ಮ್ಯಾನ್ ಜೊತೆ ಚೆನ್ನೈಗೆ ಹಿಂತಿರುಗುತ್ತಿದ್ದರು.
ಇವರು ಮೂವರು ಚೆನ್ನೈಗೆ ಬಂದಿಳಿಯುತ್ತಿದ್ದಂತೆ ಮೂವರನ್ನೂ ಪ್ರತ್ಯೇಕವಾಗಿ ವಿಚಾರಣೆ ಮಾಡಿ ಬಳಿಕ ಮನೆಗೆ ಕಳುಹಿಸಿದ್ದಾರೆ. ನಯನತಾರಾ ಅವರನ್ನು ಕಸ್ಟಮ್ ಅಧಿಕಾರಿಗಳಿಗೆ 45 ನಿಮಿಷಗಳಿಗೂ ಅಧಿಕ ಕಾಲ ವಿಚಾರಣೆ ಮಾಡಿದ್ದಾರೆ. ಆದರೆ ಅವರಿಗೆ ತೆರಿಗೆ ಕಟ್ಟದೆ ಇರುವಂತಹ ವಸ್ತುಗಳೇನು ಸಿಕ್ಕಿಲ್ಲ. ಅದೆಲ್ಲಾ ಸರಿ ಇಷ್ಟಕ್ಕೂ ನಯನತಾರಾ ಬ್ಯಾಂಕಾಂಕ್ಗೆ ಹೋಗಲು ಕಾರಣ ಏನು ಎಂಬ ಬಗ್ಗೆ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.
ಮೂಲಗಳ ಪ್ರಕಾರ ನಯನತಾರಾ ತಮ್ಮ ಮಾಜಿ ಪ್ರಿಯತಮ ಪ್ರಭುದೇವ ಅವರ ಹಚ್ಚೆಯನ್ನು ಕೈಮೇಲೆ ಹಾಕಿಸಿಕೊಂಡಿದ್ದರು. ಅದನ್ನು ತೆಗೆಸುವ ಸಲುವಾಗಿ ಅವರು ಬ್ಯಾಂಕಾಕ್ಗೆ ಹೋಗಿದ್ದರು ಎನ್ನಲಾಗಿದೆ. ಬ್ಯಾಂಕಾಕ್ನಿಂದ ಮರಳುತ್ತಿರುವ ನಯನತಾರಾ ಬಗ್ಗೆ ಯಾರೋ ರಾಂಗ್ ಇನ್ಫರ್ಮೇಷನ್ ಕೊಟ್ಟಿದ್ದಾಗಿಯೂ ಸುದ್ದಿ ಇದೆ. (ಏಜೆನ್ಸೀಸ್)


Click it and Unblock the Notifications











