Just In
- 5 hrs ago
ಹರ ಜಾತ್ರೆಯಲ್ಲಿ ಪುನೀತ್ ರಾಜ್ ಕುಮಾರ್; ಅಪ್ಪು ಹಾಡು ಕೇಳಿ ಸಂಭ್ರಮಿಸಿದ ಅಭಿಮಾನಿಗಳು
- 6 hrs ago
Bigg Boss Tamil 4: ಅತಿ ಹೆಚ್ಚು ಸಂಭಾವನೆ ಪಡೆದ ಸ್ಪರ್ಧಿಯೇ ವಿಜೇತ!
- 6 hrs ago
ಫೋಟೋಗಳು: ರಮೇಶ್ ಅರವಿಂದ್ ಮಗಳ ಮದುವೆ ಆರತಕ್ಷತೆಯಲ್ಲಿ ಸಿನಿ ತಾರೆಯರು; ಯಶ್, ಸುದೀಪ್ ಸಖತ್ ಡ್ಯಾನ್ಸ್
- 8 hrs ago
ಶಿವಮೊಗ್ಗದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್: 'ಬೆಸ್ಟ್ ವೀಕೆಂಡ್ ಎವರ್' ಎಂದ ನಟಿ
Don't Miss!
- Finance
Flipkart Big Saving Days: ಆಪಲ್, ಸ್ಯಾಮ್ಸಂಗ್ ಸೇರಿ ಹಲವು ಬ್ರ್ಯಾಂಡ್ ಗಳ ಆಫರ್
- News
ರೈತರು 2024ರವರೆಗೂ ಪ್ರತಿಭಟನೆ ನಡೆಸಲು ಸಿದ್ಧರಿದ್ದಾರೆ:ಭಾರತೀಯ ಕಿಸಾನ್ ಯೂನಿಯನ್
- Sports
ಐಎಸ್ಎಲ್: ಜೆಮ್ಷೆಡ್ಪುರಕ್ಕೆ ಆಘಾತ ನೀಡಿದ ನಾರ್ಥ್ಈಸ್ಟ್
- Automobiles
ಅನಾವರಣವಾಯ್ತು 2021ರ ಎಪ್ರಿಲಿಯಾ ಆರ್ಎಸ್ವಿ4 ಬೈಕುಗಳು
- Lifestyle
ಸಂಜೆ ಸ್ನ್ಯಾಕ್ಸ್ ಗೆ ಹೇಳಿಮಾಡಿಸಿದ್ದು ಈ ತಡ್ಕಾ ಮಸಾಲೆ ಮ್ಯಾಗಿ
- Education
BEL Recruitment 2021: 205 ಟೆಕ್ನೀಶಿಯನ್ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಚಿರು ಅಗಲಿಕೆಯ ಬಗ್ಗೆ ಅರ್ಜುನ್ ಸರ್ಜಾ ಮೊದಲ ನೋವಿನ ನುಡಿ
ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡ ಚಿತ್ರರಂಗ ನೋವಿನ ಮಡುವಲ್ಲಿದೆ. ಸರ್ಜಾ ಕುಟುಂಬಕ್ಕೆ ಆಗಿರುವ ಆಘಾತವನ್ನು ಊಹಿಸಲೂ ಸಾಧ್ಯವಾಗುತ್ತಿಲ್ಲ. ತಮ್ಮ ಪ್ರೀತಿಯ ಅಳಿಯನ ಸಾವಿನ ಆಘಾತದಲ್ಲಿಯೇ ಚೆನ್ನೈನಿಂದ ಹೊರಟು ಬಂದಿದ್ದ ಅರ್ಜುನ್ ಸರ್ಜಾ, ಚಿರಂಜೀವಿ ಅಗಲುವಿಕೆಯ ಬಗ್ಗೆ ತಮ್ಮ ಮೊದಲ ನೋವಿನ ಮಾತುಗಳನ್ನು ಆಡಿದ್ದಾರೆ.
ಸಹೋದರಿಯ ಮಕ್ಕಳಾದ ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾ ಅವರಿಗೆ ಚಿತ್ರರಂಗದಲ್ಲಿ ನೆಲೆ ಸಿಗಬೇಕೆಂಬುದನ್ನು ಅರ್ಜುನ್ ಸರ್ಜಾ ಬಯಕೆಯಾಗಿತ್ತು. ಅದರಂತೆಯೇ ಚಿರಂಜೀವಿ ಮತ್ತು ಧ್ರುವ ಇಬ್ಬರೂ ಸಿನಿಮಾಗಳನ್ನು ಮಾಡುತ್ತಾ ತಮ್ಮದೇ ವಲಯ ಸೃಷ್ಟಿಸಿಕೊಂಡಿದ್ದಾರೆ ಎನ್ನುವುದು ಅವರ ಸಂತೋಷಕ್ಕೂ ಕಾರಣವಾಗಿತ್ತು. ಇಬ್ಬರಲ್ಲಿಯೂ ಶಿಸ್ತು, ಸರಳತೆ ಮತ್ತು ಬದ್ಧತೆ ಮೂಡಿಸುವಲ್ಲಿ ಅರ್ಜುನ್ ಸರ್ಜಾ ಪ್ರಯತ್ನ ದೊಡ್ಡದು. ಅರ್ಜುನ್ ಸರ್ಜಾ ಅವರ ಸಾಮಾಜಿಕ ಜಾಲತಾಣದ ಪುಟಗಳಲ್ಲಿ ಈ ಇಬ್ಬರೊಂದಿಗಿನ ಫೋಟೊಗಳೇ ಹೆಚ್ಚಾಗಿದ್ದವು ಎನ್ನುವುದು ಆ ಪ್ರೀತಿಯನ್ನು ವಿವರಿಸುತ್ತದೆ. ಮುಂದೆ ಓದಿ...

ನೋವು ಹಂಚಿಕೊಂಡ ಅರ್ಜುನ್ ಸರ್ಜಾ
ಚಿರಂಜೀವಿ ಸರ್ಜಾ ನಿಧನದ ಆಘಾತದಲ್ಲಿದ್ದ ಅರ್ಜುನ್ ಸರ್ಜಾ, ಸಾಮಾಜಿಕ ಜಾಲತಾಣದಲ್ಲಿ ಒಂದೇ ಸಾಲಿನಲ್ಲಿ ತಮ್ಮ ದುಃಖವನ್ನು ಹಂಚಿಕೊಂಡಿದ್ದಾರೆ. ಚಿರಂಜೀವಿ ಸರ್ಜಾ ಜತೆಗಿನ ಸಂತಸದ ಕ್ಷಣದ ಸಂದರ್ಭದ ಫೋಟೊವನ್ನು ಅವರು ಪೋಸ್ಟ್ ಮಾಡಿದ್ದಾರೆ.
ಮೆಚ್ಚಿನ ಹುಡುಗ ಚಿರು ಸರ್ಜಾ ಗೆ ದುಃಖದ ಶ್ರದ್ಧಾಂಜಲಿ ಸಲ್ಲಿಸಿದ ಅರ್ಜುನ್ ಸರ್ಜಾ

ವಿಧಿ ಬಹಳ ಕ್ರೂರ
'ಐ ಮಿಸ್ ಯೂ ಮೈ ಬಾಯ್' ಎಂದು ಅರ್ಜುನ್ ಸರ್ಜಾ, ಚಿರು ಕುರಿತು ಬರೆದಿದ್ದಾರೆ. ವಿಧಿ ಎನ್ನುವುದು ಬಹಳ ಕ್ರೂರವಾಗಿದೆ ಎಂದು ಅರ್ಜುನ್ ಸರ್ಜಾ ಭಾವುಕರಾಗಿ ಬರೆದುಕೊಂಡಿದ್ದಾರೆ.

ಪ್ರೊಫೈಲ್ ಫೋಟೊ ಬದಲು
ಚಿರಂಜೀವಿ ಸರ್ಜಾ ಮೃತಪಟ್ಟ ಭಾನುವಾರ ಸಂಜೆ ಅವರು ತಮ್ಮ ಫೇಸ್ ಬುಕ್ ಪುಟದ ಪ್ರೊಫೈಲ್ ಚಿತ್ರವನ್ನು ಕಪ್ಪು ಬಣ್ಣಕ್ಕೆ ಬದಲಿಸುವ ಮೂಲಕ ದುಃಖವನ್ನು ಹಂಚಿಕೊಂಡಿದ್ದರು. ಈ ನೋವಿನಿಂದ ಹೊರಬರಲು ಅವರು ಪ್ರಯತ್ನಿಸುವ ಸೂಚನೆಯನ್ನು ನೀಡಿದ್ದಾರೆ. ತಮ್ಮ ಫೇಸ್ಬುಕ್ ಪ್ರೊಫೈಲ್ ಫೋಟೊವನ್ನು ಮತ್ತೆ ಬದಲಿಸಿದ್ದಾರೆ.
ಫಿಟ್ನೆಸ್ ಬಗ್ಗೆ ಗಮನ ಕೊಡು ಎಂದು ಚಿರುಗೆ ಬಯ್ಯುತ್ತಿದ್ದರು ಅರ್ಜುನ್ ಸರ್ಜಾ

ಹೋರಾಟದ ಸುಳಿವು
ಫೇಸ್ಬುಕ್ನಲ್ಲಿ ತಮ್ಮ ಹಳೆಯ ಫೋಟೊವನ್ನು ಪ್ರೊಫೈಲ್ ಫೋಟೊವಾಗಿ ಅರ್ಜುನ್ ಸರ್ಜಾ ಬದಲಿಸಿದ್ದಾರೆ. ಫೈಟಿಂಗ್ ದೃಶ್ಯದ ಚಿತ್ರದ ಮೂಲಕ ಅವರು ಈ ನೋವಿನ ನಡುವೆಯೂ ಮತ್ತೆ ಹೋರಾಡುತ್ತೇವೆ ಎಂಬ ಸೂಚನೆ ನೀಡಿದ್ದಾರೆ.