ಕನ್ನಡ ಚಿತ್ರರಂಗದಲ್ಲಿ ಅರಳಿರುವ ಹೊಸ ಹೂವುಗಳು

By Prasad

ಸಿನಿಮಾದಲ್ಲಿ ಒಂದು ಚಾನ್ಸ್ ಸಿಗುತ್ತೇ ಅಂದ್ರೆ ಯಾರು ತಾನೆ ಬೇಡ ಅನ್ನಲ್ಲ ಹೇಳಿ? ಮೊದಲ ಪ್ರೀತಿಯ ಹಾಗೆ ಮೊದಲ ಸಿನೆಮಾ ಅಂದ್ರೆ ಏನೋ ಒಂಥರಾ ಥ್ರಿಲ್. ಇಂಥ ರೋಮಾಂಚನ ಅನುಭವಿಸಿಕೊಂಡವರಲ್ಲಿ ಹಲವಾರು ಹೊಸ ಪ್ರತಿಭೆಗಳು ಯಶಸ್ಸಿನ ರುಚಿ ಉಂಡಿವೆ.

ಇದು ನಿಜಕ್ಕೂ ಕನ್ನಡ ಚಿತ್ರರಂಗಕ್ಕೆ ಉತ್ತಮವಾದ ಬೆಳವಣಿಗೆ. ಹಳೆ ನೀರು ಕೊಚ್ಚಿ ಹೋಗದಿದ್ದರೂ, ಹೊಸ ನೀರು ಹರಿದು ಬರುತ್ತಿರಲೇಬೇಕು. 2015 ನಿಜಕ್ಕೂ ಹೊಸಬರಿಗೆ ಹೊಸ ಅವಕಾಶಗಳನ್ನು ತೆರೆದಿಟ್ಟಂಥ ವರ್ಷ. ನಟ, ನಟಿ, ನಿರ್ದೇಶಕ, ತಂತ್ರಜ್ಞರು ಮೊದಲ ಸಿನೆಮಾದಲ್ಲೇ ತಮ್ಮ ಛಾಪನ್ನು ಮೂಡಿಸಿ ಭರವಸೆಯ ಬೆಳಕು ಹರಿಸಿದ್ದಾರೆ.

2015ರಲ್ಲಿ ತೆರೆಕಂಡಿರುವ ರಾಧಿಕಾ ಪಂಡಿತ್ ಹಾಗೂ ಬಹು ಬೇಡಿಕೆಯ ನಟ ರಾಕಿಂಗ್ ಸ್ಟಾರ್ ಯಶ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿರುವ 'ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ' ಚಿತ್ರಕ್ಕೆ ಮೊಟ್ಟ ಮೊದಲ ಬಾರಿಗೆ ಆ್ಯಕ್ಷನ್ ಕಟ್ ಹೇಳಿರುವ ಸಂತೋಷ್ ಆನಂದ್ರಾಮ್ ಅವರು ಭರ್ಜರಿ ಯಶಸ್ಸನ್ನು ಕಂಡರು. [2015ರಲ್ಲಿ ಚಂದನವನವನ್ನು ಬೆಳಗಿದ ಅತ್ಯುತ್ತಮ 10 ಚಿತ್ರಗಳು]

Best New Faces Of Kannada Film Industry

ಈ ಚಿತ್ರ ಸುಮಾರು 200 ದಿನಗಳು ರಾಜ್ಯಾದ್ಯಂತ ಯಶಸ್ವಿಯಾಗಿ ಪ್ರದರ್ಶನಗೊಂಡು 2015ರ ಸೂಪರ್ ಹಿಟ್ ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಯಿತು. ಮಿಸ್ಟರ್ ಅಂಡ್ ಮಿಸಸ್ ರಾಮಾಚಾರಿ ಚಿತ್ರದ ನಂತರ ಸಿದ್ಧಾರ್ಥ, ಮೈತ್ರಿ, ಕೃಷ್ಣನ್ ಲವ್ ಸ್ಟೋರಿ, ರಣವಿಕ್ರಮ, ರನ್ನ, ವಜ್ರಕಾಯ ಮತ್ತು ಗಣಪ ಸೇರಿದಂತೆ ಹಲವು ಕನ್ನಡ ಸಿನಿಮಾಗಳು ತೆರೆಕಂಡವು.

ಈ ಚಿತ್ರಕ್ಕಿಂತಲೂ ದೊಡ್ಡ ಯಶಸ್ಸು ಮತ್ತು ಅಚ್ಚರಿ ಮೂಡಿಸಿದ್ದ ಚಿತ್ರವೆಂದರೆ 'ರಂಗಿತರಂಗ'. ಅನೂಪ್ ಭಂಡಾರಿ ಪ್ರಥಮ ನಿರ್ದೇಶನದ, ನಿರೂಪ್ ಭಂಜಾರಿ, ರಾಧಿಕಾ ಚೇತನ್, ಅವಂತಿಕಾ ಪ್ರಥಮ ಬಾರಿ ಬಣ್ಣ ಬಳಿದುಕೊಂಡ ಚಿತ್ರ ಗಳಿಸಿದ ಪ್ರಶಸ್ತಿಗಳನ್ನಿಡಲು ಸಣ್ಣ ಶೋಕೇಸ್ ಸಾಲುವುದಿಲ್ಲ. ಈ ಚಿತ್ರದ ಯಶಸ್ಸಿನ ನಾಗಾಲೋಟ ಇನ್ನೂ ಸಾಗಿದೆ. [ಮತ್ತೊಂದು ಮೈಲಿಗಲ್ಲು ಸೃಷ್ಟಿಸಿದ 'ರಂಗಿತರಂಗ']

ಕಳೆದ ವರ್ಷ ಸೆಪ್ಟಂಬರ್ 11ರಂದು ತೆರೆಕಂಡ 'ದುನಿಯಾ' ಸೂರಿ ನಿರ್ದೇಶನದ ಸಂತೋಷ್ ರಿವಾ ಮತ್ತು ಮನ್ವಿತಾ ಹರೀಶ್ ಜೋಡಿಯ 'ಕೆಂಡಸಂಪಿಗೆ' ಚಿತ್ರ ಕರ್ನಾಟಕದಲ್ಲಿ ಮಾತ್ರವಲ್ಲದೆ ಜಗತ್ತಿನಾಂಧ್ಯಂತ ಅಲೆ ಎಬ್ಬಿಸಿದೆ. ಹೀಗೆ ಚಿತ್ರಪ್ರೇಮಿಗಳನ್ನು ಸೆಳೆದವರು ಒಬ್ಬರಾ, ಇಬ್ಬರಾ? ಅವರು ಯಾರ್ಯಾರೆಂದು ಕೆಳಗಿನ ಚಿತ್ರಗಳಲ್ಲಿ ನೋಡುತ್ತಾ ಹೋಗಿರಿ. ['ಕೆಂಡಸಂಪಿಗೆ' ವಿಮರ್ಶೆ - ಸೂರಿಯ ಹೊಸ 'ದುನಿಯಾ']

ಮಾಸ್ಟರ್ ಪೀಸ್ ನಾಯಕಿ ಶಾನ್ವಿ ಶ್ರೀವಾಸ್ತವ್

ಮಾಸ್ಟರ್ ಪೀಸ್ ನಾಯಕಿ ಶಾನ್ವಿ ಶ್ರೀವಾಸ್ತವ್

ಗಣಪ ಚಿತ್ರದ ನಾಯಕ ಸಂತೋಷ್

ಗಣಪ ಚಿತ್ರದ ನಾಯಕ ಸಂತೋಷ್

ಗಣಪದ ನಾಯಕಿ ಪ್ರಿಯಾಂಕಾ

ಗಣಪದ ನಾಯಕಿ ಪ್ರಿಯಾಂಕಾ

ಮದುವೆಯ ಮಮತೆಯ ಕರೆಯೋಲೆ ನಾಯಕ ಸೂರಜ್ ಗೌಡ

ಮದುವೆಯ ಮಮತೆಯ ಕರೆಯೋಲೆ ನಾಯಕ ಸೂರಜ್ ಗೌಡ

ಕೃಷ್ಣ ಲೀಲೆಯಲ್ಲಿ ಮಿಂಚಿದ ಮಯೂರಿ

ಕೃಷ್ಣ ಲೀಲೆಯಲ್ಲಿ ಮಿಂಚಿದ ಮಯೂರಿ

ಇಷ್ಟಕಾಮ್ಯದ ನಾಯಕ ವಿಜಯ್ ಸೂರ್ಯ

ಇಷ್ಟಕಾಮ್ಯದ ನಾಯಕ ವಿಜಯ್ ಸೂರ್ಯ

ವಾಸ್ತು ಪ್ರಕಾರದಲ್ಲಿ ಛಾಪೊತ್ತಿದ ಐಶಿನಿ ಶೆಟ್ಟಿ

ವಾಸ್ತು ಪ್ರಕಾರದಲ್ಲಿ ಛಾಪೊತ್ತಿದ ಐಶಿನಿ ಶೆಟ್ಟಿ

ಮುದ್ದು ಮನಸೆ ಚಿತ್ರದಲ್ಲಿ ಮೋಡಿ ಮಾಡಿದ ಅರುಣ್ ಗೌಡ

ಮುದ್ದು ಮನಸೆ ಚಿತ್ರದಲ್ಲಿ ಮೋಡಿ ಮಾಡಿದ ಅರುಣ್ ಗೌಡ

ಕೆಂಡಸಂಪಿಗೆಯಲ್ಲಿ ಮಿಂಚಿದ ಮನ್ವಿತಾ ಹರೀಶ್

ಕೆಂಡಸಂಪಿಗೆಯಲ್ಲಿ ಮಿಂಚಿದ ಮನ್ವಿತಾ ಹರೀಶ್

ಫಸ್ಟ್ Rank ರಾಜು ಗುರುನಂದನ್

ಫಸ್ಟ್ Rank ರಾಜು ಗುರುನಂದನ್

ರಂಗಿತರಂಗದ ಬೆಡಗಿ ರಾಧಿಕಾ ಚೇತನ್

ರಂಗಿತರಂಗದ ಬೆಡಗಿ ರಾಧಿಕಾ ಚೇತನ್

ಕೆಂಡಸಂಪಿಗೆಯಲ್ಲಿ ನೈಜ ಅಭಿನಯ ನೀಡಿದ ಸಂತೋಷ್ ರೇವಾ (ವಿಕ್ಕಿ)

ಕೆಂಡಸಂಪಿಗೆಯಲ್ಲಿ ನೈಜ ಅಭಿನಯ ನೀಡಿದ ಸಂತೋಷ್ ರೇವಾ (ವಿಕ್ಕಿ)

ರಂಗಿತರಂಗದ ಆವಂತಿಕಾ ಶೆಟ್ಟಿ

ರಂಗಿತರಂಗದ ಆವಂತಿಕಾ ಶೆಟ್ಟಿ

ರಂಗಿತರಂಗದಲ್ಲಿ ಹೃದಯ ಕತ್ತ ನಿರೂಪ್ ಭಂಡಾರಿ

ರಂಗಿತರಂಗದಲ್ಲಿ ಹೃದಯ ಕತ್ತ ನಿರೂಪ್ ಭಂಡಾರಿ

More from Filmibeat

English summary
Best New Faces Of Kannada Film Industry. There are many new actors, technicians and film-makers who have made their debut in Sandalwood. Today, we have come up with an article which speaks about their first best contribution to the industry.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X