Don't Miss!
- News ಮೈಸೂರು: ಪ್ರಧಾನಿ ಮೋದಿ ಕುರಿತಾದ ಹಾಡು ಶೇರ್ ಮಾಡಿ ಎಂದಿದ್ದಕ್ಕೆ ಯುವಕನ ಮೇಲೆ ಹಲ್ಲೆ
- Lifestyle ಲಿವರ್ ಸಮಸ್ಯೆಯಿದೆ ಎಂದು ಸೂಚಿಸುವ ಲಕ್ಷಣಗಳಿವು, ಕುಟುಂಬಸ್ಥರು ಲಿವರ್ ದಾನ ಮಾಡಿದರೆ ವ್ಯಕ್ತಿಯ ಪ್ರಾಣ ಉಳಿಸಬಹುದು
- Sports LSG vs CSK IPL 2024: ಮತ್ತೊಮ್ಮೆ ಧೋನಿ, ಜಡೇಜಾ ಅಬ್ಬರ; ಲಕ್ನೋ ತಂಡಕ್ಕೆ ಸವಾಲಿನ ಗುರಿ ನೀಡಿದ ಸಿಎಸ್ಕೆ
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಮೆಜೆಸ್ಟಿಕ್ ನಲ್ಲಿ ಡರ್ಟಿ ಪಿಕ್ಚರ್ ಶೂಟಿಂಗ್ ಕ್ಯಾನ್ಸಲ್
ಬೆಂಗಳೂರು ಜನನಿಬಿಡ ಪ್ರದೇಶ ಮೆಜೆಸ್ಟಿಕ್ ನಲ್ಲಿ ಪಾಕಿಸ್ತಾನದ ಸೆಕ್ಸ್ ಬಾಂಬ್ ವೀಣಾ ಮಲಿಕ್ ಬಂದಿಳಿದಾಗ ನಾ ಮುಂದು ತಾ ಮುಂದು ಎಂದು ಜನ ಆಕೆಯನ್ನು ನೋಡಲು ಮುಗಿಬಿದ್ದರು. ಈ ಅಪರೂಪದ ದೃಶ್ಯಗಳು ಕ್ಯಾಮೆರಾ ಕಣ್ಣಲ್ಲಿ ಬಂಧಿಯಾದ ಸನ್ನಿವೇಶವನ್ನು ನೀವಿಲ್ಲಿ ಕಾಣಬಹುದು.
ಸುಮಾರು 20,000ಕ್ಕೂ ಅಧಿಕ ಮಂದಿ ಜಮಾಯಿಸಿದ ಕಾರಣ ಕನ್ನಡದ 'ಡರ್ಟಿ ಪಿಕ್ಚರ್: ಸಿಲ್ಕ್ ಸಖತ್ ಹಾಟ್ ಮಗಾ' ಶೂಟಿಂಗ್ ಕ್ಯಾನ್ಸಲ್ ಆಯಿತು. ಆದರೂ ವೀಣಾ ತಮ್ಮ ಅಭಿಮಾನಿಗಳಿಗೆ ನಿರಾಸೆ ಮಾಡದೆ ಧಾರಾಳವಾಗಿ ಹಸ್ತಾಕ್ಷರ ನೀಡಿದರು. ಬಿಂಕ ಬಿಟ್ಟು ಅವರ ಜೊತೆ ಫೋಟೋಗಿಳಿದರು.
ಅಭಿಮಾನಿಗಳನ್ನು ನಿಭಾಯಿಸಲು ಸಾಧ್ಯವಾಗದೆ ಕಡೆಗೆ ನಿರ್ಮಾಪಕರು ಪೊಲೀಸರ ಮೊರೆಹೋಗಬೇಕಾಯಿತು. ವೀಣಾರನ್ನು ಅಭಿಮಾನಿಗಳು ಮುತ್ತಿಗೆ ಹಾಕುತ್ತಿರುವುದು ಇದು ಎರಡನೇ ಸಲ. ಈ ಹಿಂದೆ ಆಸ್ಟ್ರೇಲಿಯಾದ ಫಿಜಿಯಲ್ಲೂ ಹೀಗೇ ಆಗಿತ್ತು. ವೀಣಾ ಪಾಲಿಗೆ ಅದು ಮೆಜೆಸ್ಟಿಕ್ ಆದರೂ ಒಂದೇ ಮಲೇಷಿಯಾ ಆದರೂ ಒಂದೇ ಎಂಬುದು ಸಾಬೀತಾಗಿದೆ.
ಕೇವಲ ಅರ್ಧ ಗಂಟೆ ಕಾಲ ಮಾತ್ರ ನಡೆದ ಚಿತ್ರೀಕರಣದಿಂದ ಮೆಜೆಸ್ಟಿಕ್ ಪ್ರದೇಶದಲ್ಲಿ ಸಂಚಾರ ಅಸ್ತವ್ಯಸ್ತವಾಯಿತು. ಜನರ ನೂಕು ನುಗ್ಗಲು ಹೆಚ್ಚಾದ ಕಾರಣ ಅವರನ್ನು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರವನ್ನೂ ಮಾಡಬೇಕಾಯಿತು. ಒಂದು ಸಣ್ಣ ಸನ್ನಿವೇಶದ ಚಿತ್ರೀಕರಣಕ್ಕಾಗಿ ವೀಣಾ ಮೆಜೆಸ್ಟಿಕ್ ಗೆ ಬಂದಿದ್ದರು.
ಸಿಲ್ಕ್ ಸ್ಮಿತಾ ಜೀವನ ಕತೆಯಾಧಾರಿತ ಚಿತ್ರ ಇದಾಗಿದೆ. ಆಕ್ಷನ್ ಕಟ್ ಹೇಳುತ್ತಿರುವವರು ತ್ರಿಶೂಲ್. ತೆಳ್ಳಗೆ ಬಳುಕುವ ಬಳ್ಳಿಯಂತಿದ್ದ ವೀಣಾ ತಮ್ಮ ಪಾತ್ರಕ್ಕಾಗಿ ಕೊಂಚ ಮೈಕೈ ತುಂಬಿಕೊಂಡಿದ್ದಾರೆ. ತಮ್ಮ ದೇಹದ ತೂಕವನ್ನು 5 ಕೆ.ಜಿ ಹೆಚ್ಚಿಸಿಕೊಂಡು ದುಂಡಗೆ ಗುಂಡಗೆ ಕಾಣಿಸಲಿದ್ದಾರೆ. ಚಿತ್ರದಲ್ಲಿ ತಮ್ಮದು ವೇಶ್ಯೆಯ ಪಾತ್ರವಲ್ಲ ಎಂದು ಆಕೆ ಸ್ಪಷ್ಟಪಡಿಸಿದ್ದಾರೆ.
ಈ ಭಾರಿ ಬಜೆಟ್ ಚಿತ್ರವನ್ನು ನಿರ್ಮಿಸುತ್ತಿರುವವರು ವೆಂಕಟಪ್ಪ. ಈ ಚಿತ್ರಕ್ಕಾಗಿ ವೀಣಾರಿಗೆ ರು.70ರಿಂದ 80 ಲಕ್ಷ ಸಂಭಾವನೆ ಸಂದಾಯವಾಗಿದೆಯಂತೆ. ಅಂದರೆ ನಮ್ಮ ರಮ್ಯಾ, ರಾಗಿಣಿಯರ ಎರಡೂವರೆ ಪಟ್ಟು ಜಾಸ್ತಿ. ಇಷ್ಟೆಲ್ಲಾ ಸಂಭಾವನೆ ಕೊಟ್ಟರೂ ವರ್ಕ್ಔಟ್ ಆಗುತ್ತಾ ಎಂದರೆ ಚಿತ್ರದ ನಿರ್ಮಾಪಕರು ಖಂಡಿತ ಎಂದು ತಲೆತೂಗುತ್ತಾರೆ. ಹಾಕಿದ ದುಡ್ಡು ಬಂದೇ ಬರುತ್ತದೆ ಎಂಬ ವಿಶ್ವಾಸದಲ್ಲಿ ಅವರದು. (ಒನ್ ಇಂಡಿಯಾ ಕನ್ನಡ)