Don't Miss!
- Sports
ಕೋಟಿ ಕೊಟ್ರೂ ಡಕ್ಔಟ್ ಆಗಿದ್ದೀಯಾ ಎಂದು ಐಪಿಎಲ್ ತಂಡದ ಮಾಲೀಕ ಕೆನ್ನೆಗೆ ಹೊಡೆದಿದ್ರು: ರಾಸ್ ಟೇಲರ್!
- News
Breaking: ಕರ್ನಾಟಕದಲ್ಲಿ 2ನೇ ದಿನವೂ ಕೊರೊನಾದಿಂದ 5 ಮಂದಿ ಸಾವು!
- Lifestyle
ಸ್ವಾತಂತ್ರ್ಯದ ಅಮೃತ ಮಹೋತ್ಸಕ್ಕೆ ಸ್ಪೆಷಲ್ ರೆಸಿಪಿ: ತಿರಂಗಾ ಹಲ್ವಾ
- Automobiles
ಇವಿ ಬಸ್ ಸೇವೆಗಾಗಿ 1 ಬಿಲಿಯನ್ ಡಾಲರ್ ಮೌಲ್ಯದ ಸ್ವಿಚ್ ಮೊಬಿಲಿಟಿ ನಿರ್ಮಾಣದ 5 ಸಾವಿರ ಇವಿ ಬಸ್ ನಿಯೋಜನೆ
- Technology
ಬ್ಲೂ ಬೋಲ್ಡ್ N2 ಸ್ಮಾರ್ಟ್ಫೋನ್ ಬಿಡುಗಡೆ! ಏನೆಲ್ಲಾ ಫೀಚರ್ಸ್ ಲಭ್ಯ!
- Finance
ಕೇರಳ ಲಾಟರಿ: 'ಕಾರುಣ್ಯ KR 562' ಟಿಕೆಟ್ ವಿಜೇತರ ಪಟ್ಟಿ ಇಲ್ಲಿದೆ
- Education
CSG Karnataka Recruitment 2022 : 128 ಪ್ರಾಜೆಕ್ಟ್ ಮ್ಯಾನೇಜರ್ ಮತ್ತು ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
- Travel
75ನೇ ಸ್ವಾತೊಂತ್ರೋತ್ಸವವನ್ನು ಸ್ಮರಿಸುತ್ತಾ ಸ್ವಾತಂತ್ರ್ಯ ಹೋರಾಟದೊಡನೆ ಸಂಬಂಧವಿರುವ ಭಾರತದ ಈ ಸ್ಮಾರಕಗಳು
ಗಾಂಧಿನಗರಕ್ಕೆ ಬಲಗಾಲಿಟ್ಟು ಬಂದ ಹೊಸ ವಿವಾದಾತ್ಮಕ ನಟಿ
ವಿವಾದಾತ್ಮಕ ನಟಿಯರೆಂದರೆ ನಮ್ಮ ಸ್ಯಾಂಡಲ್ ವುಡ್ ಚಿತ್ರರಂಗದವರಿಗೆ ಅದೇನ್ ಮೋಹನೋ ಗೊತ್ತಿಲ್ಲ. ಇನ್ನು ವಿವಾದಾತ್ಮಕ ನಟಿ ಮಣಿಯರು ತಮ್ಮ ಚಿತ್ರಗಳಲ್ಲಿ ನಟಿಸಿದರೆ, ಏನೋ ಪ್ಲಸ್ ಪಾಯಿಂಟ್ ಆಗಬಹುದು ಅಥವಾ ಸಿನಿಮಾ ಚೆನ್ನಾಗಿ ಓಡಬಹುದು ಎಂಬ ಭ್ರಮೆಯಿಂದ ಕರೆತರುವುದುಂಟು.
ಇನ್ನು ಬಿಚ್ಚಮ್ಮ ಪೂನಂ ಪಾಂಡೆ, ಶ್ವೇತಾ ಪ್ರಸಾದ್ ಹೀಗೆ ಸಾಕಷ್ಟು ವಿವಾದಗಳನ್ನು ಮೈಮೇಲೆ ಎಳೆದುಕೊಂಡು ಫೇಮಸ್ ಆದ ನಟಿ ಮಣಿಯರು ಕನ್ನಡದಲ್ಲಿ ನಟಿಸಿ ಹೋಗಿದ್ದಾರೆ. ಇದೀಗ ಅದೇ ಸಾಲಿಗೆ ಹೊಸ ಸೇರ್ಪಡೆ ಟಾಲಿವುಡ್ ಬೆಡಗಿ ಖುಷಿ ಮುಖರ್ಜಿ.
ಈ ಗ್ಲಾಮರ್ ಬೊಂಬೆ ಖುಷಿ ಮುಖರ್ಜಿ ಅವರು ತೆಲುಗಿನ 'ದೊಂಗ ಪ್ರೇಮ' ಎಂಬ ಚಿತ್ರದಲ್ಲಿ ನಟಿಸಿದ್ದರು. ಇದೀಗ ಇದೇ ಮೊದಲ ಬಾರಿಗೆ ಸ್ಯಾಂಡಲ್ ವುಡ್ ಕ್ಷೇತ್ರದಲ್ಲಿ ಮಿಂಚಲು ತಯಾರಾಗಿದ್ದಾರೆ.
ಕನ್ನಡದ 'ಕರುಣಾ ನಿಧಿ' ಎಂಬ ಚಿತ್ರದಲ್ಲಿ ನಟಿಸಲು ವಿವಾದಾತ್ಮಕ ನಟಿ ಖುಷಿ ಅವರು ಬಲಗಾಲಿಟ್ಟು ಗಾಂಧಿನಗರಕ್ಕೆ ಕಾಲಿಟ್ಟಿದ್ದು, ಈ ಚಿತ್ರದಲ್ಲಿ ಇವರಿಗೆ ನಾಯಕನಾಗಿ ನಟ ಮೋಹನ್ ಅವರು ಸಾಥ್ ನೀಡಲಿದ್ದಾರೆ. [ಹೊಸ ಚಿತ್ರ 'ಕರುಣಾ-ನಿಧಿ'. ಇದು ಯಾರ ಕಥೆ..?]
ಅಂದಹಾಗೆ ಖುಷಿ ಮುಖರ್ಜಿ ಟಿವಿ ಚಾನಲ್ ಒಂದರ ಲೈವ್ ಶೋನಲ್ಲಿ ಒಬ್ಬ ಹುಡುಗನ ಕಪಾಳಕ್ಕೆ ಹೊಡೆದು, ಧಮಕಿ ಹಾಕಿ ಸಖತ್ ಸುದ್ದಿಯಾಗಿದ್ದರು. ಅದರೆ ಈ ಘಟನೆ ನಡೆದು ಐದು ತಿಂಗಳಾಗಿದ್ದು, ಅವೆಲ್ಲವನ್ನು ಮರೆತು ಈ ನಟಿ ಮಣಿ ಕನ್ನಡ ಇಂಡಸ್ಟ್ರಿಗೆ ನಾಯಕಿಯಾಗಿ ಭರ್ಜರಿ ಎಂಟ್ರಿ ಪಡೆದುಕೊಳ್ಳುತ್ತಿದ್ದಾರೆ.

ಖ್ಯಾತ ನಿರ್ದೇಶಕ ಎ.ಜಿ ಶೇಷಾದ್ರಿ ಅವರು ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳಲಿದ್ದು, ಇದೇ ಶುಕ್ರವಾರದಿಂದ (ನವೆಂಬರ್ 27) ಚಿತ್ರದ ಶೂಟಿಂಗ್ ನಡೆಯಲಿದೆ. ಚಿತ್ರಕ್ಕೆ ಕಥೆಯನ್ನು ಎ.ಜಿ ಶೇಷಾದ್ರಿ ಅವರೇ ಒದಗಿಸಿದ್ದು, ನಟ ಮೋಹನ್ ಅವರು ನಾಯಕನಾಗಿ ಕಾಣಿಸಿಕೊಳ್ಳುವುದರ ಜೊತೆಗೆ ಸಿನಿಮಾಕ್ಕೆ ಚಿತ್ರಕಥೆ ಬರೆಯುತ್ತಿದ್ದಾರೆ.
ಅದೇನೇ ಇರಲಿ ಒಟ್ನಲ್ಲಿ ವಿವಾದಾತ್ಮಕ ನಟಿ ಚಂದನವನಕ್ಕೆ ಕಾಲಿಟ್ಟಿದ್ದು, ಇನ್ನು ಇಲ್ಲಿ ಅದ್ಯಾವ ಅವಾಂತರ ಎಬ್ಬಿಸ್ತಾರೆ ಅಂತ ಕಾದು ನೋಡೋಣ.