Don't Miss!
- Sports RCB: 'ಗೋ ಗ್ರೀನ್' ಭಾಗವಾಗಿ 3 ಕೆರೆಗಳ ಅಭಿವೃದ್ಧಿಪಡಿಸಿದ ಆರ್ಸಿಬಿ
- Finance ನಾಳೆ ಬೆಂಗಳೂರಿನಲ್ಲಿ ಚಿಕನ್, ಮಟನ್ ಮಾರಾಟಕ್ಕೆ ನಿಷೇಧ
- News 5 ವರ್ಷಗಳಲ್ಲಿ ಕರ್ನಾಟಕ ಸಂಸದರ ಸಾಧನೆ ಏನು? ಅಧ್ಯಯನ ಹೇಳೋದೇನು?
- Technology ಆನ್ಲೈನ್ ಶಾಪಿಂಗ್ ಮಾಡಲು ಇಲ್ಲಿವೇ ನೋಡಿ ಬೆಸ್ಟ್ ವೆಬ್ಸೈಟ್ಗಳು!
- Automobiles Hyundai: ಹಳೆಯ ಹ್ಯುಂಡೈ ಕ್ರೆಟಾವನ್ನು ಮರೆತುಬಿಡಿ... ಹೊಸ ಕ್ರೆಟಾ ಈಗ ಮತ್ತಷ್ಟು ಪ್ರೀಮಿಯಂ SUV
- Lifestyle ಜೀವ ಸಂಗಾತಿಗೆ ಹುಟ್ಟು ಹಬ್ಬದಂದು ವಿಶ್ ಮಾಡಲು ಸುಂದರ ಸಾಲುಗಳ ಗ್ರೀಟಿಂಗ್ಸ್ ಇಲ್ಲಿದೆ
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
ಐಶ್ವರ್ಯಾಗೆ ಬಿಸ್ಕೆಟ್ ಹಾಕಲಿರುವ ಚೇತನ್ ಚಂದ್ರ
ಈ ಚಿತ್ರಕ್ಕೆ ನಿರ್ದೇಶನ ಮಾಡಲಿರುವವರು ಕಿರುತೆರೆ ಹಾಗೂ ಹಿರಿತೆರೆಯ ಜನಪ್ರಿಯ ನಟ ರವಿತೇಜ. ಸದ್ಯಕ್ಕೆ 'ಪಾರ್ವತಿ ಪರಮೇಶ್ವರ' ಧಾರಾವಾಹಿಯ 'ಪರಮೇಶ್ವರ' ಪಾತ್ರದಲ್ಲಿ ಎಲ್ಲರನ್ನು ನಕ್ಕುನಗಿಸುತ್ತಿರುವ ರವಿತೇಜ, ಈ ಮೊದಲು ರಾಜಧಾನಿ ಸೇರಿದಂತೆ ಹಲವು ಚಿತ್ರಗಳಲ್ಲೂ ನಟಿಸಿದ್ದಾರೆ. ಅಂದಹಾಗೆ, ಬರಲಿರುವ ಬಿಸ್ಕೆಟ್ ಚಿತ್ರ ರವಿತೇಜರ ಮೊದಲ ನಿರ್ದೇಶನದ ಚಿತ್ರ. ರವಿತೇಜ, ಪ್ರೇಕ್ಷಕರ ಬಾಯಿಕೆ ಬಿಸ್ಕೆಟ್ ಹಾಕುವುದಿಲ್ಲ ಎಂಬ ಪಕ್ಕಾ ಮಾತು ಚಿತ್ರತಂಡದಿಂದ ಬಂದಿರುವುದು ಸಮಾಧಾನದ ಸಂಗತಿ. ಮಿಕ್ಕಂತೆ ಯಾರಿಗಾದರೂ ಬಿಸ್ಕೆಟ್ ಹಾಕಿಕೊಳ್ಳಲಿ ಬಿಡಿ!
ಈ ಚಿತ್ರಕ್ಕೆ ನಾಯಕಿಯಾಗಿ ಐಶ್ವರ್ಯಾ ನಾಗ್ ಆಯ್ಕೆಯಾಗಿದ್ದಾರೆ. ಇತ್ತೀಚಿಗಷ್ಟೇ ಸೆಟ್ಟೇರಿರುವ 'ಲೂಸುಗಳು' ಚಿತ್ರದ ನಾಯಕಿಯರಲ್ಲೊಬ್ಬರಾದ ಐಶ್ವರ್ಯಾ ನಾಗ್, ಈ ಚಿತ್ರವನ್ನೂ ತಮ್ಮ ಮಡಿಲಿಗೆ ಹಾಕಿಕೊಂಡಿದ್ದಾರೆ. ಬಹುಬೇಗ ಕನ್ನಡದಲ್ಲಿ ನೆಲೆನಿಲ್ಲುವ ಸೂಚನೆ ತೋರಿಸುತ್ತಿರುವ ಆಕರ್ಷಕ ಬೊಗಸೆ ಕಂಗಳ ಈ ನಟಿ, ಬಂದ ಅವಕಾಶಗಳನ್ನು ಹೇಗೆ ಉಪಯೋಗಿಸಿಕೊಂಡು ಎಷ್ಟು ಬೇಗ ಕನ್ನಡದ ಜನಪ್ರಿಯ ನಟಿಯರ 'ಲಿಸ್ಟ್' ಸೇರಿಕೊಳ್ಳಲಿದ್ದಾರೆ ಎಂಬುದಷ್ಟೇ ಸದ್ಯದ ಕುತೂಹಲ.
'ಬಿಸ್ಕೆಟ್' ಚಿತ್ರದ ಟ್ಯಾಗ್ ಲೈನ್ 'ಹುಡುಗಿ ಸ್ವೀಟ್...ಹುಡುಗ ಸಾಲ್ಟ್.... ಶಿರ್ಷಿಕೆ ಹಾಗೂ ಈ ಟ್ಯಾಗ್ ಲೈನ್ ನೋಡಿದರೆ ಚಿತ್ರ ಯಾವ ರೀತಿಯ ಕಥೆ ಹೊಂದಿದೆ ಎಂಬುದನ್ನು ಊಹಿಸಬಹುದಾದರೂ ನಿರ್ದೇಶಕ ರವಿತೇಜ ಬಾಯ್ಬಿಡುವ ತನಕ ಕಾಯುವುದೇ ಒಳ್ಳೆಯದು. ಸದ್ಯಕ್ಕಂತೂ ರವಿತೇಜ ಅವರಾಗಲೀ ಅಥವಾ ಚಿತ್ರತಂಡದ ಯಾರೊಬ್ಬರೂ ಕೂಡ ಈ ಚಿತ್ರದ ಕಥೆಯ ಗುಟ್ಟು ಬಿಟ್ಟುಕೊಟ್ಟಿಲ್ಲ. ಈ ಚಿತ್ರವನ್ನು ನಿರ್ಮಿಸಲಿರುವವರು ಕೆ. ರಾಮಸ್ವಾಮಿ.
'ಬಿಸ್ಕೆಟ್' ಚಿತ್ರಕ್ಕೆ ಸಂಗೀತ ನೀಡಲಿರುವವರು ಮಣಿಕಾಂತ್ ಕದ್ರಿ. ಈ ಮೊದಲು ಕನ್ನಡದಲ್ಲಿ 'ಸವಾರಿ', 'ಪೃಥ್ವಿ', 'ಮದುವೆಮನೆ', 'ಕ್ರೇಜಿಲೋಕ' ಸೇರಿದಂತೆ ಹಲವು ಚಿತ್ರಗಳಿಗೆ ಸಂಗೀತ ನೀಡಿರುವ ಇವರು ಬರಲಿರುವ ಜಗ್ಗೇಶ್ ಅಭಿನಯದ 'ಕೂಲ್ ಗಣೇಶ್' ಹಾಗೂ 'ಚಮಕ್' ಹೆಸರಿನ ಇನ್ನೊಂದು ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡ ಸೇರಿದಂತೆ ತಮಿಳು, ತೆಲುಗು ಹಾಗೂ ಹಿಂದಿಯಲ್ಲೂ ಸಂಗೀತ ನೀಡಿರುವ ಹಿರಿಮೆ ಮಣಿಕಾಂತ್ ಕದ್ರಿಯವರಿಗಿದೆ. ಚಿತ್ರಕ್ಕೆ ಜೈ ಆನಂದ್ ಛಾಯಾಗ್ರಹಣವಿದೆ. (ಒನ್ ಇಂಡಿಯಾ ಕನ್ನಡ)