ನಟ ಆರ್ಯ ವಿರುದ್ದ ಅರೆಸ್ಟ್ ವಾರೆಂಟ್ ಜಾರಿಗೊಳಿಸಿದ ಕೋರ್ಟ್ !
ತಮಿಳು ಸ್ಟಾರ್ ನಟ ಆರ್ಯ ವಿರುದ್ದ ತಿರುನೆಲೆವೇಲಿ ಅಂಬಸಮುದ್ರಂ ನ್ಯಾಯಾಪೀಠ ಅರೆಸ್ಟ್ ವಾರೆಂಟ್ ನೋಟಿಸ್ ಜಾರಿಗೊಳಿಸಿದೆ. 2011ರಲ್ಲಿ "ಅವನ್ ಇವನ್" ಎನ್ನುವ ತಮಿಳು ಚಿತ್ರ ತೆರೆ ಕಂಡು ಸಾಕಷ್ಟು ವಿವಾದವನ್ನು ಸೃಷ್ಟಿ ಮಾಡಿತ್ತು.
'ಅವನ್ ಇವನ್' ಚಿತ್ರದಲ್ಲಿ ಕಾಲಿವುಡ್ ಸ್ಟಾರ್ ನಟರಾದ ಆರ್ಯ ಹಾಗು ವಿಶಾಲ್ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. ಬಾಲ ನಿರ್ದೇಶನದಲ್ಲಿ ಮೂಡಿ ಬಂದ 'ಅವನ್ ಇವನ್' ಸಿನಿಮಾದಲ್ಲಿ ಸಿಂಗಮತ್ತಿ ಜಮೀನ್ ಬಗ್ಗೆ ತಪ್ಪಾಗಿ ಚಿತ್ರೀಕರಿಸಿಲಾಗಿದೆ ಎಂದು ಸಾರ್ವಜನಿಕ ನ್ಯಾಯಾಲಯದಲ್ಲಿ ನಟ ಆರ್ಯ ಹಾಗೂ ನಿರ್ದೇಶಕ ಬಾಲಾ ಅವರ ಮೇಲೆ ಕ್ರಿಮಿನಲ್ ಮೊಕದ್ದಮೆಯನ್ನು ಹೂಡಲಾಗಿತ್ತು.

ಈಗ ತಿರುನೆಲ್ವೇಲಿ ಅಂಬಸಮುದ್ರಂ ನ್ಯಾಯಾಪೀಠ ಈ ಬಗ್ಗೆ ತೀರ್ಪನ್ನು ಹೊರಹಾಕಿದೆ. ಈ ಮೊಕದ್ದಮೆಗೆ ಸಂಭಂದಿಸಿದಂತೆ ಸಾಕ್ಷ್ಯಾಧಾರಗಳನ್ನು ಪರಿಶೀಲನೆ ಮಾಡಿ ನಂತರ ನಟ ಆರ್ಯ ಹಾಗು ನಿರ್ದೇಶಕ ಬಾಲಾ ಅವರು ತಪ್ಪು ಮಾಡಿದ್ದಾರೆಂದು ನಿರ್ಧರಿಸಿ ಅರೆಸ್ಟ್ ವಾರೆಂಟ್ ನೋಟಿಸ್ ಜಾರಿಗೊಳಿಸಿದೆ.

'ಅವನ್ ಇವನ್' ಚಿತ್ರ 2011 ರಲ್ಲಿ ತೆರೆ ಕಂಡಿತ್ತು. ಸದ್ಯ ಅರೆಸ್ಟ್ ವಾರೆಂಟ್ ನೋಟಿಸ್ ಜಾರಿಗೊಳಿಸಿದ್ದು ಜುಲೈ 13 ರಂದು ಮತ್ತೆ ಈ ಬಗ್ಗೆ ವಿಚಾರಣೆ ನಡೆಯಲಾಗುತ್ತದೆ.


Click it and Unblock the Notifications











