'ಪ್ರೇಮ್ ಅಡ್ಡ' ವಿರುದ್ಧ ತನಿಖೆಗೆ ಕೋರ್ಟ್ ಆದೇಶ
ಪ್ರೇಮ್ ಅಡ್ಡ ಹಾಡಿನ ವಿರುದ್ಧ ವಕೀಲ ಎನ್.ಪಿ.ಅಮೃತೇಶ್ ಅವರು ಖಾಸಗಿ ದೂರು ಸಲ್ಲಿಸಿದ್ದರು. ಅವರ ದೂರನ್ನು ಆಲಿಸಿದ ನ್ಯಾಯಾಲಯ ಚಿತ್ರತಂಡದ ವಿರುದ್ಧ ತನಿಖೆ ನಡೆಸಿ ಏ.18ರೊಳಗೆ ವರದಿ ಸಲ್ಲಿಸುವಂತೆ ಆದೇಶಿಸಿದೆ.
ಈ ಹಾಡಿಗೆ ಕಾರಣಕರ್ತರಾದ ಚಿತ್ರದ ನಿರ್ಮಾಪಕ ಮುರಳಿಕೃಷ್ಣ, ನಿರ್ದೇಶಕ ಮಹೇಶ್ ಬಾಬು, ಗೀತ ರಚನೆಕಾರ ಮಳವಳ್ಳಿ ಸಾಯಿಕೃಷ್ಣ, ಗಾಯಕ ರಾಜು ತಾಳಿಕೋಟೆ, ಸಂಗೀತ ನಿರ್ದೇಶಕ ಹರಿಕೃಷ್ಣ, ಆನಂದ್ ಆಡಿಯೋ ಮಾಲೀಕ ಮೋಹನ್ ಛಾಬ್ರಿಯಾ ಅವರ ವಿರುದ್ಧ ತನಿಖೆಗೆ ಆದೇಶಿಸಲಾಗಿದೆ.
ಈ ಹಿಂದೆಯೇ ದೂರು ದಾಖಲಾಗಿದ್ದರೂ ಕ್ರಮಕೈಗೊಳ್ಳದ ಉಪ್ಪಾರಪೇಟೆ ಪೊಲೀಸರ ಮೇಲೂ ನ್ಯಾಯಾಲಯ ಅಸಮಾಧಾನ ವ್ಯಕ್ತಪಡಿಸಿದೆ. ನಗರ ಪೊಲೀಸ್ ಆಯುಕ್ತ ಜ್ಯೋತಿಪ್ರಕಾಶ್ ಮಿರ್ಜಿ ನೇತೃತ್ವದಲ್ಲಿ ತಂಡ ರಚಿಸಿ ವಿಚಾರಣೆ ನಡೆಸುವಂತೆ ಸೂಚಿಸಿ ವಿಚಾರಣೆಯನ್ನು ಜೂ.6ಕ್ಕೆ ಮುಂದೂಡಿದೆ.
ಪ್ರೇಮ್ ಅಡ್ಡ ಚಿತ್ರದ ಹಾಡಿನಲ್ಲಿ ಮಹಿಳೆಯರು ಮತ್ತು ಹಿಂದೂಧರ್ಮದ ಬಗ್ಗೆ ಅವಹೇಳನಕಾರಿ ಪದಗಳನ್ನು ಬಳಸಲಾಗಿದೆ ಎಂದು ಆರೋಪಿಸಿ ಭಾರತೀಯ ದಂಡ ಸಂಹಿತೆ ಸೆಕ್ಷನ್ ಎ, 260, 294, 499, 503 ಹಾಗೂ 204 ಅಡಿ ದೂರು ದಾಖಲಿಸಲಾಗಿದೆ. (ಏಜೆನ್ಸೀಸ್)


Click it and Unblock the Notifications












