Don't Miss!
- Sports 2024ರ ಟಿ20 ವಿಶ್ವಕಪ್ ರಾಯಭಾರಿಯಾಗಿ ಒಲಿಂಪಿಕ್ ಐಕಾನ್ ಉಸೇನ್ ಬೋಲ್ಟ್ ನೇಮಕ
- Automobiles Honda: ಹೊಸ ಮೈಲಿಗಲ್ಲು: ಈ ಭಾಗಗಳಲ್ಲಿ ಹೋಂಡಾ ದ್ವಿಚಕ್ರ ವಾಹನಗಳ ಅಬ್ಬರ
- Finance ಒಂದೇ ವರ್ಷದಲ್ಲಿ 210 ಕೋಟಿ ರೂ. ಆದಾಯ ಗಳಿಸಿದ ಭಾರತದಲ್ಲಿನ ಆಪಲ್ ಸ್ಟೋರ್ಗಳು
- News Subrahmanya Dhareshwara: ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ವಿಧಿವಶ
- Technology ರೆಡ್ಮಿ ಸಂಸ್ಥೆಯ ಈ ಅಗ್ಗದ ಫೋನಿನ ಆಫರ್ ಬೆಲೆ ತಿಳಿದ್ರೆ, ನೀವು ವಾವ್ ಅಂತೀರಾ!
- Lifestyle ಮಲೆನಾಡ ಶೈಲಿನ ಮೃದುವಾದ ಕಡುಬು ಮಾಡೋದು ಹೇಗೆ.? ಸಿಂಪಲ್ ತಿಂಡಿ ರೆಸಿಪಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
"ನಾವು ಭಾರತೀಯರು ಎನ್ನುವುದಕ್ಕು ಮುನ್ನ ಕನ್ನಡಿಗರು, ನಮಗೆ ಪ್ರತ್ಯೇಕ ಬಾವುಟ ಇದೆ": ರಮ್ಯಾ
'RRR' ಚಿತ್ರಕ್ಕೆ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಿಕ್ಕಿದ್ದಕ್ಕೆ ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಟ್ವೀಟ್ ಮಾಡಿ ಅಭಿನಂದಿಸಿದ್ದರು. "ತೆಲುಗು ಬಾವುಟ ಎತ್ತರದಲ್ಲಿ ಹಾರಾಡುತ್ತಿದೆ" ಎಂದು ಬರೆದುಕೊಂಡಿದ್ದರು. ಇದಕ್ಕೆ ಗಾಯಕ ಅದ್ನಾನ್ ಸಾಮಿ ಚಕಾರ ಎತ್ತಿದ್ದರು. "ತೆಲುಗು ಬಾವುಟ ಎನ್ನಬೇಡಿ, ನಾವೆಲ್ಲಾ ಭಾರತೀಯರು, ವಿಭಜಿಸಿ ಮಾತನಾಡಬೇಡಿ" ಎಂದು ಪಾಠ ಮಾಡಿದ್ದರು. ಅದ್ನಾನ್ ಸಾಮಿ ಹೇಳಿಕೆಗೆ ನಟಿ ರಮ್ಯಾ ಈಗ ತಿರುಗೇಟು ನೀಡಿದ್ದಾರೆ.
"ಹೌದು, ನಾವು ಭಾರತೀಯರು, ಆದರೆ ನಾವು ಕನ್ನಡಿಗರು, ತಮಿಳರು, ತೆಲುಗರು, ಬೆಂಗಾಲಿಗರು ಆಗಿದ್ದೇವೆ" ಎಂದು ರಮ್ಯಾ ಟ್ವೀಟ್ ಮಾಡಿದ್ದಾರೆ. ಅಷ್ಟಕ್ಕೂ ಏನಿದು ಚರ್ಚೆ ಎನ್ನುವುದನ್ನು ನೋಡುವುದಾದರೆ, ನಿನ್ನೆಯಷ್ಟೆ ರಾಜಮೌಳಿ ನಿರ್ದೇಶನದ 'RRR' ಚಿತ್ರದ 'ನಾಟು ನಾಟು' ಹಾಡಿಗೆ ಪ್ರತಿಷ್ಠಿತ ಗೋಲ್ಡನ್ ಗ್ಲೋಬ್ ಪ್ರಶಸ್ತಿ ಸಿಕ್ಕಿತ್ತು. ಪ್ರಧಾನಿ ಮೋದಿ ಸೇರಿದಂತೆ ಗಣ್ಯರು, ಸಿನಿರಸಿಕರು, ನೆಟ್ಟಿಗರು ಸೋಶಿಯಲ್ ಮೀಡಿಯಾದಲ್ಲಿ ತಂಡಕ್ಕೆ ಅಭಿನಂದನೆ ತಿಳಿಸಿದ್ದರು. ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಟ್ವೀಟ್ ಮಾಡಿ, "ತೆಲುಗು ಬಾವುಟ ಎತ್ತರದಲ್ಲಿ ಹಾರಾಡುತ್ತಿದೆ. ಆಂಧ್ರ ಪ್ರದೇಶ ಪರವಾಗಿ ಎಂ.ಎಂ ಕೀರವಾಣಿ, ರಾಜಮೌಳಿ, ತಾರಕ್, ಚರಣ್ ಹಾಗೂ ಇಡೀ 'RRR' ತಂಡಕ್ಕೆ ಅಭಿನಂದನೆ. ನಿಮ್ಮ ಬಗ್ಗೆ ಹೆಮ್ಮೆ ಇದೆ" ಎಂದಿದ್ದರು.
Yes, we are are Indians but we are also Kannadigas, Tamils, Telugu, Bengali etc we all have our ‘flags’ just like we have our own language. We feel proud as Indians & also as people rooted by culture, language, flag. Unity in diversity ring a bell? https://t.co/8NbZPDiW3A
— Ramya/Divya Spandana (@divyaspandana) January 12, 2023
ನಂಬರ್ 1 ನಟನೆಂಬ ಅಹಂ ಬಿಡಿ ಎಂದ ರಮ್ಯಾ: ರಶ್ಮಿಕಾನೇ ಮೇಲು ಎಂದ ಡಿ ಬಾಸ್ ಫ್ಯಾನ್ಸ್!
ಸಿಎಂ ಜಗನ್ ಟ್ಟೀಟ್ನ ರೀಟ್ವೀಟ್ ಮಾಡಿ, ಗಾಯಕ ಅದ್ನಾನ್ ಸಾಮಿ ಒಂದು ಪೋಸ್ಟ್ ಮಾಡಿದ್ದರು. "ತೆಲುಗು ಬಾವುಟನಾ? ನೀವು ಹೇಳುತ್ತಿರುವುದು ಭಾರತದ ಬಾವುಟ ಅಲ್ಲವೇ? ಪ್ರಪಂಚದ ವಿಷಯಕ್ಕೆ ಬಂದರೆ ನಾವೆಲ್ಲಾ ಒಂದೇ ದೇಶ. ಮೊದಲು ನಾವು ಭಾರತೀಯರು. ದಯವಿಟ್ಟು ನೀವು ಭಾರತ ಬಿಟ್ಟು ಬೇರೆ ಇರಲು ಪ್ರಯತ್ನಿಸಬೇಡಿ, ನಾವು 1947ರಲ್ಲಿ ನೋಡಿದ ವಿಭಜನೆ ವಾದ ಒಳ್ಳೆದಲ್ಲ, ಧನ್ಯವಾದಗಳು. ಜೈ ಹಿಂದ್" ಎಂದು ಬರೆದುಕೊಂಡಿದ್ದರು. ಅದ್ನಾನ್ ಸಾಮಿ ಪೋಸ್ಟ್ ಬಗ್ಗೆ ಪರ ವಿರೋಧ ಚರ್ಚೆ ನಡೆದಿತ್ತು.
ಇದೀಗ ಅದ್ನಾನ್ ಸಾಮಿ ಟ್ವೀಟ್ಗೆ ನಟಿ ರಮ್ಯಾ ತಿರುಗೇಟು ನೀಡಿದ್ದಾರೆ. "ಹೌದು, ನಾವು ಭಾರತೀಯರು, ಆದರೆ ನಾವು ಕನ್ನಡಿಗರು, ತಮಿಳರು, ತೆಲುಗರು, ಬೆಂಗಾಲಿಗರು ಮುಂತಾದವರು ಆಗಿದ್ದೇವೆ. ನಮ್ಮದೇ ಆದ ಭಾಷೆಯನ್ನು ಹೊಂದಿರುವಂತೆಯೇ ನಾವೆಲ್ಲರೂ ನಮ್ಮ 'ಧ್ವಜ'ಗಳನ್ನು ಹೊಂದಿದ್ದೇವೆ. ನಾವು ಭಾರತೀಯರಾಗಿ ಮತ್ತು ಅದರ ಜೊತೆಗೆ ವಿವಿಧ ಸಂಸ್ಕೃತಿ, ಭಾಷೆ, ಧ್ವಜದಿಂದ ಬೇರೂರಿರುವ ಜನರು ಎಂದು ಹೆಮ್ಮೆಪಡುತ್ತೇವೆ. ವಿವಿಧತೆಯಲ್ಲಿ ಏಕತೆ ಬಹಳ ಮುಖ್ಯ" ಎಂದಿದ್ದಾರೆ. ನಟಿ ರಮ್ಯಾ ಟ್ವೀಟ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ.