Don't Miss!
- News Rain Alert: ರಾಜ್ಯಾದ್ಯಂತ ಹಲವು ಜಿಲ್ಲೆಗಳಲ್ಲಿ ವ್ಯಾಪಕ ಮಳೆ; ಜಿಲ್ಲಾವಾರು ಮಳೆ ವಿವರ
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Sports ಆರ್ಸಿಬಿಗೆ ಸಹಿ ಹಾಕಲು ವಿರಾಟ್ ಕೊಹ್ಲಿ ಕೇಳಿದ್ದೇಗೆ?; ಕುತೂಹಲಕಾರಿ ಕಥೆ ಬಿಚ್ಚಿಟ್ಟ ಕೆಎಲ್ ರಾಹುಲ್
- Automobiles ಟಾಟಾ ಕಾರುಗಳಂತೆಯೇ ಗರಿಷ್ಠ ಸುರಕ್ಷತೆ ತೋರಿದ ಸ್ವಿಫ್ಟ್: ಕ್ರ್ಯಾಶ್ ಟೆಸ್ಟ್ನಲ್ಲಿ 4 ಸ್ಟಾರ್
- Technology ಅಗ್ಗದ ಬೆಲೆಯಲ್ಲಿ ಎಂಟ್ರಿ ಕೊಡಲು ಸಜ್ಜಾಗಿದೆ ಐಟೆಲ್ S24 ಸ್ಮಾರ್ಟ್ಫೋನ್!
- Finance n. r. narayana murthy ಐದು ತಿಂಗಳ ಮೊಮ್ಮಗನಿಗೆ 4.2 ಕೋಟಿ ಇನ್ಫೋಸಿಸ್ ಲಾಭ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ಬಾಹುಬಲಿ' ಚಿತ್ರತಂಡದಿಂದ ಬ್ಯಾಡ್ ನ್ಯೂಸ್!
'ಬಾಹುಬಲಿ-2' ಚಿತ್ರಕ್ಕಾಗಿ ಇಡೀ ಚಿತ್ರ ಜಗತ್ತೇ ತುದಿಗಾಲಲ್ಲಿ ನಿಂತು ಕಾಯುತ್ತಿದೆ. ಯಾಕಂದ್ರೆ, 'ಬಾಹುಬಲಿ-2' ಚಿತ್ರದ ಬಿಡುಗಡೆಗೆ ಕೇವಲ 4 ತಿಂಗಳು ಮಾತ್ರ ಬಾಕಿಯಿರುವುದು. ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ? ಎಂಬ ಸಹಸ್ರಾರು ಅಭಿಮಾನಿಗಳನ್ನು ಕಾಡುತ್ತಿರುವ ಈ ಪ್ರಶ್ನೆಗೆ ಈ ವರ್ಷ ಉತ್ತರ ಸಿಗಲಿದೆ ಎಂಬ ನಿರೀಕ್ಷೆ.
ಆದ್ರೆ, ಅಭಿಮಾನಿಗಳ ಈ ನಿರೀಕ್ಷೆ ಹುಸಿಯಾಗುವ ಸಾಧ್ಯತೆಯಿದೆ. ಈ ಮೊದಲೇ ಹೇಳಿದ ದಿನಕ್ಕೆ 'ಬಾಹುಬಲಿ-2' ಚಿತ್ರ ಬರುವುದು ಅನುಮಾನವಂತೆ.[ಬಾಹುಬಲಿ-2: ಭರ್ಜರಿಯಾಗಿದೆ 'ಬಲ್ಲಾಳದೇವ'ನ ಫಸ್ಟ್ ಲುಕ್.!]
ಎಲ್ಲ ಅಂದುಕೊಂಡಂತೆ ಆಗಿದ್ದರೇ, 'ಬಾಹುಬಲಿ-2' ಇದೇ ವರ್ಷ ಏಪ್ರಿಲ್ 28 ರಂದು ಬಿಡುಗಡೆಯಾಗಬೇಕಿತ್ತು. ಆದ್ರೆ, ಏಪ್ರಿಲ್ ನಲ್ಲಿ ಸಿನಿಮಾ ಬಿಡುಗಡೆ ಮಾಡುವುದು ಕಷ್ಟವಾಗಲಿದೆಯಂತೆ. ಹೌದು, ಇಷ್ಟೋತ್ತಿಗಾಗಲೇ 'ಬಾಹುಬಲಿ-2' ಚಿತ್ರದ ಚಿತ್ರೀಕರಣ ಮುಗಿದು, ಪೋಸ್ಟ್ ಪ್ರೊಡಕ್ಷನ್ ಕೆಲಸಕ್ಕೆ ಹೋಗಬೇಕಿತ್ತು. ಆದ್ರೆ, ಇನ್ನೂ ಕೆಲ ದೃಶ್ಯಗಳ ಶೂಟಿಂಗ್ ಬಾಕಿಯಿದ್ದು, ನಿಗಧಿ ಮಾಡಿದ ದಿನಾಂಕದೊಳಗೆ ಕಂಪ್ಲೀಟ್ ಮಾಡಲು ಕಷ್ಟವಾಗಲಿದೆಯಂತೆ.['ಬಾಹುಬಲಿ'ನ ಕಟ್ಟಪ್ಪ ಕೊಂದಿದ್ದು ಯಾಕೆ? ರವಿಶಂಕರ್ ಬಾಯ್ಬಿಟ್ಟ ಸತ್ಯ?]
ಮತ್ತೊಂದು ಮೂಲಗಳ ಪ್ರಕಾರ, ಚಿತ್ರತಂಡ ಹೇಳಿದಾಗೇ ಅದೇ ದಿನ ಸಿನಿಮಾ ಬಿಡುಗಡೆ ಮಾಡಲಾಗವುದು ಎನ್ನಲಾಗುತ್ತಿದೆ. ಇದಕ್ಕಾಗಿ ಈಗಾಗಲೇ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನ ಕೈತ್ತಿಕೊಳ್ಳಲಾಗಿದೆಯಂತೆ. ಮತ್ತೊಂದೆಡೆ ನಟ ಪ್ರಭಾಸ್, ತಮ್ಮ ಮುಂದಿನ ಚಿತ್ರದಲ್ಲಿ ತೊಡಗಿಸಿಕೊಳ್ಳಬೇಕಾಗಿದೆಯಂತೆ. ಆದ್ರೆ, 'ಬಾಹುಬಲಿ' ಚಿತ್ರೀಕರಣ ವಿಳಂಬವಾಗುತ್ತಿದ್ದು, ಆ ಚಿತ್ರಕ್ಕೂ ಸಮಸ್ಯೆಯಾಗುತ್ತಿದೆ ಎನ್ನಲಾಗುತ್ತಿದೆ.
ಅದೇನೆ ಇರಲಿ, ದಿನೇ ದಿನೇ 'ಬಾಹುಬಲಿ-2' ಚಿತ್ರದ ಬಗ್ಗೆ ಕುತೂಹಲ ಹೆಚ್ಚಾಗಿದ್ದು, ಆದಷ್ಟೂ ಬೇಗ ತೆರೆಗೆ ಬರಲಿ ಎನ್ನುವುದು ಮಾತ್ರ ಅಭಿಮಾನಿಗಳ ಆಶಯ.