Don't Miss!
- Technology ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಡೀಪ್ಫೇಕ್ ದೊಡ್ಡ ಕಳವಳಕಾರಿ ಎಂದ ಮೋದಿ
- News ಚಿತ್ರದುರ್ಗದಲ್ಲಿ ಬಿಜೆಪಿಗೆ ಬಂಡಾಯದ ಬಿಸಿ: ಅಭ್ಯರ್ಥಿ ಬದಲಿಸದಿದ್ದರೆ ಪಕ್ಷೇತರ ಸ್ಪರ್ಧೆ, ಏ.3ಕ್ಕೆ ನಾಮಪತ್ರ ಸಲ್ಲಿಕೆ?
- Automobiles 20 ವರ್ಷದ ಬಳಿಕ ಲ್ಯಾಂಬೋರ್ಗಿನಿ ಲೋಗೋಗೆ ಹೊಸ ಟಚ್: ಈ ಕಂಪನಿಯ ಕಾರುಗಳು ಯಾಕೆ ಫೇಮಸ್?
- Lifestyle ಯಾವ ದಿಕ್ಕಿಗೆ ತಲೆ ಇಟ್ಟು ಮಲಗಬಾರದು..? ಹಿರಿಯರು ಈ ರೀತಿ ಹೇಳೋದೇಕೆ.?
- Sports RCB vs KKR: ಗೇಮ್ ಚೇಂಜರ್ ಆಗಬಹುದು ಈ ಪ್ಲೇಯರ್ಸ್; ಈ ಆಟಗಾರರ ಮೇಲೆ ಕಣ್ಣು
- Finance 25ನೇ ವಯಸ್ಸಿನಲ್ಲಿ 25,000 ರೂ.ನಿಂದ 7,000 ಕೋಟಿ ಗಳಿಸಿದ ವ್ಯಕ್ತಿ ಬಗ್ಗೆ ತಿಳಿಯಿರಿ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಟೈಗರ್ಸ್ ವಿರುದ್ಧ ಬುಲ್ಡೋಜರ್ಸ್ ವಿರೋಚಿತ ಗೆಲುವು
ಇವರೆಲ್ಲಾ ಅಷ್ಟು ಪ್ರೊಫೆಷನಲ್ ಆಟಗಾರರಲ್ಲ ಬಿಡು ಕಣ್ಲಾ. ಸಿನಿಮಾ ತಾರೆಗಳಿಗೆ ಬ್ಯಾಟ್ ಹಿಡಿಯಕ್ಕೆ ಬರಲ್ಲ, ಕ್ರಿಕೆಟ್ ಬಗ್ಗೆ ಅವರಿಗೇನು ಗೊತ್ತು ಎಂದುಕೊಂಡಿದ್ದವರಿಗೆ ಭಾನುವಾರ (ಜ.26) ರಾತ್ರಿ ನಡೆದ ಹೊನಲು ಬೆಳಕಿನ ಪಂದ್ಯಾವಳಿ ಸೂಕ್ತ ಉತ್ತರ ಕೊಟ್ಟಿದೆ.
ಯಾವ ಪ್ರೊಫೆಷನಲ್ ಆಟಗಾರರಿಗೂ ಕಮ್ಮಿ ಇಲ್ಲದಂತೆ ಕರ್ನಾಟಕ ಬುಲ್ಡೋಜರ್ಸ್ ತಂಡ ಸಿಸಿಎಲ್ ನಾಲ್ಕನೇ ಆವೃತ್ತಿಯ ಚೊಚ್ಚಲ ಪಂದ್ಯದಲ್ಲೇ ಗೆಲುವು ದಾಖಲಿಸಿತು. ಸುದೀಪ್ ತಂಡದ ಆಟ ನೋಡಲು ಚಿನ್ನಸ್ವಾಮಿ ಕ್ರೀಡಾಂಗಣ ಬಹುತೇಕ ಭರ್ತಿಯಾಗಿತ್ತು.
ಅಭಿಮಾನಿಗಳ ಶಿಳ್ಳೆ, ಚಪ್ಪಾಳೆ, ಕೂಗಾಟದ ನಡುವೆ ಆಟ ರೋಚಕವಾಗಿತ್ತು. ಟಾಸ್ ಗೆದ್ದ ಬಂಗಾಳ್ ಟೈಗರ್ಸ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಳ್ತು. ಅಲ್ಲೇ ಅವರು ತಪ್ಪು ಹೆಜ್ಜೆ ಹಾಕಿದ್ದು ಎನ್ನಿಸುತ್ತದೆ.
ಮ್ಯಾನ್ ಆಫ್ ದಿ ಮ್ಯಾಚ್ ರಾಜೀವ್
ನಟ ರಾಜೀವ್ 34 ಎಸೆತಗಳಲ್ಲಿ ಭರ್ಜರಿ 87 ರನ್ ಹೊಡೆಯುವ ಮೂಲಕ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಗೆದ್ದರು. ಪ್ರದೀಪ್ ಹಾಗೂ ರಾಹುಲ್ ಜೊತೆಯಾಟ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿತು.
ದರ್ಶನ್ ಅಭಿಮಾನಿಗಳಿಗೆ ನಿರಾಸೆ
ಆರಂಭಿಕ ಆಟಗಾರ ದರ್ಶನ್ ಅವರು ಒಂದೇ ಒಂದು ರನ್ ಹೊಡೆದು ರನ್ ಔಟ್ ಆಗಿದ್ದು ಅವರ ಅಭಿಮಾನಿಗಳಿಗೆ ತೀವ್ರ ನಿರಾಸೆಪಡಿಸಿತು. ಪ್ರದೀಪ್ 47 ಬಾಲ್ ಗಳಲ್ಲಿ ರೋಚಕ 73 ರನ್, ರಾಹುಲ್ 28 ಬಾಲ್ ಗಳಲ್ಲಿ 36 ರನ್ ಹೊಡೆದು ಕರ್ನಾಟಕ ಬುಲ್ಡೋಜರ್ಸ್ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು.
ಬುಲ್ಡೋಜರ್ಸ್ ವಿರುದ್ಧ ತಿಣುಕಾಡಿದ ಟೈಗರ್ಸ್
ಬೆಂಗಾಲ್ ಟೈಗರ್ಸ್ ತಂಡ ವಿಕೆಟ್ ಗಳನ್ನು ಕೀಳುವಲ್ಲಿ ಸಾಕಷ್ಟು ತಿಣುಕಾಡಿತಾದರೂ ಕೇವಲ ಮೂರು ವಿಕೆಟ್ ಗಳಿಸಿತು. ಬೆಂಗಾಲ್ ಟೈಗರ್ಸ್ ತಂಡಕ್ಕೆ 231 ರನ್ ಗಳ ಭಾರಿ ಗುರಿಯನ್ನು ಕರ್ನಾಟಕ ಬುಲ್ಡೋಜರ್ಸ್ ಇಟ್ಟಿತು.
ಬುಲ್ಡೋಜರ್ಸ್ 115 ರನ್ ಗಳ ಭರ್ಜರಿ ಜಯ
ಆದರೆ ಬೆಂಗಾಲ್ ಟೈಗರ್ಸ್ ಆರಂಭದಲ್ಲೇ ತರಗೆಲೆಗಳಂತೆ ವಿಕೆಟ್ ಮೇಲೆ ವಿಕೆಟ್ ಗಳನ್ನು ಕಳೆದುಕೊಂಡು ಸೋಲಿನ ದವಡೆಯಿಂದ ಪಾರಾಗಳು ಸಾಕಷ್ಟು ತಿಣುಕಾಡುವಂತಾಯಿತು. ಅಂತಿಮವಾಗಿ ಪ್ರಯಾಸದ 113 ರನ್ ಗಳನ್ನು ಪೇರಿಸಿ ಹೀನಾಯ ಸೋಲನುಭವಿಸಿತು. ಕರ್ನಾಟಕ ಬುಲ್ಡೋಜರ್ಸ್ 115 ರನ್ ಗಳ ಭರ್ಜರಿ ಜಯ ದಾಖಲಿಸಿತು.
ಸಿಕ್ಸರ್ ಮೇಲೆ ಸಿಕ್ಸರ್ ಎತ್ತಿದ ರಾಜೀವ್
ನಟ ರಾಜೀವ್ ಅವರ 7 ಬೌಂಡರಿಗಳು ಹಾಗೂ ಭರ್ಜರಿ 7 ಸಿಕ್ಸರ್ ಗಳು, ಪ್ರದೀಪ್ ಹೊಡೆದ 7 ಬೌಂಡರಿಗಳು ಹಾಗೂ 3 ಸಿಕ್ಸರ್ ಗಳು ಅಭಿಮಾನಿಗಳ ಕಣ್ಣಿಗೆ ಹಬ್ಬದಂತಿದ್ದವು. ಈ ಪಂದ್ಯಾವಳಿಗೆ ಟಿಆರ್ ಕಶ್ಯಪನ್ ಹಾಗೂ ಎಸ್ ವಿ ರಮಣಿ ಅವರು ಅಂಪೈರ್ ಗಳಾಗಿದ್ದರು.