Don't Miss!
- Lifestyle ಪುಟ್ಟ ಕಂದಮ್ಮಗಳ ಮುಖದಲ್ಲಿ ನಗು ತರಿಸಲು ಟೀಚರ್ ಮಾಡಿದ ಕೆಲಸ ನೋಡಿ, ಮಕ್ಕಳ ಪಾಲಿನ ದೇವತೆ ಇವರು
- News Siddaramaiah: ಹುಬ್ಬಳ್ಳಿಯ ನೇಹಾ ಹಿರೇಮಠ ನಿವಾಸಕ್ಕೆ ಸಿಎಂ ಭೇಟಿ: ಸಿದ್ದರಾಮಯ್ಯ ಕೊಟ್ಟ ಭರವಸೆ ಏನು?
- Sports IPL 2024: ಹೈದರಾಬಾದ್ ಅಂಗಳದಲ್ಲಿ ಗೆಲ್ಲುವುದೆ ಆರ್ಸಿಬಿ: ಟಾಸ್ ವರದಿ ಹೀಗಿದೆ
- Automobiles Honda: ಬಡವರ ಕನಸು ನನಸು.. ಕಡಿಮೆ ಬೆಲೆಗೆ ಸಿಗುತ್ತವೆ ಈ ಬೈಕ್ಗಳು
- Technology Sennheiser: ಭಾರತದಲ್ಲಿ ಸೆನ್ಹೈಸರ್ ಮೊಮೆಂಟಮ್ ಟ್ರೂ ವೈರ್ಲೆಸ್ 4 ಲಾಂಚ್! ಬೆಲೆ 20 ಸಾವಿರ
- Finance ಒಂದೆರಡಲ್ಲ ಒಂಬತ್ತು ಬಾರಿ ಉದ್ಯಮದಲ್ಲಿ ವಿಫಲತೆ, ಮಾನಸಿಕ ಖಿನ್ನತೆ ಸವಾಲುಗಳನ್ನು ಮೆಟ್ಟಿ ನಿಂತ ಉದ್ಯಮಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಚಿರು ಅಗಲಿಕೆಯ ಬಗ್ಗೆ ಅರ್ಜುನ್ ಸರ್ಜಾ ಮೊದಲ ನೋವಿನ ನುಡಿ
ಚಿರಂಜೀವಿ ಸರ್ಜಾ ಅವರನ್ನು ಕಳೆದುಕೊಂಡ ಚಿತ್ರರಂಗ ನೋವಿನ ಮಡುವಲ್ಲಿದೆ. ಸರ್ಜಾ ಕುಟುಂಬಕ್ಕೆ ಆಗಿರುವ ಆಘಾತವನ್ನು ಊಹಿಸಲೂ ಸಾಧ್ಯವಾಗುತ್ತಿಲ್ಲ. ತಮ್ಮ ಪ್ರೀತಿಯ ಅಳಿಯನ ಸಾವಿನ ಆಘಾತದಲ್ಲಿಯೇ ಚೆನ್ನೈನಿಂದ ಹೊರಟು ಬಂದಿದ್ದ ಅರ್ಜುನ್ ಸರ್ಜಾ, ಚಿರಂಜೀವಿ ಅಗಲುವಿಕೆಯ ಬಗ್ಗೆ ತಮ್ಮ ಮೊದಲ ನೋವಿನ ಮಾತುಗಳನ್ನು ಆಡಿದ್ದಾರೆ.
Recommended Video
ಸಹೋದರಿಯ ಮಕ್ಕಳಾದ ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾ ಅವರಿಗೆ ಚಿತ್ರರಂಗದಲ್ಲಿ ನೆಲೆ ಸಿಗಬೇಕೆಂಬುದನ್ನು ಅರ್ಜುನ್ ಸರ್ಜಾ ಬಯಕೆಯಾಗಿತ್ತು. ಅದರಂತೆಯೇ ಚಿರಂಜೀವಿ ಮತ್ತು ಧ್ರುವ ಇಬ್ಬರೂ ಸಿನಿಮಾಗಳನ್ನು ಮಾಡುತ್ತಾ ತಮ್ಮದೇ ವಲಯ ಸೃಷ್ಟಿಸಿಕೊಂಡಿದ್ದಾರೆ ಎನ್ನುವುದು ಅವರ ಸಂತೋಷಕ್ಕೂ ಕಾರಣವಾಗಿತ್ತು. ಇಬ್ಬರಲ್ಲಿಯೂ ಶಿಸ್ತು, ಸರಳತೆ ಮತ್ತು ಬದ್ಧತೆ ಮೂಡಿಸುವಲ್ಲಿ ಅರ್ಜುನ್ ಸರ್ಜಾ ಪ್ರಯತ್ನ ದೊಡ್ಡದು. ಅರ್ಜುನ್ ಸರ್ಜಾ ಅವರ ಸಾಮಾಜಿಕ ಜಾಲತಾಣದ ಪುಟಗಳಲ್ಲಿ ಈ ಇಬ್ಬರೊಂದಿಗಿನ ಫೋಟೊಗಳೇ ಹೆಚ್ಚಾಗಿದ್ದವು ಎನ್ನುವುದು ಆ ಪ್ರೀತಿಯನ್ನು ವಿವರಿಸುತ್ತದೆ. ಮುಂದೆ ಓದಿ...
ನೋವು ಹಂಚಿಕೊಂಡ ಅರ್ಜುನ್ ಸರ್ಜಾ
ಚಿರಂಜೀವಿ ಸರ್ಜಾ ನಿಧನದ ಆಘಾತದಲ್ಲಿದ್ದ ಅರ್ಜುನ್ ಸರ್ಜಾ, ಸಾಮಾಜಿಕ ಜಾಲತಾಣದಲ್ಲಿ ಒಂದೇ ಸಾಲಿನಲ್ಲಿ ತಮ್ಮ ದುಃಖವನ್ನು ಹಂಚಿಕೊಂಡಿದ್ದಾರೆ. ಚಿರಂಜೀವಿ ಸರ್ಜಾ ಜತೆಗಿನ ಸಂತಸದ ಕ್ಷಣದ ಸಂದರ್ಭದ ಫೋಟೊವನ್ನು ಅವರು ಪೋಸ್ಟ್ ಮಾಡಿದ್ದಾರೆ.
ಮೆಚ್ಚಿನ ಹುಡುಗ ಚಿರು ಸರ್ಜಾ ಗೆ ದುಃಖದ ಶ್ರದ್ಧಾಂಜಲಿ ಸಲ್ಲಿಸಿದ ಅರ್ಜುನ್ ಸರ್ಜಾ
ವಿಧಿ ಬಹಳ ಕ್ರೂರ
'ಐ ಮಿಸ್ ಯೂ ಮೈ ಬಾಯ್' ಎಂದು ಅರ್ಜುನ್ ಸರ್ಜಾ, ಚಿರು ಕುರಿತು ಬರೆದಿದ್ದಾರೆ. ವಿಧಿ ಎನ್ನುವುದು ಬಹಳ ಕ್ರೂರವಾಗಿದೆ ಎಂದು ಅರ್ಜುನ್ ಸರ್ಜಾ ಭಾವುಕರಾಗಿ ಬರೆದುಕೊಂಡಿದ್ದಾರೆ.
ಪ್ರೊಫೈಲ್ ಫೋಟೊ ಬದಲು
ಚಿರಂಜೀವಿ ಸರ್ಜಾ ಮೃತಪಟ್ಟ ಭಾನುವಾರ ಸಂಜೆ ಅವರು ತಮ್ಮ ಫೇಸ್ ಬುಕ್ ಪುಟದ ಪ್ರೊಫೈಲ್ ಚಿತ್ರವನ್ನು ಕಪ್ಪು ಬಣ್ಣಕ್ಕೆ ಬದಲಿಸುವ ಮೂಲಕ ದುಃಖವನ್ನು ಹಂಚಿಕೊಂಡಿದ್ದರು. ಈ ನೋವಿನಿಂದ ಹೊರಬರಲು ಅವರು ಪ್ರಯತ್ನಿಸುವ ಸೂಚನೆಯನ್ನು ನೀಡಿದ್ದಾರೆ. ತಮ್ಮ ಫೇಸ್ಬುಕ್ ಪ್ರೊಫೈಲ್ ಫೋಟೊವನ್ನು ಮತ್ತೆ ಬದಲಿಸಿದ್ದಾರೆ.
ಫಿಟ್ನೆಸ್ ಬಗ್ಗೆ ಗಮನ ಕೊಡು ಎಂದು ಚಿರುಗೆ ಬಯ್ಯುತ್ತಿದ್ದರು ಅರ್ಜುನ್ ಸರ್ಜಾ
ಹೋರಾಟದ ಸುಳಿವು
ಫೇಸ್ಬುಕ್ನಲ್ಲಿ ತಮ್ಮ ಹಳೆಯ ಫೋಟೊವನ್ನು ಪ್ರೊಫೈಲ್ ಫೋಟೊವಾಗಿ ಅರ್ಜುನ್ ಸರ್ಜಾ ಬದಲಿಸಿದ್ದಾರೆ. ಫೈಟಿಂಗ್ ದೃಶ್ಯದ ಚಿತ್ರದ ಮೂಲಕ ಅವರು ಈ ನೋವಿನ ನಡುವೆಯೂ ಮತ್ತೆ ಹೋರಾಡುತ್ತೇವೆ ಎಂಬ ಸೂಚನೆ ನೀಡಿದ್ದಾರೆ.